ಸಾಹಿತಿಗಳ ಬರಹ ಹಾದಿ ತಪ್ಪುತ್ತಿವೆ- ಡಾ.ಪೆರ್ಲ ಕಳವಳ

ಸಾಹಿತಿಗಳ ಬರಹ ಹಾದಿ ತಪ್ಪುತ್ತಿವೆ- ಡಾ.ಪೆರ್ಲ ಕಳವಳ

ಅಕಾಡೆಮಿ ಚಕೋರದಿಂದ ಭಾವೈಕ್ಯತೆ ಕವಿಗೋ಼ಷ್ಠಿ

ಸಾಹಿತಿಗಳ ಬರಹ ಹಾದಿ ತಪ್ಪುತ್ತಿವೆ- ಡಾ.ಪೆರ್ಲ ಕಳವಳ

ಕಲಬುರಗಿ:

ಇಂದು ಕೆಲವು ಸಾಹಿತಿಗಳ ಬರಹ ಹಾದಿ ತಪ್ಪಿವೆ.ಒಂದು ಸಮುದಾಯ ಓಲೈಕೈಗಾಗಿ ಜಾತಿ,ಮತ,ಧರ್ಮಗಳ ಹೆಸರಲ್ಲಿ ಅಧಃಪತನ ನಡೆಯುತ್ತಿದೆ,ಇದು ತಪ್ಪು. ಸಾಹಿತಿ,ವಿದ್ವಾಂಸನಾದವನು ಸಮಾಜ ಅವಿಭಾಜ್ಯ ಅಂಗ ಭಾವೈಕ್ಯತೆ, ಸಮನ್ವಯತೆ ಹೊಂದುವ ನಮ್ಮ ಪರಂಪರೆ ಅರಿಯಲು ವಿಶಾಲ ದೃಷ್ಟಿ ಹೊಂದುವುದಿಲ್ಲವೇಕೆ ಎಂದು ಆಕಾಶವಾಣಿಯ ನಿವೃತ್ತ ಹಿರಿಯ ಕಾರ್ಯಕ್ರಮ ನಿರ್ವಹಣಾಧಿಕಾರಿ ಹಾಗೂ ಸಾಹಿತಿ ಡಾ.ಸದಾನಂದ ಪೆರ್ಲ ಸಾಹಿತಿಗಳನ್ನು ಪ್ರಶ್ನಿಸಿದರು.

         ಕೃಷ್ಣಾ ನಗರದ ವೇಣುವನದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಚಕೋರ ಸಾಹಿತ್ಯ ವೇದಿಕೆ ಮತ್ತು ರಾಮಪ್ಪ ಗೋನಾಲ ಸಾಹಿತ್ಯ, ಸಾಂಸ್ಕೃತಿಕ ಪ್ರತಿಷ್ಠಾನ ಸಹಯೋಗ ದೊಂದಿಗೆ ಏರ್ಪಡಿಸಿದ ಯುಗಾದಿ-ರಂಜಾನ್ ಹಬ್ಬದ ಪ್ರಯುಕ್ತ ಏರ್ಪಡಿಸಿದ ಭಾವೈಕ್ಯತೆ ಕವಿಗೋಷ್ಠಿಯ ಮುಖ್ಯ ಅತಿಥಿಯಾಗಿ ಮಾತನಾಡಿ ಒಂದು ಕವಿತೆ ಕವಿ ಬರೆದು ಓದಿ ದರೆ,ಪ್ರಕಟವಾದರೆ ಅದು ಜನರ ಸ್ವತ್ತಾಗುತ್ತದೆ. ಕವಿಗಳದ್ದಾಗದು ಭಾರತೀಯ ಸನಾತನ ಪರಂಪರೆ ಅರಿತುಕೊಳ್ಳುವು ದು ಒಳಿತು, ಕವಿಗಳು ಹೃದಯಕ್ಕೆ ಹತ್ತಿರವಾದ ಮನಸ್ಸು ಕಟ್ಟುವ ಕಾವ್ಯ ರಚಿಸಲು ಸಲಹೆ ನೀಡಿದರು.

       ಕಾವ್ಯಕ್ಕೆ ಯಶಸ್ವಿ ಆದಾಗ ಶಕ್ತಿ ತುಂಬುತ್ತದೆ.ಕೇವಲ ಪ್ರೀತಿ,ಪ್ರೇಮದ ಕುರಿತು ಮಾತ್ರ ಬರೆಯದೇ ಸಮಾಜ ಮುಖಿಯಾದ ಹಾಗು ಸಮಾಜದಲ್ಲಿ ನಡೆಯುವ ಭ್ರಷ್ಟಾಚಾರ, ಅನೀತಿ ಮುಂತಾದನ್ಯೂನ್ಯ ತೆಗಳ ಕುರಿತು ಕೂಡ ಕವಿಗಳು ಕಾವ್ಯದಲ್ಲಿ ಎತ್ತಿ ಹೇಳಬೇಕು ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಹನುಮಂತರಾವ ಬಿ.ದೊಡ್ಡಮನಿ ಕವಿಗೋಷ್ಠಿಯನ್ನು ಉದ್ಘಾಟಿಸಿ ಕರೆ ನೀಡಿದರು.

    ಕವಿಗಳು ಸಹೃದಯರ ಅಂತರಂಗದ ಭಾವನೆಗಳನ್ನು ಅಭಿವ್ಯಕ್ತಿಸುವ ದಿಟ್ಟ ನಿಲುವು ಹೊಂದಬೇಕು. ಮುಖ ನೋಡಿ ವಿಮರ್ಶೆ ಮಾಡಬಾರದು.ವಿಶ್ವವಿದ್ಯಾಲಯದ ಪ್ರಾಧ್ಯಾಪಕರು, ಪಿಎಚ್.ಡಿಗಳು ದುಸ್ಥಿಗೆ ಬಂದಿವೆ ಎಂದು ಕಳವಳ ವ್ಯಕ್ತಪಡಿಸಿದರು.

    ‌‌‌ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಸಿದ್ಧರಾಮ ಹೊನ್ಕಲ್ ಮಾತನಾಡಿ ಜನರ ನೋವಿಗೆ ಮಿಡಿಯುವ‌ ಪ್ರಾಣ ಮಿತ್ರದಂತೆ ಕವಿಗಳು ಕೆಲಸ ಮಾಡಬೇಕೆಂದರು.ಅಕಾಡೆಮಿಯ ಉದ್ದೇಶ ಹಾಗು ಧ್ಯೇಯ ಕುರಿತಾಗಿ ವಿವರಿಸಿದರು.

   ವಿವಿಧ ಕ್ಷೇತ್ರದ ಸಾಧಕರಾದ ಡಾ.ಬಸವರಾಜ ಕೊನೇಕ್, ಡಾ.ಜಯದೇವಿ ಗಾಯಕವಾಡ,ಈಶ್ವರಪ್ಪ ಕಟ್ಟಿಮನಿ, ಡಾ.ಹನುಮಂತ ರಾವ್ ದೊಡ್ಡಮನಿ,ಡಾ.ಚಂದ್ರಕಲಾ ಬಿದರಿ, ಡಾ.ಸಿದ್ಧರಾಮ ಹೊನ್ಕಲ್, ಅವರನ್ನು ರಾಮಪ್ಪ ಗೋನಾಲ ಪ್ರತಿಷ್ಠಾನದಿಂದ ವಿಶೇಷವಾಗಿ ಸನ್ಮಾನಿಸಲಾಯಿತು.

                     ಕಾವ್ಯಗಳು ಸಮಕಾಲೀನ ಸಮಸ್ಯೆಗಳಿಗೆ ಮುಖಾಮುಖಿಯಾಗಬೇಕು. ಕವಿಯಾದವನು ತನ್ನ ಸುತ್ತಲಿನ ಜನರೊಂದಿಗೆ ಬೆರೆತ ಜೀವನಕ್ರಮಗಳನ್ನು ತನ್ನ ಕಾವ್ಯದಲ್ಲಿ ಅಡಕಗೊಳಿಸುತ್ತಾನೆ. ಕವಿ ಇಲ್ಲವಾದರೂ ಅವನ ಕಾವ್ಯವು ತಲೆತಲಾಂತರ ಉಳಿದುಕೊಳ್ಳುತ್ತದೆ. ಪಂಪ ಇಂದಿಗೂ ನೆನಪಿಗೆ ಉಳಿದಿರುವುದು ಅವನ ಕಾವ್ಯದ ಮೂಲಕನೆ. ಅಂದು ಕಾವ್ಯವು ಕೆಲವೇ ಕೆಲವು ಜನರು ರಚಿಸಿ ಕೆಲವೇ ಜನರ ಮಧ್ಯ ವಾಚಿಸಲಾಗುತ್ತಿತ್ತು ಆದರ ಇಂದು ಜನಸಾಮಾನ್ಯರು ಕಾವ್ಯ ರಚಿಸುತ್ತಿದ್ದಾರೆ. ಏನು ಓದು ಬರಹ ಬಾರದ ಜನರು ಸಹ ಕಾವ್ಯ ವಾಚನ ಕೇಳಬಹುದಾಗಿದೆ. ಆದರೆ ಜನರು ಕಾವ್ಯ ಕೇಳಲು ಬಾರದಿರುವುದು ಬೇಸರದ ಸಂಗತಿಯಾಗಿದೆ. ಇಂದು ಸುಮಾರು ೩೦ಕ್ಕಿಂತಲೂ ಹೆಚ್ಚು ಕವಿಗಳು ಸಮಾನತೆ, ಸೌಹಾರ್ದತೆ, ಭಾವೈಕ್ಯತೆ, ಮಹಿಳಾ ಪರವಾದ ಚಿಂತನೆಗಳ ಕುರಿತು ಕಾವ್ಯ ವಾಚಿಸಿರುವುದು ಸಂತೋಷದ ವಿಷಯವಾಗಿದೆ ಎಂದು ಉಸ್ಮಾನಿಯಾ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ಲಿಂಗಪ್ಪ ಗೋನಾಲ ಅಧ್ಯಕ್ಷೀಯ ನುಡಿ ಆಡಿದರು.

                           ಕವಿಗೋಷ್ಠಿಯಲ್ಲಿ ಡಾ.ಶೀಲಾದೇವಿ ಬಿರಾದಾರ,ಡಾ.ದೇವೇಂದ್ರಪ್ಪ ಕಟ್ಡಿಮನಿ,ಉಷಾ ಗಬ್ಬೂರು,ಸಿದ್ಧರಾಮ ಸರಸಂಬಿ,ರೇಣುಕಾಬೆಸ್.ಎಚ್.

ಡಾ.ಸುನೀತಾ ಮಾಳಗೆ,ಡಾ.ನಾಗಪಗಪ ಗೋಗಿ,ಪ್ರಿಯಾಂಕ ಮಾವಿನ,ಭೀಮರಾವ್ ಹೇಮನೂರು, ರಮೇಶ ಯಾಳಗಿ,ಮಮತಾ ಜಾನೆ,ಡಾ.ಅವಿನಾಶ ದೇವನೂರು, ರೇಣುಕಾ ಹೆಳವರ,ಡಾ.ರಾಜಶೇಖರ ಮಾಂಗ್,ಡಾ.ಸುಖದೇವಿ ಘಂಟಿ, ಡಾ.ಕಪಿಲ್ ಚಕ್ರವರ್ತಿ, ಸುಹಾಸಿನಿ.ಜಿ., ಸಾಕ್ಷಿ ಜಿ.,ವಿಕಾಸ್ ಹಿರೇಮಠ, ಅನಸೂಯಾ ಬಾಯಿ ನಾಗನಳ್ಳಿ,ಸಿ.ಎಸ್.ಮಾಲಿಪಾಟೀಲ ಸಂತೋಷ ಕುಮಾರ ಕರಹರಿ,ಬಸಮ್ಮ ಸಜ್ಜನ,ಸುರೇಶ ಹೇರೂರು,ವೆಂಕಟೇಶ ಕೆ.ಜನಾದ್ರಿ, ಹಿರಗಪ್ಪ ಬರಗಾಲಿ, ದೇವರಾಜ ಭಂಡಾರಿ ಇತರರು ಕವನ ವಾಚಿಸಿ ರಂಜಿಸಿದರು.

              ಪ್ರಾರ್ಥನೆಯನ್ನು ಸಿಯುಕೆ ಸಂಗೀತ ವಿಭಾಗದ ಡಾ.ಸ್ವಪ್ನಿಲ್ ಚಂದ್ರಕಾಂತ ಚಾಫೆಕರ್ ನಡೆಸಿದರು.

ಸ್ವಾಗತ -ಪ್ರಾಸ್ತಾವಿಕ ನುಡಿಯನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯರಾದ ಡಾ.ಚಂದ್ರಕಲಾ ಬಿದರಿ ಆಡಿದರು. ಚಕೋರ ವೇದಿಕೆ ಸಂಚಾಲಕ ಡಾ.ಗವಿಸಿದ್ಧಪ್ಪ ಪಾಟೀಲ ಮತ್ತು ಡಾ.ರಾಜಕುಮಾರ ಮಾಳಗೆ ನಿರೂಪಿಸಿದರು. ಡಿ.ಪಿ ಸಜ್ಜನ ವಂದಿಸಿದರು.