ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಯೋಗಶಿಕ್ಷಕ ಯೋಗೇಂದ್ರ ಯದಲಾಪುರೇಯರ ವಿಶಿಷ್ಟ ಸಾಧನೆ"

"ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಯೋಗಶಿಕ್ಷಕ ಯೋಗೇಂದ್ರ ಯದಲಾಪುರೇಯರ ವಿಶಿಷ್ಟ ಸಾಧನೆ"
ಬೀದರ್: ಯೋಗವೇ ಜೀವ, ಜೀವನವೇ ಯೋಗ ಎಂಬ ಧ್ಯೇಯ ವಾಕ್ಯವನ್ನು ಪಾಲಿಸಿಕೊಂಡು ಜೀವವಿಶ್ವಾಸದೊಂದಿಗೆ ಸಮಾಜದಲ್ಲಿ ಯೋಗದ ಬೆಳಕು ಹರಡುತ್ತಿರುವ ಯೋಗ ಗುರು ಯೋಗೇಂದ್ರ ಯದಲಾಪುರೇಯವರು, ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಹಿನ್ನೆಲೆದಲ್ಲಿ ಹೊಸ ಪ್ರೇರಣೆಗೆ ಕಾರಣರಾಗಿದ್ದಾರೆ.
ಬೀದರ್ ತಾಲ್ಲೂಕಿನ ಯದಲಾಪುರ ಗ್ರಾಮದ ಕೃಷಿಕ ಕುಟುಂಬದಲ್ಲಿ ಜನಿಸಿ, ಶಿಕ್ಷಣ ಸೇವೆಯಲ್ಲಿ ತೊಡಗಿರುವ ಯೋಗೇಂದ್ರ ಅವರು ಬಾಬಾ ರಾಮದೇವ ಹಾಗೂ ಪತಂಜಲಿ ಯೋಗ ಸಮಿತಿಯ ಭವರಲಾಲ ಆರ್ಯ ಅವರ ಮಾರ್ಗದರ್ಶನದಲ್ಲಿ ಕಳೆದ 20 ವರ್ಷಗಳಿಂದ ಬೀದರ್ ಜಿಲ್ಲೆಯಾದ್ಯಂತ ಉಚಿತ ಯೋಗ ಶಿಬಿರಗಳನ್ನು ನಡೆಸುತ್ತಿದ್ದಾರೆ. ಪ್ರಾಣಾಯಾಮ, ಧ್ಯಾನ, ಆಯುರ್ವೇದ, ಗಿಡಮೂಲಿಕೆ ಬಳಕೆ, ಪರಿಸರ ಸಂರಕ್ಷಣೆ, ಸಾಹಿತ್ಯ ಪ್ರಚೋದನೆ ಮೊದಲಾದ ಕ್ಷೇತ್ರಗಳಲ್ಲಿ ಸಮರ್ಪಿತ ಸೇವೆ ಸಲ್ಲಿಸುತ್ತಿದ್ದಾರೆ.
ಯು.ಎ.ಇ ಹಾಗೂ ಅಬುಧಾಬಿಯಲ್ಲಿ ಕೂಡ ಯೋಗ ಶಿಬಿರ ನಡೆಸಿರುವ ಅವರು ಯೋಗದ ಮೂಲಕ ಭಾರತದ ಸಂಸ್ಕೃತಿ ವಿಸ್ತಾರಗೊಳಿಸುವ ಪಣ ತೊಟ್ಟಿದ್ದಾರೆ.
ಇವರಿಗೆ ಆದರ್ಶ ಶಿಕ್ಷಕ ಪ್ರಶಸ್ತಿ, ಯೋಗರತ್ನ, ಯೋಗಿರಾಜ ರೋಟರಿ ಕ್ಲಬ್ನ ನ್ಯಾಷನಲ್ ಬಿಲ್ಡರ್ ಪ್ರಶಸ್ತಿ ಸೇರಿ ಹಲವಾರು ಗೌರವಗಳು ಲಭಿಸಿದ್ದರೆ, ವಿವಿಧ ಮಠಾಧೀಶರು, ಗಣ್ಯರು ಇವರ ಸೇವೆಯನ್ನು ಬೆನ್ನು ತಟ್ಟಿದ್ದಾರೆ.
ಪತಂಜಲಿ ಯೋಗ ಸಮಿತಿ ಅಧ್ಯಕ್ಷರಾಗಿರುವ ಇವರು ಸಾಹಿತ್ಯ, ಶಿಕ್ಷಣ, ಪರಿಸರ, ಯೋಗ ಕ್ಷೇತ್ರಗಳಲ್ಲಿ ನೂರಾರು ಗಿಡಮರ ನೆಟ್ಟು, ಮಕ್ಕಳಲ್ಲಿ ದೇಶಾಭಿಮಾನ, ಸಾಹಿತ್ಯ ಹಾಗೂ ಸಂಸ್ಕೃತಿ ಬೆಳೆಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
"ಪರಿಶ್ರಮ ಮತ್ತು ಪ್ರಾಮಾಣಿಕತೆ ನಿಮ್ಮನ್ನು ಉನ್ನತಸ್ಥಾನಕ್ಕೆ ಒಯ್ಯುತ್ತದೆ" ಎಂಬ ಡಾ. ವಿಜಯ ಸಂಕೇಶ್ವರರ ಸಂದೇಶ ನನ್ನ ಪ್ರೇರಣೆಯಾಗಿದೆ," ಎಂದು ಯೋಗೇಂದ್ರ ಅವರು ಹೆಮ್ಮೆಪಡುವಂತೆ ಹೇಳುತ್ತಾರೆ.
ಸಮಾಜಮುಖಿ ಸೇವೆಯ ಪರಿಪೂರ್ಣ ಉದಾಹರಣೆಯಾದ ಇಂತಹ ವ್ಯಕ್ತಿಗೆ ಸರ್ಕಾರ ಮತ್ತು ಸಮಾಜದಿಂದ ಇನ್ನಷ್ಟು ಗೌರವ ಹಾಗೂ ಅವಕಾಶ ಲಭಿಸಲಿ ಎಂಬ ಹಾರೈಕೆ ಸಲ್ಲಿಸುತ್ತೇವೆ.
ಲೇಖನ -ಓಂಕಾರ ಪಾಟೀಲ
(ಕಾರ್ಯದರ್ಶಿ, ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್, ಬೀದರ್)
???? *6360413933*
-