ಬಸವ ಸಂಸ್ಕೃತಿ ಅಭಿಯಾನ ಮೂರನೇ ಸುತ್ತಿನ ಪೂರ್ವಭಾವಿ ಸಭೆ
ಬಸವ ಸಂಸ್ಕೃತಿ ಅಭಿಯಾನ ಮೂರನೇ ಸುತ್ತಿನ ಪೂರ್ವಭಾವಿ ಸಭೆ
ಕಲಬುರಗಿ : ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಇಂದು ಮಧ್ಯಾಹ್ನ 12:30 ಕ್ಕೆ ಬಸವ ಸಂಸ್ಕೃತಿ ಅಭಿಯಾನ ಮೂರನೇ ಸುತ್ತಿನ ಪೂರ್ವಭಾವಿ ಸಭೆ ಜರುಗಿತು. ಸಭೆಯಲ್ಲಿ ಪೂಜ್ಯ ಜಗದ್ಗುರು ಸಾರಂಗದೇಶಿಕೇಂದ್ರ ಮಹಾಸ್ವಾಮಿಗಳು ಸಾನಿಧ್ಯ ವಹಿಸಿದ್ದರು
ಅರುಣಕುಮಾರ ಪಾಟೀಲ ಕೊಡಲಹಂಗರಗಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಬಸವ ಸಂಸ್ಕೃತಿ ಅಭಿಯಾನ ಕಲಬುರ್ಗಿ ನಗರದಲ್ಲಿ ನಾ ಭೂತೊ ನಾ ಭವಿಷ್ಯತೆ ಎನ್ನುವ ಹಾಗೆ ಕಾರ್ಯಕ್ರಮ ಮಾಡಲಾಗುವುದು ಶರಣ ಬಂಧುಗಳು ತಾವೆಲ್ಲರೂ ಕಾರ್ಯಕ್ರಮದಲ್ಲಿ ಕೈಜೋಡಿಸಬೇಕು ಎಂದು ಹೇಳಿದರು.
ಕಾರ್ಯಕ್ರಮವನ್ನು ಶಾಸಕ ಎಂ.ವೈ. ಪಾಟೀಲ್ ಉದ್ಘಾಟಿಸಿ, “ಎಲ್ಲಾ ಲಿಂಗಾಯತ ಉಪಜಾತಿಗಳನ್ನು ಮರೆತು ಒಗ್ಗೂಡಿ ಅಭಿಯಾನವನ್ನು ಯಶಸ್ವಿ ಮಾಡಬೇಕು” ಎಂದು ಕರೆ ನೀಡಿದರು. ಶಾಸಕ ಅಲ್ಲಮಪ್ರಭು ಪಾಟೀಲ್ ಮಾತನಾಡಿ, “ಸಮ ಸಮಾಜ ರಚನೆಗೆ ಒತ್ತು ನೀಡುತ್ತಾ ಬಸವಾದಿ ಶರಣರ ಆದರ್ಶಗಳನ್ನು ಜನಮಾಸದಲ್ಲಿ ತಲುಪಿಸಲು ಈ ಅಭಿಯಾನ ಬಲವಾಗಬೇಕು” ಎಂದರು.
ಮಾಜಿ ವಿಧಾನ ಪರಿಷತ್ ಸದಸ್ಯ ಅಮರನಾಥ್ ಪಾಟೀಲ್ “ಅಭಿಯಾನದ ರಥ ಎಲ್ಲರ ಒಗ್ಗೂಡಿನಿಂದ ಎಳೆಯಬೇಕು. ಪ್ರಚಾರ ಕಾರ್ಯ ವಿಧಾನಗಳನ್ನು ಸಮರ್ಥವಾಗಿ ಬಳಸಿಕೊಂಡು ಯಶಸ್ಸಿಗೆ ಕೈಜೋಡಿಸಬೇಕು”ಎಂದು ಅಭಿಪ್ರಾಯಪಟ್ಟರು.
ಜಗದ್ಗುರು ಸಾರಂಗದೇಶಿಕೇಂದ್ರ ಮಹಾಸ್ವಾಮಿಗಳು ಸಭೆಯನ್ನುದ್ದೇಶಿಸಿ ಮಾತನಾಡಿ, “ಅಭಿಯಾನದ ಕಾರ್ಯ ಚಟುವಟಿಕೆಗಳನ್ನು ಬಲಪಡಿಸಲು ವಿವಿಧ ಸಮಿತಿಗಳನ್ನು ರಚಿಸಿ ತಕ್ಷಣ ಕಾರ್ಯಾರಂಭ ಮಾಡಬೇಕು” ಎಂದು ಸೂಚಿಸಿದರು.
ಸಭೆಯಲ್ಲಿ ಅರುಣ್ ಕುಮಾರ್ ಪಾಟೀಲ್ ಕೊಡಲಹಂಗರಗಾ, ಸಭೆಯ ಅಧ್ಯಕ್ಷತೆ ವಹಿಸಿದರು ಅಶೋಕ್ ಮಾಳಿ, ರಾಜಶೇಖರ್, ಯಕಂಚಿ, ಮಾಜಿ ತಾಲೂಕ ಪಂಚಾಯತ ಅಧ್ಯಕ್ಷ ಸಂಗಮೇಶ ನಾಗನಹಳ್ಳಿ, ಕಲ್ಯಣಪ್ಪ ಪಾಟೀಲ ಮಳಖೇಡ, ಎಪಿಎಂಸಿ ಉಪಾಧ್ಯಕ್ಷ ರಾಜಕುಮಾರ ಕೋಟಿ ಸೇರಿದಂತೆ ಗಣ್ಯರು ಭಾಗವಹಿಸಿದ್ದರು. ಶ್ರೀಶೈಲ್ ಗೂಳಿ ಶರಣ ಸಮರ್ಪಣೆ, ಪ್ರಭುಲಿಂಗ ಮಾಹಾಗಾಂವಕರ್ ವಂದಿಸಿದರು.