ಮುಖ್ಯಮಂತ್ರಿ ಪದಕ ಪುರಸ್ಕೃತರಿಗೆ ಅಭಿನಂದನೆ ಶಿಸ್ತಿಗೆ ಇನ್ನೊಂದು ಹೆಸರು ಪೋಲಿಸ್ ಇಲಾಖೆ: ವರಜ್ಯೋತಿ ಬಂತೇಜಿ

ಮುಖ್ಯಮಂತ್ರಿ ಪದಕ ಪುರಸ್ಕೃತರಿಗೆ ಅಭಿನಂದನೆ
ಶಿಸ್ತಿಗೆ ಇನ್ನೊಂದು ಹೆಸರು ಪೋಲಿಸ್ ಇಲಾಖೆ: ವರಜ್ಯೋತಿ ಬಂತೇಜಿ
ಕಲಬುರಗಿ:ಇವತ್ತಿನ ಹಲವಾರು ಇಲಾಖೆಗಳಲ್ಲಿ ಅತ್ಯಂತ ಶಿಸ್ತು ಬದ್ಧತೆಯಿಂದ ಕೂಡಿದ ಇಲಾಖೆ ಪೋಲಿಸ್ ಇಲಾಖೆ ಯಾಗಿದೆ.ಕಲಬುರಗಿ ಜಿಲ್ಲೆಯ ಐದು ಜನರಿಗೆ ನಮ್ಮವರಿಗೆ ಮುಖ್ಯಮಂತ್ರಿ ಚಿನ್ನದ ಪದಕ ಲಭಿಸಿದ್ದು ನನಗೆ ಸಂತೋಷ
ಶಿಸ್ತಿಗೆ ಇನ್ನೊಂದು ಹೆಸರೇ ಪೋಲಿಸ್ ಇಲಾಖೆ ಅಣದೂರಿನ ಪೂಜ್ಯ ವರ ಜ್ಯೋತಿ ಬಂತೇಜಿಯವರು ನುಡಿದರು.
ಕನ್ನಡ ಭವನದ ಸುವರ್ಣ ಸಭಾ ಭವನದಲ್ಲಿ ಜಿಲ್ಲಾ ಸಿರಿ ಗನ್ನಡ ವೇದಿಕೆ ಮತ್ತು ಜನಕಲ್ಯಾಣ ಎಜ್ಯುಕೇಷನ್ ? ರೂರಲ್ ಡೆವಲಪ್ಮೆಂಟ್ ಟ್ರಸ್ಟ್ ಇವುಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ ಮುಖ್ಯಮಂತ್ರಿ ಚಿನ್ನದ ಪದಕ ವಿಜೇತ ಪುರಸ್ಕೃತರಿಗೆ ಹಮ್ಮಿಕೊಂಡ ಸಮಾರಂಭದ ಸಾನಿ ಧ್ಯ ವಹಿಸಿಕೊಂಡು ಆಶೀರ್ವಚನ ನೀಡಿ ಮಾತನಾಡಿದ ಅವರು ಇವತ್ತು ಒಳ್ಳೆಯವರಿಗೆ ಒಳ್ಳೆಯವರಾಗಿ; ಕೆಟ್ಟದ್ದು ಕಂಡರೆ ಶಿಕ್ಷಿಸಿ ತಮ್ಮ ಎಡೆ ಬಿಡದ ಶಿಸ್ತು ಪರಿಪಾಲಕರು ಅಲ್ಲದೇ ನನ್ನ ಜೀವನದಲ್ಲಿ ಅವರ ಪಾತ್ರ ನಾನು ಅವರು ಮಾಡಿದ ಸಹಾಯ ಮರೆಯುವಂತಿಲ್ಲವೆAದರು.
ಕೆ.ಎಸ್.ಪಿ.ಎಸ್. ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಮಹೇಶ ಮೇಘಣ್ಣನವರ ಉದ್ಘಾಟಿಸಿ ನಮ್ಮ ಇಲಾಖೆಯ ಸೇವೆಗೆ ಸಂದ ಗೌರವವಾಗಿದೆ ಇಂತಹ ಅಭಿನಂದನ ಸಮಾರಂಭದ ಕಾರ್ಯ ಮಾಡಿದ ವೇದಿಕೆಯ ಕಾರ್ಯ ಅನುಕರಣೀಯವೆಂದರು.
ಅಭಿನAದನಾ ಭಾಷಣ ಮಾಡಿದ ಸಾಹಿತಿ ಮತ್ತು ಜಿಲ್ಲಾ ಸಿರಿಗನ್ನಡ ವೇದಿಕೆ ಅಧ್ಯಕ್ಷ ಡಾ.ಗವಿಸಿದ್ಧಪ್ಪ ಪಾಟೀಲ ಅವರು ದಕ್ಷ,ಪ್ರಮಾಣಿಕ ಸೇವೆಯನ್ನು ಮಾಡುತ್ತಾ ನಮ್ಮ ಜೀವನಕ್ಕೆ ರಕ್ಷಣೆ ನೀಡುವ ಕೆಲಸ ಮಾಡಿ,ತಮ್ಮ ಮನೆ ಮಠ,ವಯಕ್ತಿಕ ಜೀವನದಿಂದ ದೂರವಿದ್ದು ಜನರ ಸೇವೆ ಮಾಡುವುದು,ಕಠಿಣ ಸಮಸ್ಯೆಗಳನ್ನು ಎದುರಿಸಿ,ತಮ್ಮ ಜೀ ವದ ಹಂಗು ತೊರೆದು ಮಾಡುವ ಕರ್ತವ್ಯ, ಅವರ ಇಲಾಖೆ ಯ ಸೇವೆಯನ್ನು ಪರಿಗಣಿಸಿ ಮುಖ್ಯಮಂತ್ರಿ ಚಿನ್ನದ ಪದಕ
ಐದು ಜನರಿಗೆ ಲಭಿಸಿದ್ದು ಅವರ ಸೇವೆಗೆ ಸಂದ ಗೌರವ ವೆಂದು ಅವರಿಗೆ ಹೆಚ್ಚು ಪ್ರಶಸ್ತಿ ಗೌರವ ಲಭಿಸಲಿ ಬುದ್ಧ, ಬಸವ,ಅಂಬೇಡ್ಕರ್ ತತ್ವ ಆದರ್ಶ ಮೈಗೂಡಿಸಿಕೊಂಡವ ರೆಂದು ಬಣ್ಣಿಸಿದರು.
ಅಧ್ಯಕ್ಷತೆವಹಿಸಿದ ಜನಕಲ್ಯಾಣ ಟ್ರಸ್ಟ್ ಅಧ್ಯಕ್ಷ ಸುರೇಶ್ ಎಸ್.ಕಾನೇಕರ ಅವರು ನಾವು ದಿನನಿತ್ಯ ನೆಮ್ಮದಿಯಿಂದ ನಿದ್ದೆ ಮಾಡುತ್ತಿದ್ದೇವೆ ಅಂದರೆ ಪೋಲಿಸ್ ಇಲಾಖೆಯಿಂದ ಅವರು ನಮಗಾಗಿ ಸೇವೆಮಾಡುತ್ತಾರೆ; ನಾವು ಗೌರವಿಸು ವುದು ಆದ್ಯ ಕರ್ತವ್ಯ ಎಂದರು. ಅಭಿನಂದಿತರ ಪರವಾಗಿ ಚಿಂಚೋಳಿ ಸರ್ಕಲ್ ಇನಸ್ಪೆಕ್ಟರ ಕಪಿಲದೇವ ಗಢದ ಅವರು ನಮ್ಮ ಕೆಲಸಕ್ಕೆ ಸಂದ ಗೌರವ ಅಲ್ಲದೇ ಬುದ್ಧ,ಅಂಬೇಡ್ಕರ್, ಮತ್ತು ತಂದೆ- ತಾಯಿಯ ಪುಣ್ಯದ ಕೆಲಸದಿಂದ ಲಭಿಸಿದೆ ಎಂದರು.ಆಳಂದ ಪೋಲಿಸ್ ಇನ್ಸ್ಪೆಕ್ಟರ್ ಶರಣಬಸಪ್ಪ ಕೊಡ್ಲಾ ಅವರು ನಮ್ಮ ಹದಿನೆಂಟು ವರ್ಷದ ಸೇವೆ,ಒಳ್ಳೆಯ ಇಲಾಖೆ ಸೇವೆ ಮತ್ತು ಅಧಿಕಾರಿಗಳ ಶಿಫಾರಸು ಮಾಡಿದ ಸೇವೆ ಒಳ್ಳೆಯ ಸಮಯಕ್ಕೆ ಬಂದಿದೆ ಇನ್ನೂ ಕೆಲಸ ಮಾಡಲು ಸ್ಪೂರ್ತಿ ತಂದಿದೆ ಎಂದರು.
ಕಪಿಲದೇವ ಗಢದ,ಜೈಶ್ರೀ ಹೊಡಲ್,ಶರಣಬಸಪ್ಪ ಕೊಡ್ಲಾ,ಜೈಭೀಮ ಝಳಕಿ,ಅಮರ ತೇಲ್ಕರ್,ಅವರಿಗೆ ಸನ್ಮಾನಿಸಿ ಗೌರವ ಪತ್ರ ನೀಡಲಾಯಿತು.ತಾಲೂಕಾಧ್ಯಕ್ಷ ಡಾ.ಸಿದ್ಧಲಿಂಗ ದಬ್ಬಾ ಸ್ವಾಗತಿಸಿದರು, ಡಾ.ಸಿದ್ದಪ್ಪ ಹೊಸ ಮನಿ ಪ್ರಧಾನ ಕಾರ್ಯದರ್ಶಿ ಪ್ರಾಸ್ತಾವಿಕ ನುಡಿ ಆಡಿದರು.
ಡಾ.ಶ್ರೀಮಂತ ಹೊಳ್ಕರ್ ಮತ್ತು ಡಾ.ರಾಜಕುಮಾರ ಮಾಳ ಗೆ ನಿರೂಪಿಸಿದರು ವೇದಿಕೆ ಕಾರ್ಯದರ್ಶಿ ಡಾ.ಶೀಲಾದೇವಿ ಎಸ್.ಬಿರಾದಾರ ನಿಂದಿಸಿದರು.