ಜೆಸ್ಕಾಂ ಅಧ್ಯಕ್ಷ ಪ್ರವೀಣ ಪಾಟೀಲ ಹರವಾಳರಿಂದ ಗ್ರಾಹಕ ಸೇವಾ ಕೇಂದ್ರ ಪರಿಶೀಲನೆ
ಜೆಸ್ಕಾಂ ಅಧ್ಯಕ್ಷ ಪ್ರವೀಣ ಪಾಟೀಲ ಹರವಾಳರಿಂದ ಗ್ರಾಹಕ ಸೇವಾ ಕೇಂದ್ರ ಪರಿಶೀಲನೆ
ಕಲಬುರಗಿ: ಜೆಸ್ಕಾಂ ಅಧ್ಯಕ್ಷರಾದ ಪ್ರವೀಣ ಪಾಟೀಲ ಹರವಾಳ ಅವರು ಇಂದು ಕಲಬುರಗಿಯ ಜೆಸ್ಕಾಂ ಗ್ರಾಹಕ ಸೇವಾ ಕೇಂದ್ರವನ್ನು ಖುದ್ದಾಗಿ ಭೇಟಿ ನೀಡಿ, ಕೇಂದ್ರದ ಕಾರ್ಯವೈಖರಿ ಪರಿಶೀಲಿಸಿದರು. ಅವರು ದೂರವಾಣಿ ಮೂಲಕ ಜನರ ಸಮಸ್ಯೆಗಳನ್ನು ಆಲಿಸಿ, ಸಾರ್ವಜನಿಕರಿಂದ ಬಂದ ಕುಂದು-ಕೊರತೆಗಳಿಗೆ ಸಿಬ್ಬಂದಿಗಳ ಸ್ಪಂದನೆಯನ್ನು ನೇರವಾಗಿ ಗಮನಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರವೀಣ ಪಾಟೀಲ ಹರವಾಳ ಅವರು, “ಜನರ ಸಮಸ್ಯೆಗಳಿಗೆ ತ್ವರಿತ ಮತ್ತು ಪರಿಣಾಮಕಾರಿ ಸ್ಪಂದನೆ ನೀಡುವುದು ನಮ್ಮ ಮುಖ್ಯ ಆದ್ಯತೆ. ವಿದ್ಯುತ್ ಸರಬರಾಜಿನಲ್ಲಿ ಯಾವುದೇ ವ್ಯತ್ಯಯ ಉಂಟಾದಾಗ ಜನರು ಗ್ರಾಹಕ ಸೇವಾ ಕೇಂದ್ರವನ್ನು ಸಂಪರ್ಕಿಸಿ ಪರಿಹಾರವನ್ನು ಪಡೆಯಬಹುದು,” ಎಂದು ಹೇಳಿದರು.
ಅವರು ಅಧಿಕಾರಿಗಳಿಗೆ ಮಾರ್ಗದರ್ಶನ ನೀಡುತ್ತಾ, ಜನರಿಗೆ ಯಾವುದೇ ರೀತಿಯ ತೊಂದರೆ ಉಂಟಾಗದಂತೆ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರು. “ಜನರಿಗೆ ನಿರಂತರ, ಗುಣಮಟ್ಟದ ವಿದ್ಯುತ್ ಸರಬರಾಜು ನೀಡುವುದೇ ಜೆಸ್ಕಾಂನ ಗುರಿ,” ಎಂದು ಹೇಳಿದರು.
