ಜಯನಗರದಲ್ಲಿ ಶ್ರೀ ದತ್ತ ಜಯಂತಿ ಪ್ರಯುಕ್ತ ದೀಪೋತ್ಸವ ಆಚರಣೆ.

ಜಯನಗರದಲ್ಲಿ ಶ್ರೀ ದತ್ತ ಜಯಂತಿ ಪ್ರಯುಕ್ತ ದೀಪೋತ್ಸವ ಆಚರಣೆ.

ಜಯನಗರದಲ್ಲಿ ಶ್ರೀ ದತ್ತ ಜಯಂತಿ ಪ್ರಯುಕ್ತ ದೀಪೋತ್ಸವ ಆಚರಣೆ.

ಕಲಬುರಗಿ: ಜಯನಗರ ಶಿವಮಂದಿರದ ಆವರಣದಲ್ಲಿ ಶ್ರೀ ಗುರು ದತ್ತಾತ್ರೇಯ ಜಯಂತಿ ಅಂಗವಾಗಿ ಜಯನಗರ ಶಿವಮಂದಿರ ಅಭಿವೃದ್ಧಿ ಟ್ರಸ್ಟ್ ಹಾಗೂ ತೇಗನೂರ ಪರಿವಾರದ ಸಹಯೋಗದಲ್ಲಿ 1000 ಕ್ಕೂ ಹೆಚ್ಚು ದೀಪಗಳನ್ನು ಹಚ್ಚುವ ಮೂಲಕ ದೀಪೋತ್ಸವ ಕಾರ್ಯಕ್ರಮ ಅದ್ಧೂರಿಯಾಗಿ ಜರುಗಿತು.

‌ಮಹಿಳಾ ಘಟಕದ ಸದಸ್ಯರು ಹಾಗೂ ವಿವಿಧ ಬಡಾವಣೆಗಳಿಂದ ಅನೇಕ ಮಹಿಳೆಯರು ಶಿವ ಮಂದಿರದಲ್ಲಿ ಸಾಲು ಸಾಲಾಗಿ ಪಣತಿ ಹಚ್ಚಿದರು.ಕೃಷಿ ಚಿಂತಕ ಡಾ.ಲಿಂಗರಾಜಪ್ಪ ಅಪ್ಪ ಅವರು ದೀಪೋತ್ಸವ ಕಾರ್ಯಕ್ರಮ ಉದ್ಘಾಟಿಸಿದರು.ನಂತರ ಮಾತನಾಡಿದ ಅವರು ಭಗವಾನ್ ದತ್ತಾತ್ರೇಯರು ತ್ರಿಮೂರ್ತಿಗಳು ಬೃಹ್ಮ, ವಿಷ್ಣು ಮಹೇಶ್ವರರ ಸಂಯೋಜಿತರು ಎಂದು ಹೇಳಲಾಗಿದೆ.ಬಕ್ತಿಯಿಂದ ನೆನೆದರೆ ಕಷ್ಟಗಳು ದೂರವಾಗುತ್ತದೆ ಎಂದರು.ಮಾಜಿ ಎಚ್ಕೆಇ ಅಧ್ಯಕ್ಷ ಹಾಗೂ ಜಯನಗರ ಶಿವಮಂದಿರ ಅಭಿವೃದ್ಧಿ ಟ್ರಸ್ಟ್ ಗೌರವ ಅಧ್ಯಕ್ಷ ಡಾ.ಭೀಮಾಶಂಕರ ಬಿಲಗುಂದಿ ಹಾಗೂ ಕೆಕೆಸಿಸಿ ಅಧ್ಯಕ್ಷ ಶರಣು ಪಪ್ಪಾ ಮಾತನಾಡಿದರು.ಕಾರ್ಯಕ್ರಮದಲ್ಲಿ ಟ್ರಸ್ಟ್ ಅಧ್ಯಕ್ಷ ಡಾ.ಲಿಂಗರಾಜ ಸಿರಗಾಪೂರ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು ಜಿಲ್ಲೆಯ ಹಿಂದೂ ಧರ್ಮದ ಪುಣ್ಯ ಕ್ಷೇತ್ರ ಗಾಣಗಾಪೂರದ ಶ್ರೀ ಗುರು ದತ್ತಾತ್ರೇಯ ಮಂದಿರಕ್ಕೆ ಲಕ್ಷಾಂತರ ಭಕ್ತರು ಬರುತ್ತಾರೆ.ದತ್ತಾತ್ರೇಯ ದೇವರನ್ನು ಪೂಜಿಸಿದರೆ ಜನರ ಜೀವನದಲ್ಲಿ ಹೊಸ ಆಶಾ ಕಿರಣ ಮೂಡುತ್ತದೆ ಎಂದರು.ರಾಜಶೇಖರ ತೆಗನೂರ, ನಾಗರಾಜ ತೇಗನೂರ ಹಾಗೂ ಟ್ರಸ್ಟ್ ಉಪಾಧ್ಯಕ್ಷ ವೀರೇಶ ದಂಡೋತಿ ವೇದಿಕೆ ಮೇಲೆ ಉಪಸ್ಥಿತರಿದ್ದರು.

ಟ್ರಸ್ಟ್ ಹಿರಿಯ ಸದಸ್ಯರಾದ ಎಂ.ಡಿ.ಮಠಪತಿ, ಮಹಿಳಾ ಘಟಕದ ಅಧ್ಯಕ್ಷೆ ಶೈಲಜಾ ವಾಲಿ ಮಾತನಾಡಿದರು.ಪ್ರಧಾನ ಕಾರ್ಯದರ್ಶಿ ಸೂರ್ಯಕಾಂತ ಕೆ.ಬಿ ಸ್ವಾಗತಿಸಿದರು.

ಸಂಘಟನಾ ಕಾರ್ಯದರ್ಶಿ ಬಂಡಪ್ಪ ಕೇಸೂರ, ಸಹ ಕಾರ್ಯದರ್ಶಿ ಸಿದ್ಧಲಿಂಗ ಗುಬ್ಬಿ, ಕೋಶಾಧ್ಯಕ್ಷ ಬಸವರಾಜ ಮಾಗಿ,ಹಿರಿಯ ಸದಸ್ಯರಾದ ಭೀಮಾಶಂಕರ ಶೆಟ್ಟಿ, ಬಸವರಾಜ ಪುರ್ಮಾ, ಮನೋಹರ ಬಡಶೇಷಿ, ವೀರಪ್ಪ ಹುಡುಗಿ,ಮಲ್ಲಯ್ಯ ಸ್ವಾಮಿ ಗಂಗಾಧರಮಠ, ಗುಡಿಯ ಅರ್ಚಕ ಬಸಯ್ಯ ಸ್ವಾಮಿ ಕೊಡದೂರ,ಮಹಿಳಾ ಘಟಕದ ಕಾರ್ಯದರ್ಶಿ ಅನುರಾಧ ಕುಮಾರಸ್ವಾಮಿ,ಮಹಿಳಾ ಘಟಕದ ಪದಾಧಿಕಾರಿಗಳಾದ ಸುರೇಖಾ ಬಾಲಕೊಂದೆ, ಸುಷ್ಮಾ ಮಾಗಿ,ಲತಾ ತುಪ್ಪದ,ವಿಜಯಾ ದಂಡೋತಿ, ಪಾರ್ವತಿ ರಠಕಲ್, ಗೀತಾ ಸಿರಗಾಪೂರ, ಶೈಲಜಾ ಬೊಮ್ಮಣ್ಣ,ಗೀತಾ ಹುಡುಗಿ, ವಿಜಯಾ ಚೌವ್ಹಾಣ್,ನಿಲೋಚನಾ ಬಿಡಪ್ಪ, ಗಂಗಾ ಅನ್ವರಕರ,ಸೇರಿದಂತೆ ಅನೇಕರು ಭಾಗವಹಿಸಿದ್ದರು