ಕರ್ನಾಟಕ ರಾಜ್ಯ ಎನ್‌ಪಿಎಸ್ ನೌಕರರ ಸಂಘದ ವತಿಯಿಂದ ಇಂದು'ಕರಾಳ ದಿನ' ಆಚರಣೆ

ಕರ್ನಾಟಕ ರಾಜ್ಯ ಎನ್‌ಪಿಎಸ್ ನೌಕರರ ಸಂಘದ ವತಿಯಿಂದ ಇಂದು'ಕರಾಳ ದಿನ' ಆಚರಣೆ

ಕರ್ನಾಟಕ ರಾಜ್ಯ ಎನ್‌ಪಿಎಸ್ ನೌಕರರ ಸಂಘದ ವತಿಯಿಂದ ಇಂದು'ಕರಾಳ ದಿನ' ಆಚರಣೆ

ಬೆಂಗಳೂರು: ಏಪ್ರಿಲ್ 1, 2025 ರಿಂದ ಕೇಂದ್ರ ಸರ್ಕಾರ ತನ್ನ ನೌಕರರಿಗೆ ಹೊಸ ಪಿಂಚಣಿ ಯೋಜನೆ (ಯುಪಿಎಸ್) ಜಾರಿಗೊಳಿಸುತ್ತಿರುವುದಕ್ಕೆ ವಿರೋಧವಾಗಿ, ಕರ್ನಾಟಕ ರಾಜ್ಯ ಎನ್‌ಪಿಎಸ್ ನೌಕರರ ಸಂಘ (KSNPSIE) ಮತ್ತು ನ್ಯಾಷನಲ್ ಓಲ್ಡ್ ಪಿಂಶನ್ ರಿಸ್ಟೋರ್ ಯೂನೈಟೆಡ್ ಫ್ರಂಟ್ (NOPRU) ಏಪ್ರಿಲ್ 1ರಂದು 'ಕರಾಳ ದಿನ' ಆಚರಿಸುತ್ತಿದೆ.

ಈ ಹೊಸ ಯೋಜನೆಯಿಂದ ನೌಕರರ ಭವಿಷ್ಯ ಅಸ್ಥಿರವಾಗುವ ಭೀತಿ ಉಂಟಾಗಿದೆ ಎಂದು ಸಂಘದ ನಾಯಕರು ತಿಳಿಸಿದರು. ಕೇಂದ್ರ ಸರ್ಕಾರದ ಈ ನಿರ್ಧಾರವನ್ನು ಖಂಡಿಸುತ್ತಾ, ಸಂಘಟನೆಯ ಪ್ರತಿನಿಧಿಗಳು ದೇಶವ್ಯಾಪಿ ಪ್ರತಿಭಟನೆಗೆ ಕರೆ ನೀಡಿದ್ದಾರೆ.

ಈ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಎನ್‌ಪಿಎಸ್ ನೌಕರರ ಸಂಘದ ಗೌರವಾಧ್ಯಕ್ಷ ರಮೇಶ್ ಸಂಗಾ, ರಾಜ್ಯಧ್ಯಕ್ಷ ನಾಗನಗೌಡ ಎಂ.ಎ, ಹಾಗೂ ಪ್ರಮುಖ ಮುಖಂಡರು ರುದ್ರಪ್ಪ, ಚಂದ್ರಶೇಖರ್, ಮತ್ತು ಬಿ.ಪಿ. ಸಿಂಗ್ ರಾವತ್ ಭಾಗವಹಿಸಲಿದ್ದಾರೆ.

ಸಂಘದ ನಾಯಕರು, ಹೊಸ ಪಿಂಚಣಿ ನೀತಿಯ ಪರಿಣಾಮಗಳ ಕುರಿತು ಸಾರ್ವಜನಿಕ ಜಾಗೃತಿ ಮೂಡಿಸಲು ಪ್ರಚಾರ ನಡೆಸಲಿದ್ದಾರೆ. "ಪಾಳುಪಿಚ್ಚು ದಾರಿ ಅನುಸರಿಸುವ ಬದಲು, ಹಳೆಯ ಪಿಂಚಣಿ ಯೋಜನೆಯನ್ನು ಪುನಃ ಜಾರಿಗೊಳಿಸಬೇಕು" ಎಂಬ ನಿಲುವನ್ನು ಅವರು ಪುನರಾಯಿಸಿದ್ದರು.

ಈ ಪ್ರತಿಭಟನೆಯ ಮೂಲಕ, ಕೇಂದ್ರ ಸರ್ಕಾರದ ಹೊಸ ನೀತಿ ಬಗ್ಗೆ ಪುನರ್ವಿಚಾರಿಸಲು ಒತ್ತಾಯಿಸಲಾಗುವುದು. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕೂಡ ಈ ಪ್ರಯತ್ನಕ್ಕೆ ಬೆಂಬಲ ವ್ಯಕ್ತವಾಗುತ್ತಿದೆ.

-KKP ನ್ಯೂಸ್

ಸಂಪಾದಕರು ಶರಣಗೌಡ ಪಾಟೀಲ ಪಾಳಾ, ಕಲಬುರಗಿ