ಕಾಫಿ ಉದ್ಯಮದ ಜೊತೆಗೆ ಸ್ನೇಹ ಸೇತು ನಿರ್ಮಾಣ :ನ್ಯಾಯವಾದಿ ಶಿಲ್ಪಾ ಗೋಗಿ

ಕಾಫಿ ಉದ್ಯಮದ ಜೊತೆಗೆ ಸ್ನೇಹ ಸೇತು ನಿರ್ಮಾಣ :ನ್ಯಾಯವಾದಿ  ಶಿಲ್ಪಾ ಗೋಗಿ

ಕಾಫಿ ಉದ್ಯಮದ ಜೊತೆಗೆ ಸ್ನೇಹ ಸೇತು ನಿರ್ಮಾಣ :ನ್ಯಾಯವಾದಿ ಶಿಲ್ಪಾ ಗೋಗಿ

ಕಡೇಚೂರ್ ಗ್ರೂಪ್ ಆಫ್ ಹೋಟೆಲ್ ಎಂಡಿಪಿ ಕಾಫಿ ಹೌಸ್ ಶುಭಾರಂಭ

ಬೆಂಗಳೂರು : ಪ್ರಸಕ್ತ ಕಾಫಿ ಉದ್ಯಮ ವಿಸ್ತಾರಗೊಳ್ಳುತ್ತಿದ್ದು ಕೇವಲ ಉದ್ಯಮವಾಗದೆ ಸ್ನೇಹ ಸೇತು ನಿರ್ಮಾಣದ ಕೇಂದ್ರವಾಗಿ ಪರಿವರ್ತನೆಯಾಗುತ್ತಿದೆ ಎಂದು ಕೆ ಎ ಟಿ ಯ ನಿಕಟ ಪೂರ್ವ ಸರಕಾರಿ ಅಭಿಯೋಜಕರಾದ ಹೈಕೋರ್ಟ್ ನ್ಯಾಯವಾದಿ ಶ್ರೀಮತಿ ಶಿಲ್ಪಾ ಗೋಗಿ ಅಭಿಪ್ರಾಯ ಪಟ್ಟರು.

    ಬೆಂಗಳೂರಿನ ಗಾಂಧಿನಗರದಲ್ಲಿ ಕಲಬುರಗಿಯ ಕಡೇಚೂರ್ ಗ್ರೂಪ್ ಆಫ್ ಹೋಟೆಲ್ ವತಿಯಿಂದ ಏ. 6 ರಂದು ಆರಂಭಗೊಂಡ ವಿಂಟೇಜ್ ಪಾರ್ಕ್ ಹೋಟೆಲ್ ನಲ್ಲಿ ಪ್ರತಿಷ್ಠಿತ ಎಂ ಡಿ ಪಿ ಕಾಫಿ ಹೌಸ್ ಗ್ರೂಪ್ ನವರ 82ನೇ ಶಾಖೆಯನ್ನು ಉದ್ಘಾಟನೆ ಮಾಡಿ ಮಾತನಾಡಿ ಬೆಂಗಳೂರಿನ ಕಾಫಿಯು ವಿಶ್ವಮಟ್ಟದಲ್ಲಿ ಜನಪ್ರಿಯತೆ ಪಡೆದಿದ್ದು ಎಂಡಿಪಿ ಗ್ರೂಪ್ ಕಾಫಿ ಹೌಸ್ ಶಾಖೆಯನ್ನು ಆರಂಭಿಸಿ ಕಾಫಿಯನ್ನು ಜನಪ್ರಿಯಗೊಳಿಸುತ್ತಿರುರುವುದಕ್ಕೆ ಅಭಿನಂದನೆ ಮತ್ತು ಗ್ರಾಹಕರಿಗೆ ರುಚಿಗೆ ತಕ್ಕಂತೆ ಸ್ವಾದಭರಿತ ಕಾಫಿ ಮಾರಾಟ ರಂಗದಲ್ಲಿ ಇನ್ನಷ್ಟು ಕೀರ್ತಿ ಪಡೆಯಲಿ ಎಂದು ಶುಭ ಹಾರೈಸಿದರು. 

   ಹೈಕೋರ್ಟ್ ನ್ಯಾಯವಾದಿ ಭಾರ್ಗವ್,ಎಂಡಿಪಿ ಗ್ರೂಪ್ ಮುಖ್ಯಸ್ಥರಾದ ಮಹಾದೇವಪ್ರಸಾದ್,ವಿಂಟೇಜ್ ಹೋಟೆಲ್ ಮಾಲಕರಾದ ರಾಕೇಶ್ ಜೈನ್,ಮಹೇಂದ್ರ ಜೈನ್, ವಿಟೇಜ್ ಪಾಲುದಾರ ಶ್ರೇಯಾಂಕ ಪೆರ್ಲ ಉಪಸ್ಥಿತರಿದ್ದು ಶುಭ ಹಾರೈಸಿದರು. ಕಡೇಚೂರ್ ಗ್ರೂಪ್ ಆಫ್ ಹೋಟೆಲ್ ಮುಖ್ಯಸ್ಥರಾದ ಡಾ.ರಾಜೇಶ್ ಕಡೇಚೂರ್ ಅತಿಥಿಗಳಿಗೆ ಹೂಗುಚ್ಛ ನೀಡಿ ಸ್ವಾಗತಿಸಿದರು.

ಅಂಬಾ ಭವಾನಿ ಹೋಟೆಲ್ ನ ಯೋಗೇಶ್ ರಾಥೋರ್ ಧನ್ಯವಾದವಿತ್ತರು.