ಕಮಲಾನಗರದಿಂದ ಬ್ರಹಾಣಪೂರವರೆಗೆ 16ನೇ ವರ್ಷದ ಪಾದಯಾತ್ರೆ

ಕಮಲಾನಗರದಿಂದ ಬ್ರಹಾಣಪೂರವರೆಗೆ 16ನೇ ವರ್ಷದ ಪಾದಯಾತ್ರೆ

ಕಮಲಾನಗರದಿಂದ ಬ್ರಹಾಣಪೂರವರೆಗೆ 16ನೇ ವರ್ಷದ ಪಾದಯಾತ್ರೆ  

ಮಹಾರಾಷ್ಟ್ರ ರಾಜ್ಯದ ಅಕ್ಕಲಕೋಟ ತಾಲೂಕಿನ ಬ್ರಹಾಣಪೂರ ಗ್ರಾಮದ ಶ್ರೀ ಅನಂತ ಚೈತನ್ಯ ಸಿದ್ದಯ್ಯಯಪ್ಪ ಮಹಾರಾಜರ ದರ್ಶನಕ್ಕಾಗಿ ಕಲಬುರಗಿ ಜಿಲ್ಲೆಯ ಕಮಲಾನಗರದಿಂದ ಭಕ್ತಾದಿಗಳು 16ನೇ ವರ್ಷದ ಪಾದಯಾತ್ರೆಯನ್ನು ಕೈಗೊಂಡಿದ್ದಾರೆ.  

ಈ ಪಾದಯಾತ್ರೆಯಲ್ಲಿ ಕಮಲಾನಗರದ 50 ಕ್ಕು ಹೆಚ್ಚಿನ ಭಕ್ತಾದಿಗಳು ಬಲಗೊಂಡಿದ್ದಾರೆ , ಗಂಗಪ್ಪಗೌಡ, ಚಂದ್ರಕಾಂತ್ ಬಿರಾದರ್, ಶಿವಕುಮಾರ ಭೀಮಶ, ನಾಗೇಂದ್ರ, ವೀರಭದ್ರಪ್ಪ, ಸಿದ್ದರಾಮಪ್ಪ, ಭೀಮಶ್ಯಾ, ಅಪ್ಪರಾಯು, ನೀಲಕಂಠ ಬಿ, ಶರಣಪ್ಪ ವಿ, ಬಸವರಾಜ್, ರಾಜಕುಮಾರ್ ಕೆ, ಮತ್ತು ಗಣಪತಿ ಪಾಟೀಲ್ ಭಾಗವಹಿಸಿದ್ದಾರೆ.  

ಭಕ್ತಿಯಿಂದ, ಶ್ರದ್ಧೆಯಿಂದ ಶ್ರೀ ಸಿದ್ದಯ್ಯ ಮಹಾರಾಜರ ದರ್ಶನ ಪಡೆಯಲು ಈ ಪಾದಯಾತ್ರೆ ಸಾಂಪ್ರದಾಯಿಕ ಭಕ್ತಿಧಾರೆಯ ಪ್ರತೀಕವಾಗಿದೆ. ಭಕ್ತರ ಉತ್ಸಾಹ ಮತ್ತು ಸಹನೆ ಈ ಯಾತ್ರೆಯಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದೆ.  

ಈ ಸಂದರ್ಭದಲ್ಲಿ ಭಕ್ತಾದಿಗಳು ಪರಸ್ಪರ ಸಹಕಾರದಿಂದ, ನಂಬಿಕೆ ಮತ್ತು ಶ್ರದ್ಧೆಯಿಂದ ಪಾದಯಾತ್ರೆಯನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ.