ಹೃದಯವಂತ ಹೃದಯ ವೈದ್ಯ ಡಾ. ಈರಣ್ಣ ಹಿರಾಪೂರ

ಹೃದಯವಂತ ಹೃದಯ ವೈದ್ಯ ಡಾ. ಈರಣ್ಣ ಹಿರಾಪೂರ

ಹೃದಯವಂತ ಹೃದಯ ವೈದ್ಯ ಡಾ. ಈರಣ್ಣ ಹಿರಾಪೂರ

ಪೂರ್ವ ಪ್ರಾಥಮಿಕ ಶಿಕ್ಷಣ ಪಡೆದದ್ದು ಸರ್ಕಾರಿ ಪ್ರಾಥಮಿಕ ಕನ್ನಡ ಮಾಧ್ಯಮ ಶಾಲೆಯಲ್ಲಿ.ಗ್ರಾಮೀಣ ಪ್ರದೇಶದ ಒಕ್ಕಲುತನ ಕುಟುಂಬ ಅವರದು . ಬಾಲ್ಯದಿಂದಲೇ ಪ್ರತಿಭಾವಂತರಾಗಿದ್ದ ಡಾಕ್ಟರ್ ಈರಣ್ಣ ಅವರು ವಿಜಯಪುರದ ಸೈನಿಕ ಶಾಲೆಗೆ ಆರನೇ ತರಗತಿಗಯ ಅಧ್ಯಯನಕ್ಕೆ ಆಯ್ಕೆಯಾದರು . ಸತತ ಕಠಿಣ ಪರಿಶ್ರಮವೇ ಅವರ ಬಾಳು ಬೆಳಗಲು ಕಾರಣವಾಯಿತು . ಸರ್ಕಾರಿ ಕೋಟಾದಲ್ಲಿ ಎಂಬಿಬಿಎಸ್ ಮತ್ತು ಎಂಡಿ ಕಾರ್ಡಿಯಾಲಜಿಸ್ಟ್ ಪದವಿಗಳನ್ನು ಪಡೆದುಕೊಂಡರು .ನೇತ್ರ ತಜ್ಞರಾದ ಡಾ. ರಾಜೇಶ್ವರಿ ಅವರ ಕೈ ಹಿಡಿದ ತುಂಬ ಜೀವನ ಅವರದು .

ಹಳ್ಳಿ ಹಳ್ಳಿಗಳಲ್ಲಿಯೂ ಹೃದಯ ಆರೋಗ್ಯ ತಪಾಸಣೆಯ ಉಚಿತ ಕ್ಯಾಂಪುಗಳನ್ನು ಮಾಡುವ ಮೂಲಕ ಜನಸೇವೆ ಮಾಡಿದ್ದಾರೆ.ಕಲ್ಯಾಣ ಕರ್ನಾಟಕ ಅಲ್ಲದೆ ಇಡೀ ಕರ್ನಾಟಕದಲ್ಲಿ ಅವರು ಹೆಸರುವಾಸಿಯಾಗಿದ್ದಾರೆ . ದೀನ ದಲಿತರು ಬಡವರು ಆಸ್ಪತ್ರೆಗೆ ಬಂದರೆ ಉಚಿತ ಸೇವೆ ಮಾಡುತ್ತಾರೆ . ಹೃದಯ ಆರೋಗ್ಯದ ಕುರಿತು ಅಂತರಾಷ್ಟ್ರೀಯ ಮಟ್ಟದ ಸಂಶೋಧನಾತ್ಮಕ ಪ್ರಬಂಧ ಮಂಡಿಸಿ ವಿಶ್ವ ಖ್ಯಾತಿ  ಪಡೆದಿದ್ದಾರೆ . ಅಹಂಕಾರವಿಲ್ಲದ ಸರಳ ಸಜ್ಜನಿಕೆ ವ್ಯಕ್ತಿತ್ವ ಅವರದು . ಗೆಳೆತನ ಮಾನವೀಯ ಸಂಬಂಧಗಳಿಗೆ ಹೆಚ್ಚು ಬೆಲೆ ಕೊಡುವ ಸ್ವಭಾವ . ಸುಭಾಷ್ ಚಂದ್ರ ಪಾಟೀಲ್ ಸ್ಮಾರಕ ಜನಕಲ್ಯಾಣ ಟ್ರಸ್ಟ್ ನ ಗೆಳೆಯರ ಬಳಗ ಡಾ. ಆನಂದ ಸಿದ್ದಾಮಣಿ , ಶರಣಗೌಡ ಪಾಟೀಲ ಪಾಳ, ಡಾ. ವೀರಶೆಟ್ಟಿ ಗಾರಂಪಳ್ಳಿ , ಸಂತೋಷ ಬೋರೋಟಿ , ಅಂಬರಾಯ ಕೋಣೆ ಅವರು ವೈದ್ಯ ದಿನಾಚರಣೆಯ ಅಂಗವಾಗಿ ಅವರನ್ನು ಗೌರವಿಸಿ ಸನ್ಮಾನಿಸಿದರು .