ಬೆಂಗಳೂರಿನ ಅಬಿವೃದ್ಧಿ ಮತ್ತು ಜನ ಸಹಬಾಳ್ವೆಯಿಂದ ಜೀವನ ನಡೆಸುವಂತೆ ಮಾಡಿದ್ದು ಕೆಂಪೇಗೌಡರು :..ಡಾ. ಮನ್ನೂರ.

|ತಾಲ್ಲೂಕ ಆಡಳಿತ ಮತ್ತು ಒಕ್ಕಲಿಗ ಸಮಾಜದ ವತಿಯಿಂದ ಜಯಂತಿ ಆಚರಣೆ|
ಬೆಂಗಳೂರಿನ ಅಬಿವೃದ್ಧಿ ಮತ್ತು ಜನ ಸಹಬಾಳ್ವೆಯಿಂದ ಜೀವನ ನಡೆಸುವಂತೆ ಮಾಡಿದ್ದು ಕೆಂಪೇಗೌಡರು :..ಡಾ. ಮನ್ನೂರ.
ಶಹಾಬಾದ :..ನಾಡಪ್ರಭು ಕೆಂಪೇಗೌಡರು ದೂರದೃಷ್ಟಿಯಿಂದ ಬೆಂಗಳೂರನ್ನು ಕಟ್ಟಿದರು, ಎಲ್ಲಾ ಸಮುದಾಯದವರು ಸಹಬಾಳ್ವೆಯಿಂದ ಜೀವನ ನಡೆಸುವಂತೆ ಮಾಡಿದ್ದಾರೆ ಎಂದು ಕಲಬುರಗಿ ಮನ್ನೂರ ಆಸ್ಪತ್ರೆಯ ಡಾ.ಫಾರೂಕ್ ಮನ್ನೂರ ಹೇಳಿದರು.
ಅವರು ತಾಲ್ಲೂಕ ಆಡಳಿತ ಹಾಗೂ ಕುಡು ಒಕ್ಕಲಿಗ ಸೇವಾ ಸಂಘದ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ನಾಡಪ್ರಭು ಕೆಂಪೇಗೌಡರ 516ನೇ ಜಯಂತಿಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ನಾಡಪ್ರಭು ಕೆಂಪೇಗೌಡರು ಬೆಂಗಳೂರು ಜಾಗತಿಕ ಐಟಿ ಮತ್ತು ಬಿಟಿ ಕೇಂದ್ರವಾಗಿರುವುದರ ಜೊತೆಗೆ, ದೇಶದ ಎಲ್ಲಾ ಭಾಗಗಳಿಂದ ಲಕ್ಷಾಂತರ ಜನರಿಗೆ ಉದ್ಯೋಗಗಳನ್ನು ಒದಗಿಸಿದೆ,
ಉದ್ಯಾನ ನಗರ ನಿರ್ಮಾಣದ ಜೊತೆಗೆ ನೂರಾರು ಕೆರೆಕಟ್ಟೆ ಮತ್ತು ದೇವಾಲಯಗಳನ್ನ ಜಾತ್ಯಾತೀತವಾಗಿ ನಿರ್ಮಾಣ ಮಾಡಿ, ಕನ್ನಡಿಗರ ಗೌರವ ಸಂಕೇತವಾಗಿದ್ದಾರೆ.
ಬೆಂಗಳೂರನ್ನು ಕಟ್ಟಿದ ಕೆಂಪೇಗೌಡರ ಇತಿಹಾಸವನ್ನು ಉಳಿಸಿ, ಬೆಳಸಿ ಮುಂದಿನ ಪೀಳಿಗೆಗೆ ತಲುಪಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ, ಇಲ್ಲಿನ ವಿದ್ಯಾರ್ಥಿಗಳು ಕೂಡ ತಮ್ಮ ಗುರಿ ಮುಟ್ಟಿ ಶಹಾಬಾದ ನಗರವನ್ನ ಪ್ರಗತಿಪತದತ್ತ ಕೊಂಡ್ಯೊಯಬೇಕು, ಕ.ಕ ಭಾಗ ಬಹಳ ಹಿಂದೆ ಉಳಿದಿದ್ದು, ಇದರಿಂದಾಗಿ ಸಾರ್ವಜನಿಕರು ಅನಾರೋಗ್ಯ, ಅಬಿವೃದ್ಧಿ ಗೆ ಹಿನ್ನಡೆ ಕಾಡುತ್ತಿದೆ, ಮುಂದಿನ ದಿನಗಳಲ್ಲಿ ನಗರವನ್ನು ರಾಜ್ಯದ ಜನ ಹಿಂತಿರುಗಿ ನೋಡುವ ಹಾಗೆ ನಿರ್ಮಾಣ ಮಾಡಬೇಕು ಎಂದರು.
ಸರಕಾರಿ ಕನ್ಯಾ ಪ್ರೌಢ ಶಾಲೆಯ ಶಿಕ್ಷಕಿಶ್ರೀಮತಿ ಸುನಿತಾ ಪುಲೆ ಯವರು ವಿಶೇಷ ಉಪನ್ಯಾಸ ನೀಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ತಾಲ್ಲೂಕ ತಹಶೀಲ್ದಾರ ಜಗದೀಶ ಚೌರ ಮಾತನಾಡಿದರು.
ವೇದಿಕೆ ಮೇಲೆ ಕಾಡಾ ನಿಗಮದ ಅಧ್ಯಕ್ಷ ಡಾ. ಎಂಎ ರಶೀದ, ನಗರ ಸಭೆ ಅಧ್ಯಕ್ಷೆ ಚಂಪಾಬಾಯಿ ರಾಜು ಮೇಸ್ತ್ರಿ, ಉಪಾಧ್ಯಕ್ಷೆ ಪಾತಿಮಾ ಬೇಗಂ, ಅಮೃತಗೌಡ ಗಟ್ಟದ, ಭೀಮಶಾ ಜಿರೋಳ್ಳಿ ವಾಡಿ ಇದ್ದರು.
ಜಯಂತ್ಯೋತ್ಸವ ಸಮಾರಂಭದಲ್ಲಿ ಕದಸಂಸ ರಾಜ್ಯ. ಸಂ. ಸಂಚಾಲಕ ಸುರೇಶ ಮೆಂಗನ, ನಾಗಣ್ಣ ಗೌಡ ಪಾಟೀಲ, ಚಂದ್ರಕಾಂತ ಪಾಟೀಲ, ಬಸವರಾಜ ಪೋಲಿಸ್ ಪಾಟೀಲ, ಜಹೀರ ಅಹ್ಮದ ಪಟವೇಗಾರ, ಮ.ಬಾಕ್ರೋದ್ದಿನ, ಹರೀಷ ಕರಣಿಕ, ಮೋಹನ ಹಳ್ಳಿ, ಶೈಲಜಾ ರಾಜು ಪಾಟೀಲ, ಮಲ್ಲಣ್ಣಗೌಡ ಪಾಟೀಲ, ಅಶೋಕ ಕಾಂಬಳೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಗೌಡಪ್ಪ ಗೌಡ ಸ್ವಾಗತಿಸಿ, ನಿರೂಪಿಸಿದರು, ಭರತ ಧನ್ನಾ ವಂದಿಸಿದರು.
..ತಾಲ್ಲೂಕಿನ ಹತ್ತನೇ ಮತ್ತು ಪದವಿಪೂರ್ವ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಸುಮಾರು 30 ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಹಾಗೂ ಪುಸ್ತಕ ಸಾಮಗ್ರಿಗಳ ಜೊತೆ ಸ್ಮರಣ ಕಾಣಿಕೆ ನೀಡಿ ಸತ್ಕರಿಸಿ,ಗೌರವಿಸಲಾಯಿತು.