ಸಚಿವ ಶಿವರಾಜ್ ತಂಗಡಗಿ ಜನ್ಮದಿನ ನಿಮಿತ್ತ ಅನ್ನದಾಸೋಹ

ಸಚಿವ ಶಿವರಾಜ್ ತಂಗಡಗಿ ಜನ್ಮದಿನ ನಿಮಿತ್ತ ಅನ್ನದಾಸೋಹ

ಸಚಿವ ಶಿವರಾಜ್ ತಂಗಡಗಿ ಜನ್ಮದಿನ ನಿಮಿತ್ತ ಅನ್ನದಾಸೋಹ

ಕಲಬುರಗಿ: ಬಿದ್ದಾಪೂರ ಕಾಲೋನಿಯಲ್ಲಿರುವ ನಿರಾಶ್ರಿತ ಪರಿಹಾರ ಕೇಂದ್ರದಲ್ಲಿ ಕರ್ನಾಟಕ ಸರ್ಕಾರದ ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅವರ ಜನ್ಮದಿನ ನಿಮಿತ್ತ ಕ್ರಾಂತಿವೀರ ಬೆಳವಡಿ ವಡ್ಡರ ಯಲ್ಲಣ್ಣ ಸೇನೆ ಸಂಸ್ಥಾಪಕ ಅಧ್ಯಕ್ಷ ಜಿ.ಶಿವಶಂಕರ ನೇತೃತ್ವದಲ್ಲಿ ನಿರಾಶ್ರಿತರೋಂದಿಗೆ ಕೇಕ್ ಕತ್ತರಿಸಿ, ಅನ್ನದಾಸೋಹ ಮಾಡಲಾಯಿತು. 

ಸೇನೆ ಸಂಸ್ಥಾಪಕ ಅಧ್ಯಕ್ಷರಾದ ಜಿ.ಶಿವಶಂಕರ ಹಾಗೂ ಕಾರ್ಯದರ್ಶಿ ಶ್ರೀಕೃಷ್ಣ ಕುಶಾಳಕರ ಅವರು ಮಾತನಾಡುತ್ತಾ ಸಚಿವ ಶಿವರಾಜ್ ತಂಗಡಗಿ ಅವರು, ರಾಜ್ಯ ಸಚಿವ ಸಂಪುಟದಲ್ಲಿ ಪ್ರಭಾವಿ ಸಚಿವರಾಗಿ ಅನೇಕ ಜನಪರ ಕಾರ್ಯಗಳನ್ನು ಮಾಡುವ ಮೂಲಕ ರಾಜ್ಯದಾದ್ಯಂತ ಉತ್ತಮ ಕಾರ್ಯ ಮಾಡುವ ಮೂಲಕ ಮನೆಮಾತಾಗಿದ್ದು, ಅವರ ಜನ್ಮದಿನಕ್ಕೆ ದೇವರು ಅವರಿಗೆ ಒಳ್ಳೆಯ ಆಯಸ್ಸು, ಸುಖ, ಶಾಂತಿ ನೀಡಿ ಸದಾ ಕಾಪಾಡುವುದರ ಜೊತಗೆ ಇನ್ನಷ್ಟು ಜನಸೇವೆ ಮಾಡುವ ಶಕ್ತಿ ನೀಡಲಿ ಎಂದು ಶುಭ ಹಾರೈಸಿದರು.

ಈ ಸಂಧರ್ಭದಲ್ಲಿವ ಭೋವಿ ಸಮಾಜದ ಕಾಳಗಿ ತಾಲೂಕ ಅಧ್ಯಕ್ಷ ಲಕ್ಷ್ಮಣ್ ಕೊಡ್ಲಿ, ಮುಖಂಡರಾದ ಸಂತೋಷ್ ಬಬಲಾದ, ಶಂಕರ ಫರತಾಬಾದ, ನಾಗೇಶ ಗೊಬ್ಬುರ, ಮೌನೇಶ್ ಸಾತಕೆಡ, ಅರ್ಜುನ್ ಬೇಲೂರು, ಶುಭಂ ಪವರ್, ಬ್ರಹ್ಮ, ಕಿರಣ್, ತಿಮ್ಮಣ್ಣ ಸೇರಿದಂತೆ ಇತರರು ಉಪಸ್ಥಿತರಿದ್ದರು

.