— ಕುಡಿಯುವ ನೀರಿನ ಸಮಸ್ಯೆ ಕುರಿತು ಪಿಡಿಓ ಹಾಗೂ ಅಧ್ಯಕ್ಷರ ನಿರ್ಲಕ್ಷ ಧೋರಣೆಗೆ ತೀವ್ರ ಆಕ್ರೋಶ

ನಂದಿಹಳ್ಳಿ ಗ್ರಾಮಸ್ಥರಿಂದ ಕಾಲಿ ಕೊಡದೊಂದಿಗೆ ಉಗ್ರ ಪ್ರತಿಭಟನೆ
— ಕುಡಿಯುವ ನೀರಿನ ಸಮಸ್ಯೆ ಕುರಿತು ಪಿಡಿಓ ಹಾಗೂ ಅಧ್ಯಕ್ಷರ ನಿರ್ಲಕ್ಷ ಧೋರಣೆಗೆ ತೀವ್ರ ಆಕ್ರೋಶ
ಕಲಬುರ್ಗಿ ಜಿಲ್ಲೆಯ ಯಡ್ರಾಮಿ ತಾಲೂಕಿನ ಯಲಗೋಡ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಒಳಪಡುವ ನಂದಿಹಳ್ಳಿ ಗ್ರಾಮದಲ್ಲಿ ಎಸ್ಸಿ, ಎಸ್ಟಿ ವಾರ್ಡ್ನ ನಿವಾಸಿಗಳು ಹಲವು ವರ್ಷಗಳಿಂದ ಕುಡಿಯುವ ನೀರಿನ ಸಮಸ್ಯೆಯಿಂದ ತತ್ತರಿಸಿದ್ದಾರೆ. ಈ ಕುರಿತು ಅವರು ಹಲವಾರು ಬಾರಿ ಗ್ರಾಮ ಪಂಚಾಯತಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ.
ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಹಾಗೂ ಅಧ್ಯಕ್ಷರ ನಿರ್ಲಕ್ಷ ಧೋರಣೆಯ ವಿರುದ್ಧ ಜಯ ಕರ್ನಾಟಕ ಸಂಘದ ಎಸ್ಸಿ-ಎಸ್ಟಿ ಘಟಕದ ತಾಲೂಕು ಅಧ್ಯಕ್ಷ ಮೌನೇಶ್ ಬಡಿಗರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಈ ಹಿನ್ನೆಲೆಯಲ್ಲಿ ನಂದಿಹಳ್ಳಿ ಗ್ರಾಮಸ್ಥರು ಕಾಲಿ ಕೊಡದೊಂದಿಗೆ ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.
ಈ ಪ್ರತಿಭಟನೆಯಲ್ಲಿ ಅಂಬರೀಶ್ ಕಟ್ಟಿ, ಪರಶುರಾಮ್ ಕಮಲಾಕರ್, ಪ್ರಜ್ವಲ್ ಕಮಲಾಕರ್, ನಿಂಗಪ್ಪ ಕಮಲಾಕರ್, ಶ್ರೀಶೈಲ್ ಕಟ್ಟಿ, ಸಚಿನ್ ಶರಣಪ್ಪ, ಬಸಲಿಂಗಪ್ಪ ಬಡಿಗೇರ್, ಮಲ್ಲಪ್ಪ ನಿಂಗಪ್ಪ ನಂದಿಹಳ್ಳಿ, ಲಕ್ಷ್ಮಣ್ ತಂದೆ ನಿಂಗಪ್ಪ ಹೊಸಮನಿ, ದೇವಪ್ಪ ತಂದೆ ನಿಂಗಪ್ಪ ಹೊಸ್ಮನಿ ಸೇರಿದಂತೆ ಹಲವಾರು ಗ್ರಾಮಸ್ಥರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಮೌನೇಶ್ ಬಡಿಗರ್ ಅವರು, "ತಾಲೂಕು ಹಾಗೂ ಜಿಲ್ಲಾ ಪಂಚಾಯತ್ ಅಧಿಕಾರಿಗಳ ನಿರ್ಲಕ್ಷತೆ, ಶಾಸಕರ ಬಗ್ಗದ ಧೋರಣೆ ಈ ಸಮಸ್ಯೆಗೆ ಕಾರಣವಾಗಿದೆ," ಎಂದು ತಮ್ಮ ಅಸಮಾಧಾನವನ್ನು ಹೊರ ಹಾಕಿದರು.