ಸೂಗಯ್ಯ ಹಿರೇಮಠ ಸಾಹಿತ್ಯ: ಅವಲೋಕನವ
ಸೂಗಯ್ಯ ಹಿರೇಮಠ ಸಾಹಿತ್ಯ: ಅವಲೋಕನವ
ಸೂಗಯ್ಯ ಹಿರೇಮಠ ಅವರು ಈ ನಾಡು ಕಂಡ ಅಪರೂಪದ ಲೇಖಕರು. ಕಲ್ಯಾಣ ಕರ್ನಾಟಕದ ಬಹು ಮುಖ ವ್ಯಕ್ತಿತ್ವದ ಅಸಾಧರಣ ಶಕ್ತಿ. ಸೃಜನಶೀಲ ಸಾಹಿತ್ಯ ಮತ್ತು ಹೋರಾಟಗಳಲ್ಲಿ ತಮ್ಮದೇ ಛಾಪು ಮೂಡಿಸಿದ ವರ್ಣನಾತೀತ ಸಾಹಿತಿ. ಅವರು ಇವತ್ತಿನ ಯಾದಗಿರಿ ಜಿಲ್ಲೆಯ ಶಹಪೂರ ತಾಲೂಕಿನ ಸಿಂಗನಹಳ್ಳಿಯವರು. ಸಗರ ನಾಡೆಂದು ಪ್ರಸಿದ್ಧವಾದ ಜಂಗಮ ಮನೆತನದ ಸಂಪ್ರದಾಯಸ್ಥರ, ಸುಸಂಸ್ಕೃತ, ಕಲೆ. ಸಾಹಿತ್ಯ ಕೇಂದ್ರದ ಮನೆತನದಲ್ಲಿ ಹುಟ್ಟಿದವರು. ಇಲ್ಲಿಯ ಶರಣಯ್ಯ ಮತ್ತು ಶಾಂತಮ್ಮರ ಮಗನಾಗಿ ೦೯-೦೫-೧೯೫೦ರಂದು ಜನಿಸಿದರು. ಬಾಲ್ಯದಿಂದಲೇ ವೈಚಾರಿಕತೆ ಮೂಡಿಸಿಕೊಂಡ ಅಪರೂಪದ ಜೀವಿ.
ಸಿಂಗನಹಳ್ಳಿ, ಗೋಗಿ, ಶಹಪೂರ, ಕಲಬುರಗಿಯ ಶ್ರೀ ಶರಣಬಸವೇಶ್ವರ ಕಲಾ ಮಹಾವಿದ್ಯಾಲಯದಿಂದ ಬಿ.ಎ.ಪದವಿ ಪಡೆದ ಅವರು ಮುಂದೆ ಎಂ.ಎ.ಕನ್ನಡ ಮತ್ತು ಜಾನಪದ ವಿಷಯ ಆಯ್ದುಕೊಂಡು ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರ ಗುಲಬರ್ಗಾದಿಂದ ೧೯೭೫ರಲ್ಲಿ ಪದವಿ ಪಡೆದರು. ಆಗ ಡಾ. ಬಿ.ಬಿ. ಹೆಂಡಿ, ಡಾ. ಎಂ. ಜಿ. ಬಿರಾದಾರ, ಡಾ. ಕೃಷ್ಣಮೂರ್ತಿ ಕಿತ್ತೂರ, ಡಾ. ಎಂ.ಎಸ್. ಲಡ್ಡೆ, ಡಾ. ಬಿ. ವಿ. ಮಲ್ಲಾಪೂರ, ಡಾ. ಶಶಿಕಲಾ ಮೊಳ್ಳಿ, ಡಾ. ಸಂಗಮೇಶ ಸವದತ್ತಿಮಠ ಪ್ರಾಧ್ಯಾಪಕರಾಗಿದ್ದರು.
೧೯೭೬ರಿಂದ ಕರ್ನಾಟಕ ವಿಶ್ವವಿದ್ಯಾಲಯ ಸ್ನಾತಕೋತ್ತರ ಕೇಂದ್ರ ಕನ್ನಡ ವಿಭಾಗದಿಂದ ನಡೆದ ಉತ್ತರ ಕರ್ನಾಟಕದ ಏಳು ಜಿಲ್ಲೆಯ ಯು.ಜಿ.ಸಿ ಯೋಜನೆಯ ಜನಪದ ಸಾಹಿತ್ಯ ಸಂಗ್ರಹದಲ್ಲಿ ಸಹಾಯಕ ಸಂಶೋಧಕರಾಗಿ ೧೯೮೦ರವರೆಗೆ ನಾಲ್ಕು ವರ್ಷ ಕಾರ್ಯನಿರ್ವಹಿಸಿದರು. ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಯುಜಿಸಿ ಯೋಜನೆಯ ಜನಪದ ವೈದ್ಯಕೋಶದ ಗುಲಬರ್ಗಾ ಜಿಲ್ಲೆಯ ಸಂಗ್ರಹಕಾರರಾಗಿಯೂ ಮಹತ್ತ್ವದ ಕೆಲಸ ಮಾಡಿದವರು.
ಸಂಘರ್ಷದ ಮಧ್ಯ ಹೋರಾಟಗಾರ: ಎಂ.ಎ. ಓದುವಾಗಲೇ ಸಿಂಗನಹಳ್ಳಿಯಲ್ಲಿ ಜಾಗೃತಿ ಯುವಕ ಸಂಘ ಮತ್ತು ಅಕ್ಕನ ಬಳಗವನ್ನು ಸ್ಥಾಪಿಸಿದರು. ಶಹಪೂರ ಸಮಾಜ ಕಲ್ಯಾಣ ಅಧಿಕಾರಿಗಳನ್ನು ಕರೆಸಿ ಉದ್ಘಾಟನೆ ಮಾಡಿಸಿದರು. ಮೂರು ತಿಂಗಳಲ್ಲಿ ಜಮಖಾನೆ, ಗ್ಯಾಸ್, ಕಪ್ಪುಹಲಗೆ, ಬಳಪ, ಪುಸ್ತಕ, ಭಜನೆ ಸಾಮಾನುಗಳು
ಬಂದಮೇಲೆ ಊರ ಜನರಿಗೆ ಖುಷಿ. ಅಕರ ಕಲಿಕೆ, ಹಾಡು, ಆಟ, ಪಾಠಗಳು, ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಅಣಿಯಾದವು. ಯುವ ತರುಣ ಸಂಘದ ಅಧ್ಯಕ್ಷರಾಗಿ ಸೂಗಯ್ಯ ನವರಿದ್ದರು. ಸಮಾಜ ಪರಿವರ್ತನೆಯಲ್ಲಿ ಯುವಕರ ಪಾತ್ರ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಸೂಗಯ್ಯನವರು ಪಡೆದಾಗ ಊರವರು ಹೊತ್ತುಕೊಂಡು ಸಂಭ್ರಮಿಸಿದರು. ಬಿಡಿಓ ಅವರು ಬೆಂಗಳೂರಿನ ಕುಂಬಳಗೋಡಿನಲ್ಲಿ ನಡೆಯುವ ರಾಜ್ಯ ಮಟ್ಟದ ಯುವ ನಾಯಕರ ತರಬೇತಿಗೆ ಆಯ್ಕೆಮಾಡಿ ಕಳಿಸಿದರು. ಇಲ್ಲಿ ಆಗಲೇ ಗುರುಬಸಯ ಅಮ್ಮಾಪುರ, ಲಿಂಗಣ್ಣ ಸತ್ಯಂಪೇಟೆ, ಶಾಂತರಸ, ವೀರನಗೌಡ ಮಾನ್ವಿ, ಚನ್ನಬಸಪ್ಪ ಬೆಟ್ಟದೂರು, ಬಸವರಾಜ ತಂಬಾಕೆ ಅವರ ಒಡನಾಟದಿಂದ ಯುವಜನ ವಿಚಾರ ವೇದಿಕೆ ಮಾಡಿ ಎಲ್ಲರೂ ಸೇರುತ್ತಿದ್ದರು. ಇದೇ ಹೊತ್ತಿಗೆ ಕಲ್ಯಾಣ ನಾಡಿನ ಶರಣ ಸಾಹಿತ್ಯ ಪರಿಷತ್ತಿನ ಸಮ್ಮೇಳನ ಜರುಗಿದವು. ೧೯೭೫ ಜೂನ್ ೨೫ರಂದು ಪ್ರಧಾನಿ ಇಂದಿರಾ ಗಾಂಧಿ ತುರ್ತು ಪರಸ್ಥಿತಿ ಜಾರಿಗೊಳಿಸಿದರು. ಇದರ ವಿರುದ್ಧ ಚಳವಳಿ, ಲೇಖನ ಬರೆದು ಪ್ರತಿಭಟಿಸಿದರು. ಜೆಪಿಯವರ ಮುಂದಾಳತ್ವದಲ್ಲಿ ಚಳವಳಿ ಪ್ರಾರಂಭವಾಯಿತು. ಗುಲಬರ್ಗಾ ಸಮಾಜವಾದಿಗಳಾದ ವೈಜನಾಥ ಪಾಟೀಲ, ಎಸ್.ಕೆ. ಕಾಂತಾ, ಬಿ.ಆರ್. ಪಾಟೀಲ ಸೇರಿದರು. ಜನಪರ ವಿಚಾರಧಾರೆಯ ಸೂಗಯ್ಯನವರನ್ನು ಕಂಡು ಸಂಪೂರ್ಣ ಕ್ರಾಂತಿಯ ಸಂಚಾಲಕರನ್ನಾಗಿ ನೇಮಿಸಿದರು.
ಎಚ್.ಟಿ. ಸಾಂಗ್ಲಿಯಾನರ ಚಿಕ್ಕಮಗಳೂರು ವರ್ಗಾವಣೆ ರಹಸ್ಯ ಸ್ಫೋಟ ಎಂದು ಕರಪತ್ರ ಬರೆದು ಹಂಚಿದವರು. ವಿಧಾನ ಸಭೆಯಲ್ಲಿ ಚರ್ಚೆಯಾಗಿ ಸರಕಾರ ಶೋಧ ಮಾಡಿದರು. ಬರೆದು ಹಂಚಿದವರು ಸೂಗಯ್ಯನವರು ಎಂದೂ ಯಾರಿಗೂ ಗೊತ್ತಾಗಲಿಲ್ಲ.
ಸಮುದಾಯ ಜಾಥಾ: ಜನಪರ ಕಾಳಜಿ ಹೊಂದಿದ ಸೂಗಯ್ಯನವರು ೧೯೭೯ರಲ್ಲಿ
ಸಾಂಸ್ಕೃತಿಕ ಜಾಥಾ ಒಂದು ತಿಂಗಳ ಕಾಲ ಹಳ್ಳಿಹಳ್ಳಿಯಲ್ಲಿ ಪಟ್ಟಣ, ನಗರಗಳಲ್ಲಿ ಜಾಗೃತಿ ಮೂಡಿಸಿದರು. ಬೀದರ ತಂಡದಿಂದ ಸೂಗಯ್ಯನವರು ಎಂ.ಎಸ್.ಸತ್ಯು ಉದ್ಘಾಟಿಸಿದರು. ಆಗ ಬೀದಿಯಲ್ಲಿ ನಾಟಕ ಪ್ರದರ್ಶನ, ಬೆಲ್ವಿ, ಸಂಗಪ್ಪನ ಕೊಲೆ ಪ್ರಕರಣ, ಚೆಸ್ನಾಲಾ ಗಣಿ ದುರಂತ, ಹೈದರಾಬಾದ್ ಗೋಲಿ, ಬುರುಡೆ ಬಾಬಾನ ಕಥೆ. ಬೆಳೆದವರು, ಕತ್ತಲೆಯ ದಾರಿ ದೂರ ಮೊದಲಾದ ನಾಟಕಗಳಲ್ಲಿ ಪಾತ್ರ ಮಾಡಿದವರು. ನಾಟಕ ಮುಗಿದ ಮೇಲೆ ಅಲ್ಲಿಯ ಸ್ಥಳೀಯ ರಾಜಕಾರಣಿಗಳು, ಸಮಾಜ, ಚಿಂತಕರು ನಾಗರೀಕರು, ಕಾರ್ಯಕರ್ತರೊಂದಿಗೆ ಚರ್ಚೆ ಮಾಡಿ ರಾಜಕೀಯ ಬದಲಾವಣೆಗೆ ಕಾಣೀಭೂತರಾದರು.
ನವಲಗುಂದ ರೈತರ ಕರ ನಿರಾಕರಣೆ, ಗೋಲಿಬಾರ್, ಸಮುದಾಯ ಇದನ್ನ ನೋಡಿ ರೈತ ಕಾರ್ಮಿಕರತ್ತ ಸಮುದಾಯ ಸಾಂಸ್ಕೃತಿಕ ಜಾಥಾ, ಹದಿನೈದು ದಿವಸ ಎಲ್ಲರೊಂದಿಗೆ ಸೇರಿ ಭಾಷಣ, ಅಭಿನಯದಲ್ಲಿ ಪಾಲ್ಗೊಂಡವರು. ರೈತಪರ ಹೋರಾಟದಲ್ಲಿ
ಟೀ ಎಂದರೆ ಟೀಕೆ ತಪ್ಪಿದರೆ ಇರಲಿ ಓಕೆ
ಪಾಲ್ಗೊಂಡರು, ವಿದ್ಯಾರ್ಥಿ ರೈತ ಸಂಘದ ಸಂಚಾಲಕರಾಗಿ ನಂಜುಂಡ ಸ್ವಾಮಿಗಳು ನೇಮಕ ಮಾಡಿದರು. ರೈತಪರ ಕೆಲಸ ಹಸಿರು ಶಾಲುಹೊದ್ದು ನಿರ್ವಹಿಸಿದರು.
ಪತ್ರಿಕಾ ವರದಿಗಾರರಾಗಿ: ಗ್ರಿನೋಬಲ್ಲ, ಸತ್ಯಕಾಮ, ಶಾಸನ, ಪತ್ರಿಕೆಗೆ ಕವನ,
ಕಥೆ, ಲೇಖನ, ವರದಿ ಮಾಡುತ್ತಾ ಬಂದಿದ್ದಾರೆ. ಪಿ. ಲಂಕೇಶರು ನೀವು ಹಳ್ಳಿ ಸುತ್ತಿ ನೋಡಿದ ಸಮಸ್ಯೆಗಳ ಕುರಿತು ಲೇಖನ ಕಳಿಸಲು ಹೇಳಿದರು ಮೂರು ದಿನಗಳಲ್ಲಿ ಟೆಲಿಗ್ರಾಂ ಕೊಟ್ಟು ನಙ್ಕಸ ಭಾಂಗಿ ಶಿಕ್ಷಕಿಯ ಮೇಲೆ ಹಲ್ಲೆಯ ಬಗ್ಗೆ ವಿಜಯಪುರಕ್ಕೆ ಹೋಗಿ ವರದಿಯನ್ನು ತಯಾರಿಸಿ ಕಳಿಸಿದಾಗ ಗಮನ ಸೆಳೆದರು. ಕನ್ನಡ ಭಾಷಾ ಚಳವಳಿಯಲ್ಲಿ ಸಂಸ್ಕೃತ ಭಾಷೆಗಿಂತ ಕನ್ನಡ ಭಾಷೆಗೆ ಆದ್ಯತೆ ನೀಡಲಿ ಕನ್ನಡ ಶಕ್ತಿ ಕೇಂದ್ರದ ಮೂಲಕ ಪ್ರತಿಭಟನೆಗೆ ಮುಂದಾದರು. ಗುಲಬರ್ಗಾ ನಗರ ಸಭೆ ಮುಂದೆ ಸತ್ಯಾಗ್ರಹ ಕುಂತಾಗ ಎಲ್ಲ ರಾಜಕಾರಣಿಗಳು ಬಂದು ಹೇಳಿದರೂ ನಿಲ್ಲಿಸಲಿಲ್ಲ. ಕೊನೆಗೆ ಪ್ರಥಮ ಭಾಷೆಯಾಗಿ ಕನ್ನಡ ಕಲಿಸಲು ಕಡ್ಡಾಯ ಮಾಡಿದಾಗ ಗೋಕಾಕ ಚಳವಳಿ ಕೈಬಿಡಲಾಯಿತು.
ವಿಶ್ವವಿದ್ಯಾಲಯ ಲಾಂಛನ ಹೋರಾಟ: ಗುಲಬರ್ಗಾ ವಿಶ್ವವಿದ್ಯಾಲಯ ೧೯೮೦ರಲ್ಲಿ
ಸ್ವತಂತ್ರವಾಯಿತು. ಹಂಪಿ ಕಲ್ಲಿನ ರಥ ಮತ್ತು ಅಮೃತಂ ವಿದ್ಯಂ ಎಂದು ನಾಮಕರಣ ವಾದಾಗ ಪ್ರತಿಭಟಿಸಿದ ಹಿರೇಮಠರು ವಿದ್ಯೆಯೇ ಅಮೃತ ಎಂದು ಮರು ಬದಲಾಯಿಸಿದರು.
ವೃತ್ತಿ : ಇವರು ಪ್ರತಿನಿತ್ಯ ಹೋರಾಟಮಯ ಜೀವನ ಕಂಡವರು. ಎಸ್.ಕೆ.
ಕಾಂತಾ, ಕೆ.ಬಿ. ಶಾಣಪ್ಪ, ಬಾಪುಗೌಡ ದರ್ಶನಾಪೂರ ಇವರೆಲ್ಲ ಜನತಾ ಪಕ್ಷದ ಶಾಸಕರಾಗಿ ಆಯ್ಕೆ ಹೊಂದಿದರು. ಇವರ ಹಿಂದೆ ದುಡಿದ ಹಿರೇಮಠ ಅವನ್ನು ರಾಜಕೀಯದಲ್ಲಿ ಮುಂದುವರಿಸೋಣ ಎಂದರು. ಅದಕ್ಕೆ ವೈಜನಾಥ ಪಾಟೀಲ, ಡಾ. ಬಿ.ಜಿ. ಜವಳಿ ಸಹಮತ ಕೊಟ್ಟರು. ಇದಕ್ಕೆ ಒಪ್ಪದಿದ್ದಾಗ ಯಾವುದೋ ನಿಗಮ ಮಂಡಳಿಯ ಸದಸ್ಯರಾಗಿ ಮಾಡೋಣವೆಂದರೆ ಇದಕ್ಕೂ ಒಪ್ಪದೇ ನನಗೆ ಸಾಮಾಜಿಕ ಪರಿವರ್ತನೆಗೆ ಹಳ್ಳಿ ಸುತ್ತಿದೆ. ಈಗ ಗ್ರಾಮೀಣ ಮಕ್ಕಳಿಗೆ ಪಾಠದ ಜೊತೆ ಸಮಾಜ ಪರಿವರ್ತನೆಯ ಚಿಂತನೆ ಹೇಳುವೆ ಎಂದವರ ಮಾತು ಕೇಳಿ ಡಾ.ಜವಳಿಯವರು ವೈಜನಾಥ ಪಾಟೀಲರಿಗೆ ಹೇಳಿ ಶಿಕ್ಷಣ ಮಂತ್ರಿಗೆ ಕೇಳಿ ಹೈ.ಕ.ಶಿ. ಸಂಸ್ಥೆಗೆ ಚಿಂಚೋಳಿಯಲ್ಲಿ ಕಾಲೇಜು ತೆರೆಯಲು ಸೂಚಿಸಿ ಅಲ್ಲಿಗೆ ಸೂಗಯ್ಯನವರನ್ನ ಉಪನ್ಯಾಸಕ ವೃತ್ತಿ ಜೊತೆ ಪ್ರಾಚಾರ್ಯ ಹುದ್ದೆಗೆ ನೇಮಿಸಿ ಆದೇಶ ನೀಡಿದಂತೆ ಅವರು ಹೋಗಿ ಕರ್ತವ್ಯ ಪರಿಪಾಲನೆ ಮಾಡಿ ಕಾಲೇಜ ಕಟ್ಟಿ ಬೆಳೆಸಿದರು. ಆಗ ವೀರೇಂದ್ರ ಪಾಟೀಲ ಉದ್ಘಾಟಿಸಿದರು. ಅನುದಾನಕ್ಕೆ ಒಳಪಡಿಸಿದರು. ವಿಭಾಗ ಮಟ್ಟದ ವಾಲಿಬಾಲ್ ಕ್ರೀಡಾಪಟು ಆಯ್ಕೆ ಕಾಲೇಜು ಆವರಣದಲ್ಲಿ ನಡೆದು ಇತಿಹಾಸವಾಯಿತು.ಎನ್.ಎಸ್.ಎಸ್. ಶಿಬಿರ, ಸಾಹಿತ್ಯ, ಸಾಂಸ್ಕೃತಿಕ ಅರಿವು ಮೂಡಿಸಿ ಕಸಾಪ ಸಮ್ಮೇಳನ ಆಯೋಜಿಸಿದರು. ಚಿಂಚೋಳಿಯ ವಿದ್ಯಾರ್ಥಿಗಳು, ಜನರು ಇಂದಿಗೂ ನೆನಪಿಸುತ್ತಾರೆ. ೧೯೯೬ರಲ್ಲಿ ಇದೇ ಶಿಕ್ಷಣ ಸಂಸ್ಥೆಯ ಬೀದರ ಬಿ.ವಿ.ಬಿ ಕಾಲೇಜಿಗೆ ಇವರು ವರ್ಗಾವಣೆ ಆದಾಗ ವಿದ್ಯಾರ್ಥಿಗಳು ಸತ್ಯಾಗ್ರಹ ನಡೆಸಿದ್ದು ಅಭಿಮಾನ ಉಂಟುಮಾಡುವದು. ಅಲ್ಲಿಯೂ ಸಹ ಪಾಠ, ಆಟ, ಸಾಹಿತ್ಯ, ಸಂಸ್ಕೃತಿ ಜೊತೆ ಕಸಾಪ ಕಾರ್ಯಯೋಜನೆ, ವಿಜ್ಞಾನ ಪರಿಷತ್ತಿನ ಕಾರ್ಯಕ್ರಮ ಮೂಲಕ ಜನರಲ್ಲಿ ಜಾಗೃತಿ ತಂದರು.
೩೦-೦೫-೨೦೦೮ರಲ್ಲಿ ವಯೋನಿವೃತ್ತಿ ಹೊಂದಿದರು. ನಂತರ ಬೀದರ ಕರ್ನಾಟಕ ಕಾಲೇಜಿನ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಸಂದರ್ಶಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು.
ಕುಟುಂಬ: ಇಲ್ಲೂ ಸಹ ಎರಡು ತಲೆಮಾರಿನಿಂದ ಸುರಪುರ ತಾಲೂಕಿನ ದಂಡು ಸೊಲಾಪುರದ ಮಠದಿಂದ ಹೆಣ್ಣು ಕೊಡುಕೊಳ್ಳುವಿಕೆ ಇದೆ. ಹೊಸ ಬೀಗತನ ಮಾಡಿ ಎಂದು ತಮ್ಮ ನಿಲುವು ಸ್ಪಷ್ಟಪಡಿಸಿದರು. ಆದರೂ ಅಕ್ಕನ ಮಗಳಾದ ಶಾಂತಾಳೊಂದಿಗೆ ವಿವಾಹವಾಯಿತು. ನಟರಾಜ್, ಜ್ಯೋತಿ ಇಬ್ಬರು ಮಕ್ಕಳು ಮದುವೆಯಾಗಿ ಅಳಿಯ, ಸೊಸೆ, ಮೊಮ್ಮಕ್ಕಳು ಇದ್ದಾರೆ. ಸಂತೃಪ್ತ ಜೀವನ. ಇಡೀ ಕುಟುಂಬ ಎಲ್ಲರೊಂದಿಗೆ ಬೆರೆತು ಬಾಳಿದವರು. ಶಿಥಿಲವಾದ ಕುಟುಂಬದ ಮಧ್ಯ ಇಂತಹ ಆದರ್ಶ ಬಾಳು ಸವೆಸಿದವರು. ಅವರ ಪತ್ನಿ ಶಾಂತಕ್ಕನವರು ಎಂದು ಕಾಡಿ ಬೇಡಿದವರಲ್ಲ, ಅವರ ಬೆನ್ನಹಿಂದಿನ ಬೆಳಕಾಗಿ ಬಂದವರು. ಸೂಗಯ್ಯನವರು ಆಕಸ್ಮಿಕವಾಗಿ ಹೃದಯಘಾತದಿಂದ ೨೧-೧೧-೨೦೧೭ರಂದು ಲಿಂಗೈಕ್ಯರಾದರು. ಅರವತ್ತೇಳು ವರ್ಷದಲ್ಲಿ ಅವರು ಬದುಕಿದ್ದು ಮಹತ್ವದ್ದು. ಅವರು ಬರೆಯವ ಹಾಗೆ ಬದುಕಿದರು. ಬದುಕಿ ಬರಹ ಮಾಡಿದವರು.
ಅಂತರ ಕಥಾಸಂಕಲನ, ಜಾನಪದ ಸಾಹಿತ್ಯದಲ್ಲಿ ಜೀವನ ಮೌಲ್ಯಗಳು, ಹಾರಕೂಡದ ಶ್ರೀ ಚೆನ್ನಬಸವೇಶ್ವರ ಮಠದಿಂದ ಪ್ರಕಟವಾದವು. ೧೯೮೪ರಲ್ಲಿ ಉಂಡು ಮಲಗಿದವರು ಕಾವ್ಯ ಸಂಕಲನದ ಮೂಲಕ ಸಾಹಿತ್ಯ ಲೋಕ ಪ್ರವೇಶಿಸಿದರು. ಆಗಾಲೇ ಹೋರಾಟದ ಮೂಲಕ ನಾಡಿಗೆ ಗೊತ್ತಾದಂತೆ ಸಾಹಿತ್ಯದ ಮೂಲಕವು ಚಿರ ಪರಿಚಿತರಾದರು. ಅವರ ಮೂಲದ್ರವ್ಯ ಕಾವ್ಯ. ಉಂಡು ಮಲಗಿದವರು, ನೀರು ನೆಲೆ, ಯಾಕೋ ಕೋಗಿಲೆ ಕೂಗುವುದಿಲ್ಲ ಎಂಬ ಮೂರು ಕಾವ್ಯದ ಮೂಲಕ ಕಾವ್ಯಾಸಕ್ತರ ಗಮನಸೆಳೆಯುವ ಮೂಲಕ ಪ್ರಖರ ಕವಿ ಎಂದು ಸಾಬೀತುಗೊಂಡವರು.
ದೇಶ ಅಹಿಂಸೆಯಿಂದ ಹಿಂಸೆಗೆ ತಿರುಗಿದರೆ ಇದು ರಾಜಕಾರಣಿಗಳಿಂದಾಗಿ ಎನ್ನುವರು ಸತ್ಯ. ಹಾಗೇ ಹೈದ್ರಾಬಾದದ ಕರ್ನಾಟಕ ಪ್ರದೇಶಕ್ಕೆ ಬಿಸಿಲು ಮತ್ತು ಜಾಲಿಮರ ಹೇಗೆ ಎಂಬುದನ್ನು ಕವಿ ಸೂಗಯ್ಯನವರು ಚಿತ್ರಿಸುತ್ತಾರೆ.
ಟೀ ಎಂದರೆ ಟೀಕೆ ತಪ್ಪಿದರೆ ಇರಲಿ ಓಕೆ
ಭಣ ಭಣ ಬಿಸಿಲು ಉರಿದರೂ
ನೆಲ ಬಿರನೆ ಸೀಳಿ ಬಾಯಿ ತೆರೆದರೂ
ಬೇರು ಬಿಟ್ಟ ಬೆಳೆವ ಜಾಲಿಮರ
ನಮಗೊಂದು ವರ (ಬಿಸಿಲು ಮತ್ತು ಜಾಲಿಮರ)
ಇಲ್ಲಿ ಜಾಲಿ ನಮಗೆ ವರವಾದ ಬಗ್ಗೆ ಕುತೂಹಲವಿದೆ. ಬಿಸಿಲು ಬೇಕು. ಶಕ್ತಿ ಮೂಡಬಹುದು. ಆದರೆ ಆ ಪ್ರಯೋಗ ತಂತ್ರಜ್ಞಾನ ನಮಲ್ಲಿ ಇಲ್ಲ. ದಟ್ಟವಾಗಿ ಬೆಳೆದ ಜಾಲಿಮರ ಬಡವರ ಉರಿವಿಗೆ ಅಸ್ತವಾಗಿದೆ. ಮನುಷ್ಯ ಪ್ರಗತಿ-ಪ್ರಯತ್ನ ಕಡಿಮೆ ಆಗಿರುವುದರಿಂದ ಅವ್ಯಯವಾಗುತ್ತಿದೆ.
ಜಲವು ಬತ್ತಿತು ಹುಡಿಯು ಎದ್ದಿತು ಭೂಮಿ ಬಾಯಾರಿತು బ ಗಾಳಿ ಬೀಸಿ ಹೊಡೆಯಿತು ಕಾಲವೆ ತಂದ ಕಾಣದ ಉರುಲು ಕಾದಿ ಗೆಲುವಯ್ಯಾರೊ ಪ್ರೀತಿಯಿಲ್ಲದ ಬರಡು ಬಾಳಿಗೆಬೆಳಕು ನೀಡುವವರಾರೋ (ಬರ)
ಇಂತಹ ಕವಿತೆಗಳ ಮೂಲಕ ಕವಿ ಪ್ರಗತಿಗೆ ವಾಸ್ತವದ ಚಿತ್ರಣಕ್ಕೆ ತೀರ ಹತ್ತಿರವಾಗುತ್ತಾರೆ.
ಸಾಮಾಜಿಕ ತುಡಿತ, ಆಕ್ರೋಶ, ಜಾತಿ, ಅಸ್ಪೃಶ್ಯತೆ, ರಾಜಕೀಯ, ಬಡತನ, ಮೌಡ್ಯತೆ, ಹಸಿವು, ಹೆಣ್ಣಮೇಲಿನ ಹಿಂಸೆ ವರ್ತಮಾನದ ವಿಷಯಕ್ಕೆ ಸ್ಪಂದಿಸುವ ಕವನ ರಚಿಸಿದ್ದಾರೆ.
ಮನೆ ಮಂದಿರ ಸಂದಿಯಲಿ ತುಂಬಿದೆ ಗುಂಡಿನ ಸದ್ದು ಬಾಂಬುಗಳ ಬಲೆಯಲಿ ಸಿಕ್ಕು ತೊಟ್ಟ ಬಟ್ಟೆ ರಕ್ತಮಯ ದೇಹದಲಿ ತುಂಬಿವೆ ಗಾಯ ಜೀವ ಹಿಂಡುವ ಜನರ ಕಂಡು ಯಾಕೋ ಕೋಗಿಲೆ ಕೂಗುವುದಿಲ್ಲ
ಇಂಥ ಕವಿತೆ ಮೂಲಕ ವರ್ತಮಾನದ ಕವಿ ಕಾವ್ಯ ತೆರೆದು ತೋರಿಸುತ್ತವೆ.
ಅವರ ಕವನ ಸರಿಯಾಗಿ ಅರ್ಥವಾಗುವ ಹಾಗೆ ಜನ ಮನ ತಲುಪಿವೆ. ಇನ ಕವನಗಳು ನಾಡಿನ ವಿಶ್ವವಿದ್ಯಾಲಯಗಳಲ್ಲಿ ಪಠ್ಯವಾಗಿವೆ.
6 ಕತೆಗಳನ್ನು ತುಂಬಾ ಸೊಗಸಾಗಿ ಚಿತ್ರಿಸಿದ್ದಾರೆ. ಅಂತರ ೧೯೯೨ರಲ್ಲಿ ಪ್ರಕಟ ವಾಯಿತು. ಸ್ವಾತಂತ್ರ್ಯ ಪೂರ್ವ ನಂತರದ ಜನಜೀವನ ಚಿತ್ರಣ ಹೊಂದಿವೆ. ಹುಳುಗಳು ಶಹಪುರ, ಜೇವರಗಿಯಲ್ಲಿ ನಡೆದ ತೊಗರಿ ಬೆಳೆಗೆ ನಾಶವಾದ ಚಿತ್ರಣವಿದೆ. ಬೇವುಕಿಲ್ಲ. ಬಾಯಿ ಕತೆಗಳು ಜಾಗತೀಕರಣದ ಹಿನ್ನೆಯ ಹಳ್ಳಿ ಬದುಕು ಹೇಗಾಗಿದೆ ಎಂಬ ವಾಸ್ತವತೆ ಅಡಗಿದೆ. ಅಂತರಂಗದ ಗುಡಿಯ ಒಳಗೆ ಈ ಕಥೆಗಳು ನೀರಾವು ಯೋಜನೆಯಿಂದ ತತ್ತರಿಸಿದ ರೈತ ಜೀವನ ಮುಖಾಮುಖಿಯಿದೆ. ನೀನ್ಯಾಕೋ ನಿನ್ ಹಂಗ್ಯಾಕೋ, ಕಂಗಳ ಮುಂದಣ ಕತ್ತಲೆ ಬಹು ವಿಶಿಷ್ಟ ಸಂವೇದನೆಯ ಕಥೆಗಳಾಗಿವೆ ಆರು ಕಥಾ ಸಂಕಲನ ಪ್ರಕಟಿಸಿ ಭಾಷೆ, ವಸ್ತು, ತಂತ್ರ, ಶೈಲಿಗಳಿಂದ ಎಲ್ಲಾ ಬರುತ್ತಿ ನಾನಾ ಮಗ್ಗುಲುಗಳನ್ನು ವಿವರಿಸುತ್ತವೆ.
ಐದು ಬೀದಿನಾಟಕಗಳು ರಚಿಸಿದ ಹಿರೇಮಠರು ಸ್ವತಃ ಕಲಾವಿದ, ನಟ ಆದ್ದರಿಂದ ಬೀದಿಗಾಗಿ ಬರೆದ ಅಕ್ಷರ, ಮೌಡ್ಯತೆ, ಅಂಧಾನುಕರಣೆ, ದೇವದಾಸಿ ಪದ್ಧತಿ, ಒ೫ ಸಂತೆಯಲ್ಲಿ ಶಿಕ್ಷಣ ಇವತ್ತಿನ ಶಿಕ್ಷಣದ ಸ್ಥಿತಿಗತಿಯನ್ನು ಎಳೆ ಎಳೆಯಾಗಿ ಬಿಡಿಸಿಟ್ಟಿದ್ದಾರೆ ವಯಸ್ಕರ ಶಿಕ್ಷಣದ ಮೂಲಕ ಕಲಿಕೆಯ ಮಹತ್ವ ಸಾರಿದ್ದಾರೆ. ಮತದಾನ ಗ್ರಾಮೀಣ ಪ್ರದೇಶದಲ್ಲಿ ಚುನಾವಣೆಗಳು ಹೇಗೆ ಹಾದಿ ತಪ್ಪಿಸುತ್ತವೆಂಬುದನ್ನು ಉದಾರವ ವಿವರಿಸಿದ್ದಾರೆ.
ರೈತರ ಆತ್ಮಹತ್ಯೆಯು ಹೇಗೆ ಸಾಲ ಕೊಟ್ಟ ಬ್ಯಾಂಕ್ ಬೆನ್ನು ಬಿಡದೇ ಹತ್ತುವುದು ರೈತರ ಸ್ಥಿತಿಯನ್ನು ಬಗೆಹರಿಸುವಲ್ಲಿ ವಿಫಲರಾದ ಬಗೆ ತೋರಿಸುತ್ತದೆ. ಪುಃಖ ರಕ್ಷಣೆ ಇವತ್ತು ಅತ್ಯಂತ ಅವಶ್ಯವೆಂಬುದು ತಿಳಿಸುವ ಮಹತ್ವದ ನಾಟಕ. ಇವು ಡಾಂಭಿಕತೆಯಲ್ಲಿ ಸ್ವಾಮಿಗಳು, ಮಠಾಧೀಶರು ಹೇಗೆ ಅವನತಿಗೆ ಸಮಾಜ ತರುವರೆನ್ನುವ ದನ್ನು ವೇಷಧಾರಿಯಲ್ಲಿ ಚಿತ್ರಿಸಿದ್ದಾರೆ. ಜನಮನ್ನಣೆಯ ಜೊತೆ ಸಮಕಾಲೀನ ಮ ಎತ್ತಿ ಹಿಡಿದಿವೆ.
ಜೀವನ ಚರಿತ್ರೆ: ನಮ್ಮ ಶರಣರು, ಸಂತರು, ಮಹಾತ್ಮರು, ಸಾಧಕರು ಮಾರ್ತಿ
ಜೀವನ, ಬರಹ, ಬದುಕಿನ ಮೌಲ್ಯಗಳು ಜನಮಾನಸದಲ್ಲಿ ನೆಲೆ ನಿಲ್ಲುವಂತಹ ಚರಿತ್ತೆ ಮಾಡುತ್ತವೆ. ಉರಿಲಿಂಗಪೆದ್ದಿ, ಕಿನ್ನರಿ ಬ್ರಹ್ಮಯ್ಯ, ಎಡೆಯೂರು ಸಿದ್ಧಲಿಂಗೇಶ್ವರ, ಹೇವರೆಗೆ ಮಲ್ಲಮ್ಮ, ತಿಂಥಣಿ ಮೋನಪ್ಪಯ್ಯ, ಗುರುನಾನಕ, ಇಂಥದೊಂದು ಚರಿತ್ರೆ ಕಟ್ಟುಪ ಸಂಪೂರ್ಣ ಮಾಹಿತಿ, ಅಧ್ಯಯನ, ಸಂಗ್ರಹದಿಂದ ವೈಶಿಷ್ಟ್ಯ ಪೂಣನ್ ದಾಖಲಿಸಿದ್ದಾರೆ.
ಟೀ ಎಂದರೆ ಟೀಕೆ ತಪ್ಪಿದರೆ ಇರಲಿ ಓಕೆ
ಆಧುನಿಕ ವಚನ: ಹನ್ನೆರಡನೆಯ ಶತಮಾನದ ಶರಣರು ವಚನ ಸಾಹಿತ್ಯವನ್ನು
ರಚಿಸಿದವರು. ಅವರ ಮುಂದುವರಿಕೆಯಾಗಿ ಆಧುನಿಕ ವಚನಗಳು ರಚನೆಯನ್ನು ಕವಿಗಳು ಬರೆದು ಶರಣರ ಪರಂಪರೆಯನ್ನು ಮುಂದುವರೆಸಿಕೊಂಡು ಬಂದರು. ರಾಯಚೂರು ಜಿಲ್ಲೆಯ ದೇವದುರ್ಗದ ಆದಿಮಾತೆಪ್ಪ ಮೊಟ್ಟಮೊದಲ ವಚನಕಾರ. ಹರ್ಡೇಕರ ಮಂಜಪ್ಪ, ರಂಗಣ್ಣ, ಸಿದ್ದಯ್ಯ ಪುರಾಣಿಕರಂಥವರು ಅಲ್ಲದೇ ಇಂದು ಎಂಟನೂರಕ್ಕು ಹೆಚ್ಚು ವಚನಕಾರರು ಬರೆಯುತ್ತಿದ್ದಾರೆ. ಆ ಸಾಲಿನಲ್ಲಿ ಸೂಗಯ್ಯನವರು ಒಬ್ಬರು. ಸುವರ್ಣ ಮಹೋತ್ಸವದ ಸೂಗೂರೇಶ್ವರ ಎಂಬ ಅಂಕಿತದಲ್ಲಿ ೩೦೭ವಚನಗಳು ಸೂಗೂರೇಶ್ವರ ವಚನಗಳು ಎಂಬ ಸಂಕಲನ ಪ್ರಕಟಿಸಿದ್ದಾರೆ. ಅವರ ವಚನದಲ್ಲಿ ಜ್ಞಾನ, ವಿಜ್ಞಾನ, ವೈಚಾರಿಕತೆ, ಮಾನವೀಯತೆಯನ್ನು ಎತ್ತಿ ತೋರಿಸುವ ವಚನಗಳು. ಕೊರಾನಾಗಿಂತ ಮುಂಚೆಯೇ 'ಸುಲಿಗೆ ಮಾಡುವ ಡಾಕ್ಟರ್/ಬಹುದೊಡ್ಡ ಹಣದ ರೋಗಿ ನೋಡಾ' ಎಂದು ಬರೆದವರು. ಬಾಡಿಗೆ ಎಲ್ಲಾ ದೊರೆತರೂ ಸಹ ಇಂದು ಬಾಡಿಗೆ ತಂದೆ, ತಾಯಿ, ಮಕ್ಕಳು ದೊರೆಯುವುದು ಕಂಡ ದಂಗಾದ ಬಗ್ಗೆ ಚಿಂತನೆ ಇದೆ. ರೈತರು, ಅಸ್ಪೃಶ್ಯತೆ, ಈ ವಾಸ್ತವತೆಗೆ ಹತ್ತಿರವಿರುವ ವಚನ ಬರೆದು ಗಮನ ಸೆಳೆದವರು.
ಕೈಕಾಲುಗಳುಂಟು; ನರ ಮಾಂಸಗಳಿಲ್ಲ ಕಿವಿ ಕಣ್ಣುಗಳುಂಟು; ವಪೆ ಬಿಂದುಗಿಲ್ಲ ಬಾಯಿ ಮೂಗುಂಟು; ಮಾತು, ಗಾಳಿ, ಸೇವನೆಯಿಲ್ಲ ತಲೆ-ದೇಹಗಳುಂಟು ಮೆದುಳು ಹೃದಯವಿಲ್ಲ ಕಾಲು ಚಲನೆಯುಂಟು ಅದರಲ್ಲಿ ಜೀವವಿಲ್ಲ ಯಂತ್ರಮಾನವನ ಕಾರ್ಯತಂತ್ರಕ್ಕೆ ಬೆರಗಾದೆನಯ್ಯಾ ಸುವರ್ಣ ಮಹೋತ್ಸವದ ಸೂಗೇಶ್ವರ
ಇಂತಹ ಅನೇಕ ವೈಚಾರಿಕ ನಿಲುವುಗಳ ವಚನಗಳು ವರ್ತಮಾನಕ್ಕೆ ಪ್ರತಿಬಿಂಬಿಸುವ ವಚನಗಳಿವೆ.
ಜಾನಪದ ಸಾಹಿತ್ಯ: ಜಾನಪದ ಸಾಹಿತ್ಯ ಸಂಗ್ರಹ, ಸಂಪಾದನೆ, ಪ್ರಕಟಣೆ, ಸಂಶೋಧನೆ,
ವಿಮರ್ಶೆಯನ್ನು ಹಂತ ಹಂತವಾಗಿ ಮಾಡಿದ ಅಪೂರ್ವ ಜಾನಪದ ವಿದ್ವಾಂಸರಲ್ಲಿ ಸೂಗಯ್ಯನವರು ಒಬ್ಬರು. ಪ್ರಾರಂಭದಲ್ಲಿ ಉತ್ತರ ಕರ್ನಾಟಕ ಜಾನಪದ ಯೋಜನೆಯ ಸಹಾಯಕ ಸಂಶೋಧಕರಾಗಿ ಹಳ್ಳಿ ಹಳ್ಳಿಗಳಲ್ಲಿ ತಿರುಗಿ ಸಂಗ್ರಹ ಮಾಡಿದವರು. ಅದೇ ಜ್ಞಾನ ಅವರನ್ನು ಬಹು ಅಪರೂಪದ ಕಾರ್ಯ ಮಾಡಲು ಸಾಧ್ಯವಾಯಿತು. ಮೈಲಾರಲಿಂಗನ ಸಾಹಿತ್ಯ ಮತ್ತು ಸಂಪ್ರದಾಯ, ಸಣ್ಣಾಟಗಳ ವಸ್ತು ಮತ್ತು ತಂತ್ರ,
ವಚನ ಸಾಹಿತ್ಯದಲ್ಲಿ ಜಾನಪದ ಅಂಶಗಳು ಹಾಗೂ ಬಯಲಾಟದ ಸಾರಥಿ ಕುರಿತು ನಾಲ್ಕು ಬಾರಿ ಸಂಶೋಧನೆ ಮಾಡಲು ನೋಂದಣಿ ಮಾಡಿದರು. ಅವರು ಮಾಡಿರುವರು. ಇವರು ಮಾಡಿರುವರು ಎಂದು ಸಂಶೋಧನೆ ಮಾಡಲು ಬದಲಾವಣೆಗೊಂಡು ಇವರ ಮನಸಿಗೆ ನೋವಾಗಿ, ಪಿಎಚ್.ಡಿ ಮಾಡುವುದನ್ನೇ ಬಿಟ್ಟು ತಾವೇ ಸಂಶೋಧನಾ ಪುಸ್ತಕ ಪ್ರಕಟಿಸಲು ಮುಂದಾದರು.
ಜನಪದ ಸಾಹಿತ್ಯದಲ್ಲಿ ಜೀವನ ಮೌಲ್ಯಗಳು, ಜನಪದ ವೈದ್ಯ ಪದ್ಧತಿ, ದೇವದೇವ ವನ, ಜನಪದ ಒಗಟಿನ ಕಥೆಗಳು,ಜಾನಪದ ಸಂಸ್ಕೃತಿ, ಮನೆಮದ್ದು, ಜನಪದ ಸಾಹಿತ್ಯದಲ್ಲಿ ಶೃಂಗಾರ ಗೀತೆಗಳು, ಜಾನಪದ ಸಂವಹನ, ಮುಂತಾದ ಜಾನಪದಕ್ಕೆ ಸಂಬಂಧಿಸಿದಂತೆ ಕೃತಿ ಪ್ರಕಟಿಸಿ ಜಾನಪದ ತಜ್ಞರಾದವರು.
ವಚನ ಸಾಹಿತ್ಯ, ವಿಮರ್ಶೆ, ಸಂಶೋಧನೆ, ಶಿಶುಪ್ರಾಸಗಳು, ಪ್ರಬಂಧಗಳು, ಚಿಂತನ.ಚರಿತ್ರೆ, ಸಂಪಾದನೆ, ಸೃಜನಶೀಲ ಸಾಹಿತಿಯಾಗಿ ಕಾವ್ಯ, ವಚನ, ನಾಟಕ, ಕಥೆಗಳನ್ನು ಬರೆದೆ ಸಾಹಿತಿಯಾದವರು.
ಇವರ ಸಾಹಿತ್ಯ ಸೇವೆಯನ್ನು ಪರಿಗಣಿಸಿದಾಗ ಸಿಗಬೇಕಾದ ಗೌರವ ಇವರಿಗೆ ದೊರೆಯಲಿಲ್ಲ. ಪ್ರತಿಭೆಗೆ ಈ ದೇಶದಲ್ಲಿ ಅವಕಾಶವಿಲ್ಲ, ಆದರೂ ಬೀದರ ಜಿಲ್ಲೆಯಲ್ಲಿ ಅವರ ಸಾಹಿತ್ಯ ಕೃತಿಗಳು ಹೊರಬಂದವು. ಅವರು ಜಿಲ್ಲೆಯ ತುಂಬಾ ಓಡಾಡಿ, ಸಾಹಿತ್ಯ ಸಂಸ್ಕೃತಿ ಬೆಳೆಸಿದರು. ಅನೇಕ ಯುವ ಬರಹಗಾರರಿಗೆ ಮಾರ್ಗದರ್ಶನ ಮಾಡಿ ಉತ್ತಮ ಸಾಹಿತಿ, ಕವಿಗಳಾಗುವಲ್ಲಿ ಇವರ ಪಾತ್ರವಿದೆ. ತಮ್ಮ ಕೈಯಲ್ಲಿ ಕಲಿತ ವಿದ್ಯಾರ್ಥಿಗಳಿಗೆ ಯಾವ ಜಾತಿ, ಮತ, ನೋಡದೆ ಪ್ರತಿಭೆ ನೋಡಿ ಬೆಳೆಸಿದ ಪರಿ ನಿಜ ಜಂಗಮನ ಕಾರ್ಯವಾಗಿದೆ. ಹಿರೇಮಠರ ಕಾರ್ಯಕ್ಕೆ ಬೀದರ ಜಿಲ್ಲೆಯಲ್ಲಿ ಗೌರವ ದೊರೆಯಲಿಲ್ಲ ಶಿಕ್ಷಣ ಸಿರಿ, ಸುವರ್ಣ ಕರ್ನಾಟಕ, ಸುವರ್ಣ ಗಡಿ ಸಿರಿ, ಸುವರ್ಣ ಕರ್ನಾಟಕ, ಜಾನಪದ ತಜ್ಞ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗಳು ದೊರಕಿವೆ. ಚಿಂಚೋಳಿ ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಕ್ಷರಾಗಿದ್ದರು. ಜಾನಪದ ಸಮ್ಮೇಳನ ಯಾದಗಿರಿಯ ಸರ್ವಾಧ್ಯಕ್ಷ ಗೌರವ ದೊರೆತಿವೆ. ಅವರ ಕುರಿತು ಎಂ.ಫಿಲ್, ಪಿಎಚ್.ಡಿ. ಮಾಡಿದ್ದಾರೆ. ಇವರ ಸಾಹಿತ್ಯವನ್ನು ಗುರುತಿಸಿ ಮೊದಲು ಕೃತಿ ಹೊರತಂದವರು
ಡಾ.ಗವಿಸಿದ್ದಪ್ಪ ಪಾಟೀಲರು, ಸೂಗಯ್ಯ ಹಿರೇಮಠರ ಸಾಹಿತ್ಯಾವಲೋಕನ ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ ಹೊರತಂದಿದೆ. ಸುಗಂಧ ಅಭಿನಂದನಾ ಗ್ರಂಥ ಹಾರಕೂಡ ಶ್ರೀ ಚನ್ನಬಸವೇಶ್ವರ ಹಿರೇಮಠ ಸಂಸ್ಥಾನದಿಂದ ಹೊರ ತಂದರು. ಜನಪದ ಜಂಗಮ ಎಂಬ ಸಂಸ್ಮರಣ ಗ್ರಂಥ ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನದಿಂದ ಹೊರ ತಂದರು. ಆಮೇಲೆ ಸಗರನಾಡು ಸೂಗಯ್ಯನವರ ಪ್ರತಿಷ್ಠಾನ ಮಾಡಿ ಪ. ಮನು ಸಗರ. ಸ್ವಾಮಿರಾವ್ ಕುಲಕರ್ಣಿ, ಚಿ.ಸಿ. ನಿಂಗಣ್ಣನವರು ಪ್ರಶಸ್ತಿಯನ್ನು ಡಾ. ಚೆನ್ನವೀರ
ಶಿವಾಚಾರ್ಯ ಮಹಾಸ್ವಾಮಿಗಳವರ ನೇತೃತ್ವದಲ್ಲಿ ಕೊಡಮಾಡುತ್ತಾ ಬಂದಿದ್ದಾರೆ. ಈಗ ಅವರ ಮಗ ನಟರಾಜ ಹಾಗೂ ಇತರರು ಸೇರಿ ಪ್ರತಿಷ್ಠಾನ ಮುಂದು ವರಿಸಿಕೊಂಡು ಹಾರಕೂಡ ಶ್ರೀಗಳವರ ದಿವ್ಯ ಪಾವನ ಸಾನಿಧ್ಯದಲ್ಲಿ ನಡೆಯುತ್ತಿದೆ. ಸಗರನಾಡ ಸಿರಿ ಎಂಬ ಪುಸ್ತಕವನ್ನು ಪ. ಮನುಸಗರ ಹೊರತಂದಿದ್ದಾರೆ. ಅವರ ಸಮಗ್ರ ಸಾಹಿತ್ಯ ಸಂಪುಟ ಹೊರಬರಬೇಕಾಗಿದೆ. ಆದರೂ ವಾಚಿಕೆಯ ಮೂಲಕ ಅವರ ಬರಹದ ವೈಶಿಷ್ಟ್ಯತೆಯನ್ನು ಕಾಣಬಹುದು. ಅಲಕ್ಷ್ಯಕ್ಕೆ ಒಳಗಾದ ಸಾಹಿತಿ, ನೇರ, ನಿಷ್ಟುರ, ದಾಕ್ಷಿಣ್ಯದ, ಹಠ, ಛಲವಾದಿ. ಸಾಹಿತಿ, ಹೋರಾಟಗಾರ, ಎಲ್ಲಾ ಆದಂತೆ ಅವರೊಬ್ಬ ಮಾನವೀಯತೆ ಮನುಷ್ಯರಾಗಿದ್ದವರು.
ಆಕರಗಳು ಗ್ರಂಥ:
೧. ಯಾಕೋ ಕೋಗಿಲೆ ಕೂಗುವುದಿಲ್ಲ ಗೆಳೆಯಾ- ಸೂಗಯ್ಯ ಹಿರೇಮಠ- ಸಿವಿಜಿ ಪಬ್ಲಿಕೇಷನ್,ಬೆಂಗಳೂರು-೨೦೧೦
೨.ಸುಗಂಧ- ಸೂಗಯ್ಯ ಹಿರೇಮಠ ಅಭಿನಂದನ ಗ್ರಂಥ- (ಸಂ) ಡಾ.ಗವಿಸಿದ್ಧಪ್ಪ ಪಾಟೀಲ, ಚನ್ನಬಸವೇಶ್ವರ ಹಿರೇಮಠ ಸಂಸ್ಥಾನ, ಹಾರಕೂಡ- ೨೦೧೩
೩.ಜನಪದ ಜಂಗಮ- ಸೂಗಯ್ಯ ಹಿರೇಮಠ ಅವರ ಸಂಸ್ಮರಣ ಗ್ರಂಥ- ಡಾ.ಗವಿಸಿದ್ಧಪ್ಪ ಎಚ್.ಪಾಟೀಲ- ಶ್ರೀ ಸಿದ್ಧಲಿಂಗೇಶ್ವರ ಒಗರಕಾಶನ,ಕಲಬುರಗಿ- ೨೦೧೯
೪.ಸೂಗಯ್ಯ ಹಿರೇಮಠ ವಾಚಿಕೆ- (ಸಂ) -ಡಾ.ಜಯದೇವಿ ಗಾಯಕವಾಡ- ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ,ಕಲಬುರಗಿ-೨೦೨೩
