ಬುದ್ಧನಿಂದ ಸಂವಿಧಾನತಕ ಸರ್ವೋದಯ ಇದೆ: ಡಾ.ಹೋಳ್ಕರ್

ಬುದ್ಧನಿಂದ ಸಂವಿಧಾನತಕ ಸರ್ವೋದಯ ಇದೆ: ಡಾ.ಹೋಳ್ಕರ್
ಹುಲಸೂರು:ಚಿಂತಕರಾದ ಡಾ.ಶ್ರೀಮಂತ ಹೊಳ್ಕರ್ ಅವರು ಧರ್ಮ- ಸಂಸ್ಕೃತಿ ಸರ್ವೋದಯ ಒಂದು ಧರ್ಮ ಮಾತ್ರ ಸರ್ವೋದಯ ಹೇಳಲಿಲ್ಲ.ಬುದ್ಧನಿಂದ ಪ್ರಾರಂಭವಾದ ಸರ್ವೋದಯ ಶರಣರು,ದಾಸರ, ಧರ್ಮ ಹೇಳಿದ್ದನ್ನು ಸಂವಿಧಾನ ಮಾರ್ಗ ಅಂಬೇಡ್ಕರ್ ಮೂಲಕ ಅರಿಯಬೇಕಾಗಿದೆ. ಬದುಕುವ ಅವಕಾಶ ಹೆಣ್ಣಿಗೆ ಕೊಟ್ಟಿದೆ.ಸಮಾನತೆ ಅವಕಾಶ ಕೊಟ್ಟ ಸೌಹಾರ್ದತೆ ಮಹಾನ್ ಜ್ಞಾನಿಗಳು ಬುದ್ಧಬಸವ ಅಂಬೇಡ್ಕರ್ ರಿಂದ ಬಂದ ನೆಲವಾಗಿದೆ ಎಂದರು.
ಸರ್ವೋದಯ ಸಾಹಿತ್ಯ ಸಮ್ಮೇಳನದ ಗೋಷ್ಠಿ- ೧ ರಲ್ಲಿ
ಧರ್ಮ-ಸಮಾಜ-ಸಂಸ್ಕತಿ ಸರ್ವೋದಯ ವಿಷಯ ಕುರಿತು ಮಾತ ನಾಡಿದರು.
ಡಾ.ಚನ್ನವೀರ ಶಿವಾಚಾರ್ಯರು ಧಾರ್ಮಿಕ, ಸಾಮಾಜಿಕ ಕೊಡುಗೆ ಜೊತೆಗೆ ಕನ್ನಡ ಶಾಲೆಯನ್ನು ತೆರೆಯುವ ಮೂಲಕ ಕನ್ನಡ ಸ್ವಾಮಿ- ಕನ್ನಡ ಮಠಾಧಿಪತಿಗಳಲ್ಲಿ ಒಬ್ಬರು. ದಾಸೋಹ,ಪುಸ್ತಕ, ಸಾಹಿತ್ಯ ದಾಸೋಹ ಮೂಲಕ ನೈಜತೆ ತಂದು.ಪುಸ್ತಕ ಸಂಸ್ಕೃತಿ ಬೆಳೆಸಿದ ಸಾಹಿತಿ ಯಾದವರು ಎಂದು ಚಿಂಚೋಳಿ ಸಾಹಿತಿ ಬಸವರಾಜ ಐನೋಳಿ ಮಾತ ನುಡಿದರು
ಸರಕಾರಿ ಸ್ವಾಯತ್ತ ಕಾಲೇಜಿನ ಪ್ರಾಧ್ಯಾಪಕ ಡಾ.ನಾಗಪ್ಪ ಗೋಗಿ ಮಾತನಾಡಿ ಸಾಹಿತ್ಯ ಸಮಾಜದ ಪ್ರತಿಬಿಂಬ ಸರ್ವ ಸಮಾನತೆ ಜೀವನ ಕಲಿಸಿದ ಸಾಹಿತ್ಯ ಮೂಲಕ ಸರ್ವೋದಯ ಕೊಟ್ಟ ಕನ್ನಡ ಕೊಡುಗೆ ಅಪಾರವೆಂದರು.
ಚಿಂತಕರಾದ ಡಾ.ಶ್ರೀಮಂತ ಹೊಳ್ಕರ್ ಅವರು ಧರ್ಮ- ಸಂಸ್ಕೃತಿ ಸರ್ವೋದಯ ಒಂದು ಧರ್ಮ ಮಾತ್ರ ಸರ್ವೋದಯ ಹೇಳಲಿಲ್ಲ.ಬುದ್ಧನಿಂದ ಪ್ರಾರಂಭವಾದ ಸರ್ವೋದಯ ಶರಣರು,ದಾಸರ, ಧರ್ಮ ಹೇಳಿದ್ದನ್ನು ಸಂವಿಧಾನ ಮಾರ್ಗ ಅಂಬೇಡ್ಕರ್ ಮೂಲಕ ಅರಿಯಬೇ ಜಾಗಿದೆ. ಅಧ್ಯಕ್ಷತೆಯನ್ನು ಸಾಹಿತಿ ಡಾ.ಜಯದೇವಿ ಗಾಯಕವಾಡ ವಹಿಸಿ ಮಾತನಾಡಿದರು.
ಮಾದಾರ ಚನ್ನಯ್ಯನ ಅರಿವಿನ ಪೀಠದ ಚಿತ್ರಮ್ಮ ತಾಯಿ ನೇತೃತ್ವ ವಹಿಸಿದರು.ಸಂಜೀವ ಖೇಲೆ ಸ್ವಾಗತಿಸಿದರು ಡಾ.ರಾಜಕುಮಾರ ಮಾಳಗೆ ನಿರೂಪಿಸಿದರು ಡಾ.ಸಿದ್ದಪ್ಪ ಹೊಸಮನಿ ವಂದಿಸಿದರು.