ಪ್ರಕಾಶ್ ಕೋಟೆ ಹುಟ್ಟುಹಬ್ಬದ ಸಂಭ್ರಮ – ವಿದ್ಯಾರ್ಥಿಗಳಿಗೆ ನೋಟ್ಬುಕ್, ಪೆನ್ ವಿತರಣೆ
ಪ್ರಕಾಶ್ ಕೋಟೆ ಹುಟ್ಟುಹಬ್ಬದ ಸಂಭ್ರಮ – ವಿದ್ಯಾರ್ಥಿಗಳಿಗೆ ನೋಟ್ಬುಕ್, ಪೆನ್ ವಿತರಣೆ
ಆಳಂದ: ಚಿತಲಿ ಗ್ರಾಮದ ಯುವ ಮುಖಂಡ ಪ್ರಕಾಶ್ ಕೋಟೆ ಅವರ ಹುಟ್ಟುಹಬ್ಬವನ್ನು ಈ ವರ್ಷವೂ ಸಮಾಜಮುಖಿ ಚಟುವಟಿಕೆಯಿಂದ ಸರಳವಾಗಿ ಆಚರಿಸಲಾಯಿತು. ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆ ಚಿತಲಿಯಲ್ಲಿ ವಿದ್ಯಾರ್ಥಿಗಳಿಗೆ ನೋಟ್ ಬುಕ್ ಮತ್ತು ಪೆನ್ಗಳನ್ನು ವಿತರಿಸುವ ಮೂಲಕ ಹುಟ್ಟುಹಬ್ಬಕ್ಕೆ ಸಾರ್ಥಕತೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕರಿಗೆ ಹಾಗೂ B.Ed. ತರಬೇತಿ ವಿದ್ಯಾರ್ಥಿಗಳಿಗೆ ಸನ್ಮಾನ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ವಕೀಲರಾದ ಶ್ರೀಮಂತ ನಡಗೇರಿ,ದತ್ತಾ ನಡಗೇರಿ,ತಾನಾಜಿ ಲವಟೆ,ಆಕಾಶ್ ದೇಗಾವ್,ನಾಗರಾಜ ಕೋಟೆ,ಯುವರಾಜ,ಸಲಿಂ ನಧಾಫ,ಸತೀಶ,ಸಿದ್ಧಲಿಂಗ ಸೇರಿದಂತೆ ಗ್ರಾಮದ ಹಲವು ಗಣ್ಯರು ಉಪಸ್ಥಿತರಿದ್ದರು.
ವರದಿ: ಡಾ. ಅವಿನಾಶ ಎಸ್. ದೇವನೂರ
