ಅನುದಾನಿತ ಶಾಲೆಗಳಲ್ಲಿ ಶಾಲಾ ಬ್ಯಾಗ್ ಭಾರ ಕಡಿಮೆಗೊಳಿಸುವಂತೆ ದಯಾನಂದ ಯಂಕAಚಿ ನೇತೃತ್ವದಲ್ಲಿ ಶಾಲಾ ಶಿಕ್ಷಣ ಇಲಾಖೆಯ ಅಪರ ಆಯುಕ್ತರಿಗೆ ಮನವಿ

ಅನುದಾನಿತ ಶಾಲೆಗಳಲ್ಲಿ ಶಾಲಾ ಬ್ಯಾಗ್ ಭಾರ ಕಡಿಮೆಗೊಳಿಸುವಂತೆ ದಯಾನಂದ ಯಂಕAಚಿ ನೇತೃತ್ವದಲ್ಲಿ ಶಾಲಾ ಶಿಕ್ಷಣ ಇಲಾಖೆಯ ಅಪರ ಆಯುಕ್ತರಿಗೆ ಮನವಿ

ಅನುದಾನಿತ ಶಾಲೆಗಳಲ್ಲಿ ಶಾಲಾ ಬ್ಯಾಗ್ ಭಾರ ಕಡಿಮೆಗೊಳಿಸುವಂತೆ ದಯಾನಂದ ಯಂಕAಚಿ ನೇತೃತ್ವದಲ್ಲಿ ಶಾಲಾ ಶಿಕ್ಷಣ ಇಲಾಖೆಯ ಅಪರ ಆಯುಕ್ತರಿಗೆ ಮನವಿ

ಕಲಬುರಗಿ: ಕಲ್ಯಾಣ-ಕರ್ನಾಟಕ ಭಾಗದ ಎಲ್ಲ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್ ಭಾರ ಕಡಿಮೆಗೊಳಿಸುವಂತೆ ಆದೇಶ ಹೊರಡಿಸಬೇಕೆಂದು ಲೋಕ ರಕ್ಷಕ್ ಅಧ್ಯಕ್ಷ ದಯಾನಂದ ಯಂಕAಚಿ ಅವರ ನೇತೃತ್ವದಲ್ಲಿ ಶಾಲಾ ಶಿಕ್ಷಣ ಇಲಾಖೆಯ ಅಪರ ಆಯುಕ್ತರಿಗೆ ಮನವಿ ಸಲ್ಲಿಸಿದರು.

ಕಲಬುರಗಿ ಜಿಲ್ಲೆಯೂ ಒಳಗೊಂಡAತೆ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಾದ ಯಾದಗಿರಿ, ರಾಯಚೂರು, ಬೀದರ್, ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಶಾಲಾ ಮಕ್ಕಳಿಗೆ ಅತಿ ಭಾರವಾದ ಶಾಲಾ ಬ್ಯಾಗ್ ಹೊರುವ ಅನಿವಾರ್ಯತೆ ಸೃಷ್ಟಿಸಲಾಗಿದೆ. ಆಯಾದಿನದ ಪಠ್ಯಗಳಿಗೆ ಅನುಗುಣವಾಗಿ ಇಂತಿಷ್ಟೇ ಪಠ್ಯಪುಸ್ತಕ ಹಾಗೂ ನೋಟ್‌ಬುಕ್ ಶಾಲೆಗೆ ತರುವಂತೆ ನಿರ್ದೇಶನ ನೀಡಬೇಕಾದ ಆಯಾ ಶಾಲೆಯ ಆಡಳಿತ ಮಂಡಳಿ ಹಾಗೂ ಶಾಲೆಯ ಶೈಕ್ಷಣಿಕ ಮುಖ್ಯಸ್ಥರು ಈ ನಿಟ್ಟಿನಲ್ಲಿ ಸಂಪೂರ್ಣವಾಗಿ ಸೋತಿದ್ದಾರೆ. ಹಾಗಾಗಿ, ಪ್ರತಿನಿತ್ಯ ಸುಮಾರು 10ರಿಂದ 15 ಕಿ.ಗ್ರಾಂ. ತೂಕ ಇರುವ ಶಾಲಾ ಬ್ಯಾಗ್ ಹೊರುವ ಅಸಹಾಯಕ ಸ್ಥಿತಿಯನ್ನು ಮಕ್ಕಳು ಎದುರಿಸುತ್ತಿದ್ದಾರೆ. ಪ್ರತಿನಿತ್ಯ ಹೀಗೆ ಅತಿಯಾದ ಭಾರವಿರುವ ಶಾಲಾ ಬ್ಯಾಗ್ ಹೊರುವುದರಿಂದ ಮಕ್ಕಳಿಗೆ ಬೆನ್ನುನೋವು ಕಾಡುವುದರಿಂದ ಹಿಡಿದು, ಬೆನ್ನುಹುರಿಯಲ್ಲಿ ಬಿರುಕು ಮೂಡುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಹಾಗಾಗಿ, ಈ ನಿಟ್ಟಿನಲ್ಲಿ ಇಲಾಖೆಯ ಮುಖ್ಯಸ್ಥರಾದ ತಾವು ಕೂಡಲೆ ಪರಾಮರ್ಶೆ ಕೈಗೊಂಡು ಕಲ್ಯಾಣ ಕರ್ನಾಟಕ ಭಾಗದ ಎಲ್ಲ ಜಿಲ್ಲೆಗಳ ಸರ್ಕಾರಿ, ಅರೆ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಶಾಲಾ ಮಕ್ಕಳು ಅತಿಯಾದ ಭಾರದ ಶಾಲಾ ಬ್ಯಾಗ್ ಹೊರುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಕಟ್ಟುನಿಟ್ಟಾದ ಸಕಾರಾತ್ಮಕ ಕ್ರಮ ಕೈಗೊಳ್ಳಬೇಕೆಂದು ತಮ್ಮಲ್ಲಿ ಕೋರುತ್ತಿದ್ದೇನೆ.

ಇನ್ನು, ಶಾಲಾ ಮಕ್ಕಳಿಗೆ ಅತಿಯಾದ ಭಾರವಾದ ಬ್ಯಾಗ್ ಹೊರುವುದರಿಂದ ಮುಕ್ತಿ ನೀಡುವ ಭಾಗವಾಗಿ ಆಯಾ ಶಾಲೆಗಳಲ್ಲಿ ಮರುದಿನ ತರಬೇಕಾದ ಪುಸ್ತಕಗಳನ್ನು ಮಾತ್ರ ಮಕ್ಕಳು ಮನೆಗೆ ಕೊಂಡೊಯ್ದು ಹಿಂದಿರುಗಿ ತರುವಂತೆ ಆಯಾ ಶಾಲೆಯಲ್ಲಿ ಲಾಕರ್ ವ್ಯವಸ್ಥೆ ಅಳವಡಿಸಿಕೊಳ್ಳುವಂತೆ ನಿರ್ದೇಶನ ನೀಡಬೇಕು. ಮೇಲಾಗಿ, ಭಾರವಾದ ಶಾಲಾ ಬ್ಯಾಗ್ ಹೊರುವುದರಿಂದ ಮಕ್ಕಳಲ್ಲಿ ಎದುರಾಗುವ ಆರೋಗ್ಯ ಸಮಸ್ಯೆಗಳ ಕುರಿತಾಗಿ ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ತಾವು ಆಯಾ ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಹಾಗೂ ತಾಲೂಕು ಹಂತದಲ್ಲಿರುವ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ನಿರ್ದೇಶನ ನೀಡಬೇಕು. ಇಂದಿನ ಮಕ್ಕಳೇ ದೇಶದ ಭವಿಷ್ಯ ಆಗಿರುವಾಗ, ಮಕ್ಕಳಿಗೆ ಅವೈಜ್ಞಾನಿಕವಾಗಿ ಭಾರವಾದ ಶಾಲಾ ಬ್ಯಾಗ್ ಹೊರುವ ಶಿಕ್ಷೆಯಿಂದ ಮುಕ್ತಿ ಕಲ್ಪಿಸುವಲ್ಲಿ ತಾವು ಸಕಾರಾತ್ಮಕ ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಪ್ರಜೋತ ಕದಮ್, ಪ್ರಕಾಶ ಪಟ್ಟೇದಾರ ಸೇರಿದಂತೆ ಇತರರು ಇದ್ದರು.