ಬೆಳೆ ಪರಿಹಾರ , ಬಾಕಿ ಬೆಳೆ ವಿಮೆ , ರೈತರ ಸಾಲ ಮನ್ನಕ್ಕಾಗಿ ಆಗ್ರಹ

ಬೆಳೆ ಪರಿಹಾರ , ಬಾಕಿ ಬೆಳೆ ವಿಮೆ , ರೈತರ ಸಾಲ ಮನ್ನಕ್ಕಾಗಿ ಆಗ್ರಹ
ಕಲಬುರಗಿ: ನಗರದ ಜಗತ್ ವೃತ್ತದಲ್ಲಿ ಕೆಪಿಆರ್ಎಸ್ ಸಂಘಟನೆಯಿಂದ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದಾದ ಬೆಳೆ ನಷ್ಟ ಸಮೀಕ್ಷೆ ಮಾಡಿ ಎಕರೆಗೆ ಕನಿಷ್ಟ 25ಸಾವಿರ ಪರಿಹಾರ ನೀಡುವುದರ ಜೊತೆಗೆ ಹಿಂದಿನ ಬಾಕಿ ಬೆಳೆ ವಿಮೆ ಪಡೆಯಲು ಅಗತ್ಯ ಕ್ರಮ ವಹಿಸಬೇಕು ರೈತರ ಖಾಸಗಿ ಸೇರಿ ಎಲ್ಲ ಸಾಲ ಮನ್ನಾ ಮಾಡಿ ಉಚಿತ ಬೀಜ, ಗೊಬ್ಬರ, ಕ್ರಿಮಿನಾಶಕ ಒದಗಿಸಬೇಕೆಂದು ಆಗ್ರಹಿಸಿ ರೈತರು ಸಾಮೂಹಿಕ ಧರಣಿ ಸತ್ಯಾಗ್ರಹ ನಡೆಸಿದರು. ಈ ಸಂದರ್ಭದಲ್ಲಿ ಶಿವಶರಣ ನುಳೆಗಾಂವ, ಶರಣಬಸಪ್ಪ ಮಮಶೆಟ್ಟಿ, ಅಲ್ತಾಫ ಇನಾಮಂದಾರ, ಭೀಮಶೆಟ್ಟಿ ಯಂಪಳ್ಳಿ ಸೇರಿದಂತೆ ಅನೇಕರ ರೈತರು ಮಹಿಳೆಯರಿದ್ದರು
.