ಮೊಬೈಲ್ ಜಾಮರ್ ಸಮಸ್ಯೆ ಪರಿಹಾರಕ್ಕೆ ಜಿಲ್ಲಾಧಿಕಾರಿ ಫೌಜೀಯಾ ತರನಮ್ಮ ಅವರಿಂದ ಭರವಸೆ

ಮೊಬೈಲ್ ಜಾಮರ್ ಸಮಸ್ಯೆ ಪರಿಹಾರಕ್ಕೆ ಜಿಲ್ಲಾಧಿಕಾರಿ ಫೌಜೀಯಾ ತರನಮ್ಮ ಅವರಿಂದ  ಭರವಸೆ

ಮೊಬೈಲ್ ಜಾಮರ್ ಸಮಸ್ಯೆ ಪರಿಹಾರಕ್ಕೆ ಜಿಲ್ಲಾಧಿಕಾರಿ ಫೌಜೀಯಾ ತರನಮ್ಮ ಅವರಿಂದ ಭರವಸೆ

ಕಲಬುರಗಿ: ಜೂನ್ 9-ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿ ಅಳವಡಿಸಿದ ಜಾಮರ್ ಸಾಧನೆಯ ಪರಿಣಾಮವಾಗಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮೊಬೈಲ್ ನೆಟ್ವರ್ಕ್ ಸಮಸ್ಯೆ ಉಂಟಾಗುತ್ತಿರುವ ಕುರಿತು ಸಾರ್ವಜನಿಕರು ಗಮನ ಸೆಳೆಯುತ್ತಿದ್ದಂತೆ, ಜಿಲ್ಲಾಧಿಕಾರಿಯವರು ವಿಶೇಷ ಸಭೆ ನಡೆಸಿದರು. ಸಭೆಯಲ್ಲಿ ಸಹಾಯಕ ಆಯುಕ್ತರು (ಅರ್ಬನ್) ಹಾಗೂ ಪೊಲೀಸ್ ಇಲಾಖೆಯವರ ಸಹಕಾರದೊಂದಿಗೆ, ಸೀತನೂರ, ಪಾಣೆಗಾಂವ, ನಂದಿಕೂರ, ಉದನೂರ ಹಾಗೂ ಕೋಟನೂರ (ಡಿ) ಸೇರಿ ಹಲವಾರು ಗ್ರಾಮಗಳ ಸಮಸ್ಯೆಗಳ ಬಗ್ಗೆ ಸವಿಸ್ತಾರ ಮಾಹಿತಿ ನೀಡಲಾಯಿತು.

ಗ್ರಾಮ ಪಂಚಾಯಿತಿ ಕಛೇರಿ, ನ್ಯಾಯಬೆಲೆ ಅಂಗಡಿ, ಉದ್ಯೋಗ ಖಾತ್ರಿ ಯೋಜನೆಯ ಜಿಪಿಎಸ್, ಶಾಲಾ ಮಕ್ಕಳ ಮಧ್ಯಾಹ್ನ ಭೋಜನ ಮಾಹಿತಿ ಮುಂತಾದ ಸೇವೆಗಳು ಆನ್ಲೈನ್ ಆಧಾರಿತವಾಗಿದ್ದು, ಜಾಮರ್ ಪರಿಣಾಮದಿಂದ ಈ ಸೇವೆಗಳು ಅಡಚಣೆಗೆ ಒಳಗಾಗುತ್ತಿವೆ ಎಂಬುದು ಸಭೆಯಲ್ಲಿ ಸ್ಪಷ್ಟವಾಗಿ ತಿಳಿಸಲಾಯಿತು.

ದಕ್ಷಿಣ ಮತಕ್ಷೇತ್ರದ ಜನಪ್ರಿಯ ಶಾಸಕ ಶ್ರೀ ಅಲ್ಲಂಪ್ರಭು ಪಾಟೀಲ್ ಅವರು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ, ಜಿಲ್ಲಾಧಿಕಾರಿಯವರೊಂದಿಗೆ ಮಾತನಾಡಿ ಜಾಮರ್ ಸಾಧನೆಯ ತೀವ್ರತೆ ಕಡಿಮೆ ಮಾಡಬೇಕೆಂದು ಒತ್ತಾಯಿಸಿದರು.

ಜಿಲ್ಲಾಧಿಕಾರಿಯವರು ಬಂದಿಖಾನೆ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ, “ನಾಲ್ಕು ಐದು ದಿನಗಳ ಒಳಗೆ ಈ ಸಮಸ್ಯೆ ಪುನರಾವೃತ್ತಿಯಾಗದಂತೆ ಕ್ರಮ ಕೈಗೊಳ್ಳಲಾಗುವುದು” ಎಂಬ ಭರವಸೆ ನೀಡಿದರು.

ಸಭೆಯಲ್ಲಿ ನಂದಿಕೂರ ಗ್ರಾಮಪಂಚಾಯಿತಿ ಅಧ್ಯಕ್ಷರಾದ ಚಂದ್ರಕಾಂತ್ ಕೆ ಸೀತನೂರ, ಸದಸ್ಯರಾದ ಆರೀಫ್ ನಬಿ ಪಟೇಲ (ಸೀತನೂರ), ಪವನ್ ಕುಮಾರ್ ಬಿ ವಳಕೇರಿ (ಹಾಲಿ ಸದಸ್ಯರು, ಮಾಜಿ ಅಧ್ಯಕ್ಷರು) ಭಾಗವಹಿಸಿದ್ದರು.

ಇಂದು ಸಂಜೆ ಕೇಂದ್ರ ಕಾರ್ಯಗೃಹ (ಸೆಂಟ್ರಲ್ ಜೈಲ್) ಮುತ್ತಿಗೆ ಹಾಕುವ ನಿರ್ಧಾರವನ್ನು v ತಾತ್ಕಾಲಿಕವಾಗಿ ಮುಂದೂಡಲಾಗಿದೆ ಎಂದು ಗಣ್ಯರು ಹೇಳಿದರು.