ಆಳಂದ್ ಮುಖ್ಯರಸ್ತೆ ಅಗಲೀಕರಣ: ನೋಟಿಸ್ ಜಾರಿಗೊಳಿಸಿದ ಪುರಸಭೆ

ಆಳಂದ್ ಮುಖ್ಯರಸ್ತೆ ಅಗಲೀಕರಣ: ನೋಟಿಸ್ ಜಾರಿಗೊಳಿಸಿದ ಪುರಸಭೆ
ಆಳಂದ: ಪಟ್ಟಣದ ಹಳೆಯಕಾಲದ ಇತಿಹಾಸ ಹೊಂದಿರುವ ಮುಖ್ಯರಸ್ತೆಯ ಅಗಲೀಕರಣ ಪ್ರಕ್ರಿಯೆಗೆ ಸರ್ಕಾರ ೧೧ ಕೋಟಿ ರೂಪಾಯಿ ಮೀಸಲಿಟ್ಟು ಒಂದುವರೆ ವರ್ಷ ಕಳದಿದೆ. ಈಗ ಪ್ರಕ್ರಿಯೆ ಅಂತಿಮ ಸ್ಥಿತಿಗೆ ಸ್ಥಲುಪಿಸಲು ಪುರಸಭೆ ಆಡಳಿತ ಭರದ ಸಿದ್ಧತೆ ಮಾಡಿಕೊಂಡು ಸಂಬಂಧಿತರಿಗೆ ನೋಟಿಸ್ ಜಾರಿಗೊಳಿಸಿದೆ.
೧೯೭೦ರ ಮುಂಚಿತವಾಗಿ ತಮ್ಮ ಆಸ್ತಿಗಳ ಮೂಲ ದಾಖಲೆಗಳ ದೃಢೀಕೃತ ಪ್ರತಿಗಳನ್ನು ೧೫ ದಿನಗಳೊಳಗೆ ಪುರಸಭೆ ಕಚೇರಿಗೆ ಸಲ್ಲಿಸಬೇಕು. ತಪ್ಪಿದ್ದಲ್ಲಿ ತಮ್ಮ ಆಸ್ತಿಯನ್ನು ಅನಧಿಕೃತವೆಂದು ಪರಿಗಣಿಸಿ ಪುರಸಭೆ ಕಾಯ್ದೆ ೧೯೬೪ರ ಅಡಿಯಲ್ಲಿ ಕ್ರಮಕೈಗೊಳ್ಳಲಾಗುವುದು ಎಂಬ ನೋಟಿಸನ್ನು ಡಿ.೧೯ರಂದು ಮುಖ್ಯಾಧಿಕಾರಿಗಳು ಹೊರಡಿಸಿ ಎಚ್ಚರಿಸಿದ್ದಾರೆ.
ಈ ರಸ್ತೆಗೆ ಸಂಬಂಧಿಸಿದಂತೆ ೪೮೦ ಕಟ್ಟಡಗಳು ಎಡಬಲ ರಸ್ತೆಗೆ ಅಂಟಿಕೊಂಡಿದ್ದು, ಶೇಕಡ ೪೦ ರಷ್ಟು ಕಟ್ಟಡಗಳು ರಸ್ತೆ ಅತಿಕ್ರಮಿಸಿಕೊಂಡಿವೆ ಎಂದು ಸಮಿತಿಯ ಅಂದಾಜಿಸಿಕೊAಡಿದೆ.
ಇತಿಹಾಸ ಮತ್ತು ಪ್ರಸ್ತುತ ಪರಿಸ್ಥಿತಿ: ಹತ್ತು-ಹದಿನೈದು ವರ್ಷಗಳ ಹಿಂದೆ ಈ ರಸ್ತೆಯ ಅಗಲೀಕರಣ ಕೈಗೊಳ್ಳುವುದು ಪ್ರಮುಖವಾಗಿತ್ತು, ಆದರೆ ಈಗ ಸರ್ಕಾರದ ಕಚೇರಿಗಳು ಮಿನಿ ವಿಧಾನಸೌಧದೊಂದಿಗೆ ಪಟ್ಟಣದ ಹೊರವಲಯಕ್ಕೆ ಸ್ಥಳಾಂತರಗೊಂಡು, ಈ ರಸ್ತೆ ತನ್ನ ಮಹತ್ವವನ್ನು ಸಡಿಲಗೊಳಿಸಿತು. ಹಗಲು ಸಮಯದಲ್ಲಿಯೂ ವಾಹನ ದಟ್ಟಣೆ ಕಡಿಮೆ ಕಂಡುಬರುತ್ತಿರುವುದು, ಸಾರ್ವಜನಿಕ ವಲಯದಲ್ಲಿ ಚರ್ಚೆ ಜೋರಾಗಿದೆ.
ಶ್ರೀರಾಮ ಮಾರುಕಟ್ಟೆಯಿಂದ ಮಹಾವೀರ್ ಚೌಕ ಮತ್ತು ತಹಶೀಲ್ದಾರ ಕಚೇರಿಯವರೆಗೆ ಮಾತ್ರ ಈ ರಸ್ತೆಯಲ್ಲಿ ಸ್ವಲ್ಪ ದಟ್ಟಣೆ ಕಂಡುಬರುತ್ತದೆ. ಇನ್ನಾರ್ಧ ಭಾಗದಲ್ಲಿ ಸನ್ಮತಿ ಕ್ರಾಸ್ನಿಂದ ದರ್ಗಾಚೌಕ್ ವರೆಗಿನ ರಸ್ತೆಯಲ್ಲಿ ಜನರ ಒಡಾಟ ಮತ್ತು ವಾಹನಗಳ ಚಲನೆ ತೀರಾ ಕಡಿಯಾಗಿದೆ. ಇಲ್ಲಿ ಸರ್ಕಾರದ ಹಣ ಖರ್ಚು ಮಾಡಿ ಸಾರ್ವಜನಿಕರ ಆಸ್ತಿಗಳಿಗೆ ನಷ್ಟದ ಮಧ್ಯ ಅಗಲೀಕರಣ ಬೇಕೆ ಬೇಡವೂ ಎಂಬ ಚರ್ಚಿ ಜೋರಾಗಿದೆ.
ಅಗಲೀಕರಣದ ಹಾನಿ ಮತ್ತು ಲಾಭಗಳ ಕುರಿತು ಜಿಜ್ಞಾಸೆ: ಈ ರಸ್ತೆಗೆ ಸಂಬಂಧಿಸಿದ ಕಟ್ಟಡಗಳ ಹಾನಿ ಮುಖ್ಯ ಸಮಸ್ಯೆಯಾಗಿದೆ. ರಸ್ತೆ ಅಗಲೀಕರಣದ ಪರಿಣಾಮವಾಗಿ ಪ್ರದೇಶದಲ್ಲಿನ ಬಹುತೇಕ ೪೦% ನಿರ್ಮಾಣಗಳು ಧ್ವಂಸಗೊಳ್ಳುವ ಸಾಧ್ಯತೆ ಇದೆ. ಸ್ಥಳೀಯ ವ್ಯಾಪಾರಿಗಳು ಮತ್ತು ಸ್ಥಳೀಯ ನಿವಾಸಿಗಳಿಗೆ ಈ ಮುನ್ನೋಟದ ವಿಚಾರಗಳು ತೀವ್ರ ಹಾನಿಯಂತಹವುಗಳಾಗಿ ಪರಿಣಮಿಸಬಹುದು.
ಆದರೆ, ಪುರಸಭೆ ಮತ್ತು ಸಂಬAಧಿತ ಅಧಿಕಾರಿಗಳು ಈ ಅಗಲೀಕರಣದ ಭವಿಷ್ಯದ ಲಾಭವನ್ನು ಮುಂದಿಟ್ಟುಕೊAಡಿದ್ದಾರೆ. ನಗರ ಸಾರಿಗೆ, ಅಭಿವೃದ್ಧಿ ಯೋಜನೆ, ಮತ್ತು ಜನಜೀವನ ಸುಧಾರಣೆ ಈ ಯೋಜನೆಯ ಪ್ರಮುಖ ಉದ್ದೇಶಗಳಾಗಿವೆ.
ಮಾರುಕಟ್ಟೆ, ಬಸ್ ನಿಲ್ದಾಣ ಸ್ಥಳಾಂತರದ ಪರಿಣಾಮ:
ಹಳೆಯ ಪಟ್ಟಣದ ಹೃದಯ ಭಾಗದಲ್ಲಿರುವ ಮಾರುಕಟ್ಟೆಯನ್ನು ಎಪಿಎಂಸಿ ಸ್ಥಳಕ್ಕೆ ಸ್ಥಳಾಂತರಿಸುವ ಪ್ರಸ್ತಾವನೆಗಳು ಇನ್ನೂ ಚರ್ಚೆಯಲ್ಲಿವೆ. ಇದೇ ರೀತಿಯಾಗಿ ಬಸ್ ನಿಲ್ದಾಣವನ್ನು ಸ್ಥಳಾಂತರಿಸಲು ಮುನ್ಸೂಚನೆ ನೀಡಲಾಗಿದೆ. ಈ ಕ್ರಮಗಳು ಹಳೆ ನಗರದಲ್ಲಿ ಈ ರಸ್ತೆಯ ಅಗಲೀಕರಣದ ಅವಶ್ಯಕತೆಯನ್ನು ಈಗ ಬೇಕೇ ಎಂಬವುದು ಮತ್ತೆ ಪ್ರಶ್ನಿಸುತ್ತದೆ.
ನಂತರದ ಕ್ರಮಗಳು: ಈ ರಸ್ತೆ ಅಗಲೀಕರಣದ ಕುರಿತು ಅಂತಿಮ ನಿರ್ಧಾರವನ್ನು ಜನಪ್ರತಿನಿಧಿಗಳು, ಅಧಿಕಾರಿಗಳು, ಮತ್ತು ನಾಗರಿಕರು ಸೇರಿ ತೀರ್ಮಾನಿಸಬೇಕಾಗಿದೆ. ಈ ಯೋಜನೆ ೧೧ ಕೋಟಿ ರೂಪಾಯಿ ವೆಚ್ಚದಲ್ಲಿ ಸರಿಯಾದ ಹೂಡಿಕೆ ಆಗುವುದೋ ಅಥವಾ ಅವಶ್ಯಕತೆ ಇಲ್ಲದ ಒತ್ತಡವಾಗಿ ಉಳಿಯುವುದೋ ಎಂಬುದು ಮತ್ತೆ ವಿಶ್ಲೇಷಣೆಗೊಳಪಡಬೇಕಾಗಿದೆ. ಈ ಪಟ್ಟು ಸಮಿತಿಯು ಸಮಗ್ರ ವರದಿ ಪ್ರಸ್ತುತಪಡಿಸಿದ ಬಳಿಕ ಅಂತಿಮ ನಿರ್ಧಾರ ಕೈಗೊಳ್ಳುವುದು ಅತೀ ಮುಖ್ಯ ಎಂಬುದು ಸಹ ಕೇಳಿಬರುತ್ತಿದೆ.
ಪರಿಹಾರ ಕೊಟ್ಟರೆ ಅನುಕೂಲ: ಬಹುತೇಕ ರಸ್ತೆ ಬದಿಯ ಆಸ್ತಿಗೆ ಸಂಬಂಧಿತರಿಗೆ ಪರಿಹಾರ ಕೊಟ್ಟು ತೆರುವುಗೊಳಿಸಲು ತಕಾರರಿಲ್ಲ. ಆಸ್ತಿ ಕಟ್ಟಡ ಕಳೆದುಕೊಳ್ಳುತ್ತಿದ್ದೇವೆ. ಪರಿಹಾರ ಕೊಟ್ಟರೆ ಅನುಕೂಲವಾಗುತ್ತದೆ ಎಂದು ರಸ್ತೆಯ ಬದಿಯ ಆಸ್ತಿಯ ಸಂಬಂಧಿತರು ಬೇಡಿಕೆಯಾಗಿದೆ. ಆದರೆ ಪರಿಹಾರ ನೀಡಲು ಸರ್ಕಾರ ಮತ್ತು ಪುರಸಭೆ ನಿಮಾವಳಿಯಲಿದೆ? ಅಷ್ಟೋಂದು ಪರಿಹಾರ ನೀಡುಷ್ಟು ಸಸಕ್ತವಾಗಿದಿಯೇ ಎಂಬ ಪ್ರಶ್ನೆಯೂ ಕೇಳಿಬಂದಿದೆ.
೫೦ ಅಡಿ ಬದಲು ೪೦ಕ್ಕೆಸಮಾಧಾನ: ಆಳಂದ ಮುಖ್ಯ ರಸ್ತೆಯೂ ಒಂದು ಕಾಲಕ್ಕೆ ವ್ಯಾಪಾರ ವೈಹಿವಾಟಿನ ಸಂಚಾರಕ್ಕೆ ಪ್ರಮುಖ ಮಾರ್ಗವಾಗಿ ಮಾರ್ಪಟ್ಟಿತ್ತಾದರು. ಕಳೆದೆರಡು ವರ್ಷಗಳಿಂದ ಇಲ್ಲಿನ ಸರ್ಕಾರಿ ಕಚೇರಿಗಳು ಪಟ್ಟಣದ ಹೊರವಲಯದ ಐದಾರು ಕಿ.ಮೀ. ದೂರಕ್ಕೆ ನಿರ್ಮಿಸಲಾದ ತಾಲೂಕು ಆಡಳಿತ ಭವನಕ್ಕೆ ಸ್ಥಳಾಂತರಿಸಿದ ಹಿನ್ನೆಲೆಯಲ್ಲಿ ಹಾಗೂ ಕೋವಿಡ್ ಬಳಿಕ ಅನೇಕ ಸರ್ಕಾರಿ ನೌಕರರ, ವ್ಯಾಪಾರಿಗಳು, ಶಿಕ್ಷಣ ನೌಕರಿಗಾಗಿ ನೂರಾರು ಮನೆಗಳು ಜಿಲ್ಲಾ ಕೇಂದ್ರ ಕಲಬುರಗಿಗೆ ಸ್ಥಳಾಂತಗೊAಡಿದ್ದು, ಇದರಿಂದ ಕಿರಾಣಿ, ಬಟ್ಟೆ, ಆಸ್ಪತ್ರೆ, ಇಸ್ತ್ರಿ ಹಾಲು ಹಣ್ಣಿನ ವ್ಯಾಪಾರಿಗಳಿಗೆ ಹೊಡೆತ ಬಿದ್ದಿದ್ದು, ಹಾಗೂ ಪಟ್ಟಣದಲ್ಲಿ ಸಾಕಷ್ಟು ಬಾಡಿಗೆ ಮನೆಗಳು ಖಾಲಿಯಾಗಿದ್ದು ಹೀಗೆ ಹಲವು ವಿಧಗಳಲ್ಲಿ ಆಳಂದ ಪಟ್ಟಣಕ್ಕೆ ಆರ್ಥಿಕ ಹೊಡೆತಬಿದ್ದುಕೊಂಡಿದೆ.
ಈಗ ಹಳೆಯ ರಸ್ತೆಯ ಹಿಂದಿನ ಬೇಡಿಕೆಯಂತೆ ಎಂದಾದರೊಮ್ಮಮೆ ಅಗಲೀಕರಣ ಸರಿಯಾದ ಕ್ರಮವಾಗಿದ್ದರು ಸಹ ರಸ್ತೆಯ ಬದಿಯ ಕಟ್ಟಡ ನಿವೇಶನ ಕಳೆದುಕೊಳ್ಳುವವರಿಗೆ ನಷ್ಟ ಎದುರಿಸಬೇಕಾಗಿದ್ದು, ನಷ್ಟವಾದರು ಸರಿ ಆದರೆ ಹಿಂದಿನAತೆ ಈ ರಸ್ತೆಗೆ ಜನ ಹಾಗೂ ವಾಹನ ದಟ್ಟಣೆ ಎಲ್ಲಿಂದ ಮರುಕಳಿಸುವುದು ಎಂಬ ಪ್ರಶ್ನೆ ಎದುರಾಗಿ ಹಳೆಯ ಕಟ್ಟಡಗಳು ತೆರವುಗೊಳಿಸಿ ಅಗಲೀಕರಣ ಅವಶಕತೆ. ಇದೇ ಹಣ ಮತ್ತೊಂಡೆ ಬಳಿಕೆಯಾಗಲಿ ಈಗ ಅಗಲೀಕರಣ ಅವಶಕತೆ ಇಲ್ಲವೆಂಬುದು ಸಹ ಮತ್ತೊಂದು ಮಗ್ಗಲಿನಿಂದ ವಿಶ್ಲೇಷಿಸಲಾಗುತ್ತಿದೆ.
ಸದ್ಯ ೫೦ ಅಡಿ ರಸ್ತೆ ಅಗಲದ ಬದಲು ೪೦ ಅಡಿಗೆ ಅಗಲೀಕರಣದ ನಿರ್ಧಾರ ಸರಿಯಾದ ಕ್ರಮವಾಗಿದೆ ಎಂದು ಕೊಂಚ ಸಮಾಧಾನವು ಜನ ತಂದುಕೊಳ್ಳತೊಡಗಿದ್ದಾರೆ.
ಈ ಎಲ್ಲ ಕಾರಣಗಳಿಂದಾಗಿ, ಈ ರಸ್ತೆಯ ಅಗಲೀಕರಣದಲ್ಲಿ ಹೂಡಿಕೆ ಮಾಡುವುದು ಲಾಭದಾಯಕವೇ ಅಥವಾ ಅನಾವಶ್ಯಕವೆ ಎಂಬುದು ಪುನಃ ಮೌಲ್ಯಮಾಪನಗೊಳ್ಳಬೇಕಾಗಿದೆ. ಅಗಲೀಕರಣಕ್ಕೆ ಸಂಬAಧಿಸಿದAತೆ ಸಾರ್ವಜನಿಕ ಅಭಿಪ್ರಾಯ, ಸ್ಥಳೀಯ ಶಾಸಕರ ಹಾಗೂ ಮಾಜಿ ಶಾಸಕರ ಮಾರ್ಗದರ್ಶನ ಮತ್ತು ಪುರಸಭೆ ಅಧಿಕಾರಿಗಳ ನಿರ್ಧಾರ ಅತ್ಯಂತ ಮುಖ್ಯ.
ಈ ಯೋಜನೆ ಪಟ್ಟಣದ ಅಭಿವೃದ್ಧಿಗೆ ಸಹಕಾರಿಯಾಗುವುದೋ ಅಥವಾ ವ್ಯಾಪ್ತಿಯನ್ನು ಕಡಿಮೆಗೊಳಿಸುವುದೋ ಎಂಬ ಬಗ್ಗೆ ಅಧಿಕಾರಿಗಳು ಮತ್ತು ಸಾರ್ವಜನಿಕರು ಒಂದೇ ವೇದಿಕೆಯಲ್ಲಿ ಚರ್ಚೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳಬೇಕು ಎಂಬುದು ಈಗ ಕೇಳಿಬರಲಾರಂಬಿಸಿದೆ.
ವರದಿ ಡಾ ಅವಿನಾಶ . ಎಸ್ ದೇವನೂರ