ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಪದಾಧಿಕಾರಿಗಳ ಆಯ್ಕೆ

ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಪದಾಧಿಕಾರಿಗಳ ಆಯ್ಕೆ
ಕಲ್ಬುರ್ಗಿ ಸುದ್ದಿ ನಾಗರಾಜ್ ದಂಡಾವತಿ : ನಗರದ ಜೇವರ್ಗಿ ಕಾಲೊನಿಯ ಸರಕಾರಿ ಮಾದರಿ ಪ್ರೌಢಶಾಲೆಯಲ್ಲಿ ಕರ್ನಾಟಕ ರಾಜ್ಯ ಸರಕಾರಿ ಪ್ರಾಥಮಿಕ ಶಾಲಾ ಗ್ರೇಡ್ -2 ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಕಲಬುರಗಿ ಘಟಕದ ಪದಾಧಿಕಾರಿಗಳನ್ನು ಆಯ್ಕೆಮಾಡಲಾಯಿತು.
ಸಂಘದ ರಾಜ್ಯ ಉಪಾಧಕ್ಷ ರಾಜು ದೊಡ್ಡಮನಿ, ನಿರ್ದೇಶಕ ಮಹೇಶ ಬಸರಕೋಡ, ಕಾರ್ಯದರ್ಶಿ ಅಶೋಕ, ಪ್ರಭು ಮಾಚನೂರು ಹಾಗೂ ಜಿಲ್ಲೆಯ ಎಲ್ಲ ತಾಲೂಕಿನ ದೈಹಿಕ ಶಿಕ್ಷಣ ಶಿಕ್ಷಕರ ಸಮ್ಮುಖದಲ್ಲಿ ಜಿಲ್ಲೆಯ ಜಿಲ್ಲಾಧ್ಯಕ್ಷರು ಎಲ್ಲ ಪದಾಧಿಕಾಗಳನ್ನು ಆಯ್ಕೆ ಮಾಡಲಾಯಿತು.
ಕಲಬುರಗಿ ಜಿಲ್ಲಾ ಪದಾಧಿಕಾರಿಗಳು: ಬಸವರಾಜ ಹೇರೂರ (ಅಧ್ಯಕ್ಷ), ಸುರೇಖಾ, ಮನೋಹರ ಠೋಕೆ (ಉಪಾಧ್ಯಕ್ಷರು), ಮುಜಮ್ಮಿಲ್ಕ್ ಕೆಂಭಾವಿ(ಪ್ರ.ಕಾರ್ಯದರ್ಶಿ), ಚಿದಾನಂದ(ಖಜಾಂಚಿ), ಸಿದ್ದಣ್ಣ ಚೌಧರಿ(ಸಂಘಟನಾ ಕಾರ್ಯದರ್ಶಿ), ನಾಥು ಚವ್ಹಾಣ (ಸಹ ಕಾರ್ಯದರ್ಶಿ), ದಕ್ಷಿಣ ತಾಲೂಕು ಪದಾಧಿ ಕಾರಿಗಳ ರಚನೆ: ಮೈಹಿಬೂಬ್ ಎಂ.ಖಾಜಿ (ಅಧ್ಯಕ್ಷ), ಸುಜಾತಾ (ಉಪಾಧ್ಯಕ್ಷೆ), ಮಹೇಶಪ್ಪ(ಪ್ರಧಾನ ಕಾರ್ಯ ದರ್ಶಿ), ಫಾತಿಮಾ(ಖಜಾಂಚಿ) ಉಮಾದೇವಿ ಮಾಳಗೆ (ಸಂಘಟನಾ ಕಾರ್ಯದರ್ಶಿ), ಹುಸೇನ್ ನದಾಫ್, ಸಿದ್ದವೀರಯ್ಯ(ಸಹಕಾರ್ಯದರ್ಶಿ), ಕಲಬು ರಗಿ ಉತ್ತರ ವಲಯ ತಾಲೂಕ ಪದಾಧಿಕಾರಿಗಳು: ಅಮರೇಶ ಕೋರಿ (ಅಧ್ಯಕ್ಷರು), ನಾಡು ಚವ್ಹಾಣ, ಸುರೇಖಾ (ಉಪಾಧ್ಯಕ್ಷ), ವೀರಯ್ಯಸ್ವಾಮಿ (ಪ್ರಧಾನ ಕಾರ್ಯದರ್ಶಿ), ಉಮಾ (ಖಜಾಂಚಿ), ಜ್ಯೋತಿ (ಸಂಘಟನಾ ಕಾರ್ಯದರ್ಶಿ), ಲಿಂಗಯ್ಯ ಸ್ವಾಮಿ ಸಾಲಿಮಠ(ಸಹಕಾರ್ಯದರ್ಶಿ) ಅವರನ್ನು ಆಯ್ಕೆ ಮಾಡಲಾಯಿತು.