ಪ್ರಕೃತಿ ರಕ್ಷಣೆಯ ಜವಾಬ್ದಾರಿ ನಮ್ಮೆಲ್ಲರ ಹೊಣೆ ಬಸನ್ನ ಗೌಡ ಮಾರಡಗಿ

ಪ್ರಕೃತಿ ರಕ್ಷಣೆಯ ಜವಾಬ್ದಾರಿ ನಮ್ಮೆಲ್ಲರ ಹೊಣೆ ಬಸನ್ನ  ಗೌಡ ಮಾರಡಗಿ

ಪ್ರಕೃತಿ ರಕ್ಷಣೆಯ ಜವಾಬ್ದಾರಿ ನಮ್ಮೆಲ್ಲರ ಹೊಣೆ ಬಸನ್ನ ಗೌಡ ಮಾರಡಗಿ 

ಯಡ್ರಾಮಿ:ಯಡ್ರಾಮಿ ತಾಲೂಕಿನ ಬಿಳವಾರ ಗ್ರಾಮದ ಪಶು ವೈದ್ಯಕೀಯ ಆಸ್ಪತ್ರೆಯ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಸಸಿ ನೆಡುವ ಅಭಿಯಾನಕ್ಕೆ ಚಾಲನೆ ನೀಡಲಾಯಿತು ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಭೀಮನಗೌಡ ಹಾಗೂ ಗ್ರಾಮ ಪಂಚಾಯತ ಕಾರ್ಯದರ್ಶಿ ಸದಾನಂದ ಪಾಟೀಲ್ ಹಾಗೂ ಗ್ರಾಮ ಪಂಚಾಯತ್ ಬಿಲ್ ಕಲೆಕ್ಟರ್ ಬಸನಗೌಡ ಮಾರಡಗಿ ಹಾಗೂ ಪಶು ವೈದ್ಯಕೀಯ ವೈದ್ಯಧಿಕಾರಿಗಳು ಮತ್ತು ಸಿಬ್ಬಂದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು ಈ ಸಂದರ್ಭದಲ್ಲಿ ಬಿಳವಾರ ಗ್ರಾಮ್ ಪಂಚಾಯತ ಬಿಲ್ ಕಲೆಕ್ಟರ್ ಬಸನ್ನಗೌಡ ಮಾರಡಗಿ ಅವರು ಈ ವಿಶ್ವ ಪರಿಸರ ದಿನಾಚರಣೆಯ ಕಾರ್ಯಕ್ರಮದ ಕುರಿತು ಮಾತನಾಡಿದರು ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ ಪ್ರಕೃತಿ ರಕ್ಷಣೆಯಿಂದ ಪ್ರತಿ ಜೀವಸಂಕುಲವನ್ನು ಸಂರಕ್ಷಣೆ ಮಾಡಬಹುದು ಆದರೆ ಇಂದಿನ ಮನುಷ್ಯರು ಹಣ ಗಳಿಸುವ ದುರಾಸೆಯಿಂದ ತಮ್ಮ ತಮ್ಮ ಜಮೀನಿನಲ್ಲಿ ಇರುವಂತಹ ಮರ ಗಿಡಗಳನ್ನು ನಾಶ ಮಾಡಿ ಪ್ರಕೃತಿಯ ವಿಕೋಪಕ್ಕೆ ಗುರಿಯಾಗಿದ್ದಾರೆ ಆದ್ದರಿಂದ ಕಾಲಕ್ಕೆ ಸರಿಯಾಗಿ ಮಳೆಯಾಗದೆ ಅತಿವೃಷ್ಟಿ ಅಥವಾ ಅನಾವೃಷ್ಟಿಯಿಂದ ಪ್ರಕೃತಿಯ ವಿಕೋಪಕ್ಕೆ ಗುರಿಯಾಗಿದ್ದೆವೆ. ಇದನ್ನು ಸರಿಪಡಿಸಬೇಕಾದರೆ ಪ್ರತಿಯೊಬ್ಬ ರೈತರು ತಮ್ಮ ತಮ್ಮ ಜಮೀನಿನ ಬದುಗಳ ಮೇಲೆ ಮರ ಗಿಡಗಳನ್ನು ನೆಟ್ಟು ಮಣ್ಣಿನ ಸಂರಕ್ಷಣೆ ಮಾಡಬೇಕು ಜೀವ ಸಂಕುಲದ ಸಂರಕ್ಷಣೆಗೆ ಮುಂದಾಗಬೇಕು ಇಲ್ಲದಿದ್ದರೆ ಮುಂದೆ ಬರುವಂತಹ ದಿನಗಳಲ್ಲಿ ಮನುಷ್ಯನ ದುರಾಸೆಗೆ ಬರಗಾಲದಂತ ಪರಿಸ್ಥಿತಿ ಹೆದರಿಸಬಹುದು ಆದ್ದರಿಂದ ಮುಂದಿನ ಯುವ ಪೀಳಿಗೆಯ ಹಿತದೃಷ್ಟಿಯಿಂದ ಪ್ರತಿಯೊಬ್ಬರು ಪರಿಸರ ಸಂರಕ್ಷಣೆಯನ್ನು ಮಾಡುವ ಹೊಣೆಯನ್ನೂ ಪ್ರತಿಯೊಬ್ಬರು ಸಂಕಲ್ಪ ಮಾಡಬೇಕು ಎಂದು ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ ಬಿಲ್ ಕಲೆಕ್ಟರ್ ಬಸನಗೌಡ ಮಾರಡಗಿ ಅವರು ಕಾರ್ಯಕ್ರಮ ಕುರಿತು ಮಾತನಾಡಿದರು

ವರದಿ ಜೆಟ್ಟೆಪ್ಪ ಎಸ ಪೂಜಾರಿ