ಮಾನವನ ವಿಕಾಸಕ್ಕೆ ಮೂಲ ಕಾರಣ ಪರಿಸರ - ಹಾರಕೂಡ ಶ್ರೀ

ಮಾನವನ ವಿಕಾಸಕ್ಕೆ ಮೂಲ ಕಾರಣ ಪರಿಸರ - ಹಾರಕೂಡ ಶ್ರೀ

ಮಾನವನ ವಿಕಾಸಕ್ಕೆ ಮೂಲ ಕಾರಣ ಪರಿಸರ - ಹಾರಕೂಡ ಶ್ರೀ

ಮಾನವನ ವಿಕಾಸಕ್ಕೆ ಮೂಲ ಕಾರಣವಾದ ಪರಿಸರವನ್ನು ಯೋಗ್ಯ ರೀತಿಯಲ್ಲಿ ಬಳಸಿ, ಮುಂದಿನ ಜನಾಂಗಕ್ಕೆ ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಆಧ್ಯ ಕರ್ತವ್ಯವಾಗಿದೆ ಎಂದು ಹಾರಕೂಡದ ಪೂಜ್ಯ ಡಾ. ಚನ್ನವೀರ ಶಿವಾಚಾರ್ಯರು ನುಡಿದರು.

 ಬಸವಕಲ್ಯಾಣ ತಾಲೂಕಿನ ಹಾರಕೂಡ ಶ್ರೀಮಠದಲ್ಲಿ ಶ್ರೀ ಚನ್ನಬಸವೇಶ್ವರ ಸಂಸ್ಥಾನ ಹಿರೇಮಠದ ವತಿಯಿಂದ ಆಯೋಜಿಸಿದ ವಿಶ್ವ ಪರಿಸರ ದಿನಾಚರಣೆಯ ನಿಮಿತ್ಯ ಪರಿಸರ ಸಂರಕ್ಷಣೆ ಜನ ಜಾಗೃತಿ ಕಾರ್ಯಕ್ರಮದ ಸನ್ನಿಧಾನ ವಹಿಸಿ ವಾತನಾಡಿದ ಶ್ರೀಗಳು ಪ್ರಕೃತಿ ಮಾನವನ ಮೂಲ ಅಗತ್ಯಗಳನ್ನು ಪೂರೈಸುತ್ತದೆ ಹೊರತು ಆಕಾಂಕ್ಷೆಗಳಲ್ಲ ಎನ್ನುವ ಮಹಾತ್ಮ ಗಾಂಧೀಜಿ ರವರ ಮಾತಿನ ಗಾಂಭೀರ್ಯತೆಯನ್ನು ಅರಿತುಕೊಂಡು ನಿಸರ್ಗದ ಮಡಿಲು ಹಾಳಾಗದಂತೆ ಎಚ್ಚರ ವಹಿಸಬೇಕು.

 ಪ್ಲಾಸ್ಟಿಕ್ ದುರ್ಬಳಕೆಯಿಂದ ಆಗುತ್ತಿರುವ ಪರಿಸರ ಮಾಲಿನ್ಯದ ಸೂಕ್ಷ್ಮತೆಯನ್ನು ಅರಿತು ಪ್ರಕೃತಿ ಮಾತೆಯ ಸೇವೆಗಾಗಿ ಸಸ್ಯ ಶಾಮಲೆಯ ಸಂಪಧೀಕರಣಕ್ಕಾಗಿ ಎಲ್ಲರೂ ಕೈಜೋಡಿಸುವಂತೆ ಕರೆ ನೀಡಿದರು.

ಪರಿಸರ ವಾಹಿನಿ ಬೀದರ ಅಧ್ಯಕ್ಷ ಶೈಲೆಂದ್ರ ಕಾವಡಿ ಪ್ರಾಸ್ತಾವಿಕವಾಗಿ ಮಾತನಾಡಿ ಪ್ಲಾಸ್ಟಿಕ್ ಮಾಲಿನ್ಯ ಭೂಮಿಯಲ್ಲಿ ನೀರು ಇಂಗುವುದಕ್ಕೂ ಅಡ್ಡಿ ಪಡಿಸುವುದರಿಂದ ಅಂತರ್ಜಲ ಮಟ್ಟ ಕುಸಿಯಲು ಕಾರಣವಾಗಿದೆ ಎಂದರು.

ಅಸ್ಲಾಂ ಮಿಯಾ ಚಿಟ್ಟಗುಪ್ಪ ಸ್ವಾಗತಿಸಿದರು.

 ಬೀದರ ಜಿಲ್ಲಾ ಪಂಚಾಯಿತಿ ನಿವೃತ್ತ ಉಪ ಕಾರ್ಯದರ್ಶಿ ಬಿ.ಕೆ. ಹಿರೇಮಠ, ಮಲ್ಲಿನಾಥ ಹಿರೇಮಠ ಹಾರಕೂಡ, ಪರಿಸರ ವಾಹಿನಿ ಬೀದರ ಅಧ್ಯಕ್ಷರಾದ ಸೈಲೆಂದ್ರ ಕಾವಡೆ, ಪಂಡಿತರಾವ ಪಾಟೀಲ, ವಿಜಯಕುಮಾರ ಸಂಗೊಳಗೆ, ಅಸ್ಲಾಂ ಮಿಯಾ ಚಿಟ್ಟಗುಪ್ಪ ಉಪಸ್ಥಿತರಿದ್ದರು.

ಚಿತ್ರ : ಬಸವಕಲ್ಯಾಣ ತಾಲೂಕಿನ ಹಾರಕೂಡ ಶ್ರೀಮಠದಲ್ಲಿ ಶ್ರೀ ಚನ್ನಬಸವೇಶ್ವರ ಸಂಸ್ಥಾನ ಹಿರೇಮಠದ ವತಿಯಿಂದ ಆಯೋಜಿಸಿದ ವಿಶ್ವ ಪರಿಸರ ದಿನಾಚರಣೆಯಯನ್ನು ಹಾರಕೂಡದ ಪೂಜ್ಯಶ್ರೀ ಡಾ. ಚನ್ನವೀರ ಶಿವಾಚಾರ್ಯರು ಭಕ್ತರಿಗೆ ಸಸ್ಯ ನೀಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

 ಬೀದರ ಜಿಲ್ಲಾ ಪಂಚಾಯಿತಿ ನಿವೃತ್ತ ಉಪ ಕಾರ್ಯದರ್ಶಿ ಬಿ.ಕೆ. ಹಿರೇಮಠ, ಮಲ್ಲಿನಾಥ ಹಿರೇಮಠ ಹಾರಕೂಡ, ಸೈಲೆಂದ್ರ ಕಾವಡೆ, ಪಂಡಿತರಾವ ಪಾಟೀಲ, ವಿಜಯಕುಮಾರ ಸಂಗೊಳಗೆ, ಅಸ್ಲಾಂ ಮಿಯಾ ಚಿಟ್ಟಗುಪ್ಪ ಮುಂತಾದವರು ಉಪಸ್ಥಿತರಿದ್ದರು.