ವಾಡಿ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ನಾಲತವಾಡ ಶ್ರೀ ವೀರೇಶ ಶರಣರ ಪುರಾಣ ಪಾರಂಭ

ವಾಡಿ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ನಾಲತವಾಡ ಶ್ರೀ ವೀರೇಶ ಶರಣರ ಪುರಾಣ ಪಾರಂಭ
ವಾಡಿ: ಪಟ್ಟಣದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ನಾಲತವಾಡ ಶ್ರೀ ವೀರೇಶ ಶರಣರ ಪುರಾಣ ದಿನಾಂಕ 12/02/25 ರಿಂದ 26/02/25 ರವರೆಗೆ ನೇರವೇರುವುದು ಎಂದು ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಶರಣಗೌಡ ಪಾಟೀಲ ಚಾಮನೂರ ತಿಳಿಸಿದ್ದಾರೆ.
ಈ ಪುರಾಣ ಕಾರ್ಯಕ್ರಮದಲ್ಲಿ ರಾವೂರಿನ ಶ್ರೀ ಸಿದ್ಧಲಿಂಗೇಶ್ವರ ಸಂಸ್ಥಾನ ಮಠದ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳು ಸಾನಿಧ್ಯ ವಹಿಸುವರು,
ಪುರಾಣ,ಪ್ರವಚನಕಾರರಾಗಿ ಶಿವಪೂರದ ಶ್ರೀ ಶಿವಲಿಂಗೇಶ್ವರ ಸಂಸ್ಥಾನ ಮಠದ ಶ್ರೀ ಶಿವಲಿಂಗ ಮಹಾಸ್ವಾಮಿಗಳು,ಸಂಗೀತಕಾರರಾಗಿ ಮಹೇಶ್ ನರಬೋಳ,ತಬಲಾವಾದಕರಾಗಿ ತೋಟೇಂದ್ರ ಕರದಾಳ ಕಲ್ಲಾ ಭಾಗವಹಿಸುವರು.
ಪ್ರತಿದಿನ ಸಂಜೆ 07:00ಗಂಟೆ ಯಿಂದ ರಾತ್ರಿ 10:00ಗಂಟೆವರೆಗೆ ಪುರಾಣ ಕಾರ್ಯಕ್ರಮ ನಡೆಯುವುದು,ಫೆ.26ರ ಮಹಾ ಶಿವರಾತ್ರಿ ದಂದು ಸಂಜೆ 06:00 ಗಂಟೆಗೆ ಪುರಾಣ ಕಾರ್ಯಕ್ರಮದ ಮಹಾ ಮಂಗಲ ಮತ್ತು ಲಕ್ಷದೀಪೋತ್ಸವ ಜರುಗುವುದು ಎಂದು ಹೇಳಿದ್ದಾರೆ.