ಕಂದ ಪ್ರಶಸ್ತಿಗಾಗಿ ಕೃತಿಗಳ ಆಹ್ವಾನ
ಕಂದ ಪ್ರಶಸ್ತಿಗಾಗಿ ಕೃತಿಗಳ ಆಹ್ವಾನ
ಸೇಡಂ: ಕೊಡೇಕಲ್ಲ ಚನ್ನಬಸವಣ್ಣ ಪ್ರಕಾಶನ, ಹಣಮನಹಳ್ಳಿ (ತಾಲೂಕು: ಸೇಡಂ, ಜಿಲ್ಲೆ: ಕಲಬುರಗಿ) ವತಿಯಿಂದ ನೀಡಲಾಗುವ ‘ಕಂದ ಪ್ರಶಸ್ತಿ’ಗಾಗಿ ಕನ್ನಡ ಸಾಹಿತ್ಯದ ಕಥೆ ಮತ್ತು ಕಾದಂಬರಿ ಪ್ರಕಾರದ 2024 ಮತ್ತು 2025ನೇ ಸಾಲಿನಲ್ಲಿ ಪ್ರಕಟವಾದ ಕೃತಿಗಳನ್ನು ಆಹ್ವಾನಿಸಲಾಗಿದೆ.
ಕು. ರಾಘವೇಂದ್ರ ಎಂ.ಹೆಚ್. ಹಣಮನಹಳ್ಳಿಯವರ ಜನ್ಮ ದಿನಾಚರಣೆಯ ನಿಮಿತ್ತ 10-02-2026 ರಂದು ಸೇಡಂ ಪಟ್ಟಣದಲ್ಲಿ ನಡೆಯಲಿರುವ ಸರಳ ಸಮಾರಂಭದ ಅಂಗವಾಗಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಕಂದ ಪ್ರಶಸ್ತಿಯ ಸಂಚಾಲಕರಾದ ಮುರಗೆಪ್ಪ ಆರ್.ಎಚ್. ಹಣಮನಹಳ್ಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪಿ.ಎಚ್.ಡಿ. ಕೃತಿಗಳನ್ನು ಪರಿಗಣಿಸಲಾಗುವುದಿಲ್ಲ. ಆಸಕ್ತರು ತಮ್ಮ ಪುಸ್ತಕದ ಮೂರು ಪ್ರತಿಗಳನ್ನು 31-12-2025ರ ಒಳಗೆ ಕಳುಹಿಸಬಹುದು.
ಪುಸ್ತಕ ಕಳುಹಿಸಬೇಕಾದ ವಿಳಾಸ:
ಮುರಗೆಪ್ಪ ತಂದೆ ರೇವಣಸಿದ್ದಪ್ಪ ಹಡಪದ
ಮು: ಹಣಮನಹಳ್ಳಿ
ಪೋಸ್ಟ್: ಸಿಂಧನಮಡು
ತಾಲೂಕಾ: ಸೇಡಂ
ಜಿಲ್ಲಾ: ಕಲಬುರಗಿ
ಪಿನ್: 585222
ಮೊಬೈಲ್: 9900101903
ಕೊಡೇಕಲ್ಲ ಚನ್ನಬಸವಣ್ಣ ಪ್ರಕಾಶನ, ಹಣಮನಹಳ್ಳಿ
