ಭಾರತದಲ್ಲಿ ಶಿಕ್ಷಣದಿಂದ ಸುಧಾರಣೆಯಾಗಿದೆಯೇ !?ಆತ್ಮಾವಲೋಕನ

ಭಾರತದಲ್ಲಿ ಶಿಕ್ಷಣದಿಂದ ಸುಧಾರಣೆಯಾಗಿದೆಯೇ !?ಆತ್ಮಾವಲೋಕನ
ಕಲಬುರ್ಗಿ ಜಯನಗರದ ಬಸವ ಸಮಿತಿಯ ಅನುಭವ ಮಂಟಪದಲ್ಲಿ ಒಂದು ತಿಂಗಳಪರ್ಯಂತ ಜರುಗುತ್ತಿರುವ ವಚನ ಆಷಾಡ ಪ್ರವಚನದ ಆರನೇ ದಿನದಂದು ಮಾತನಾಡಿದ ಬೆಳಗಾವಿಯ ಬಸವ ಬೆಳವಿಯ ಚರಂತಿಶ್ವರ ಮಠದ ಪೂಜ್ಯರಾದ ಶರಣಬಸವ ಸ್ವಾಮಿಗಳು ಮಾತನಾಡುತ್ತಾ ,
ಭಾರತದಲ್ಲಿ ಇಂದು ಶಾಲಾ ಕಾಲೇಜು ವಿಶ್ವವಿದ್ಯಾಲಯಗಳಲ್ಲಿ ಶಿಕ್ಷಣ ಪಡೆದವರೇ ಅತಿ ಹೆಚ್ಚು ಭ್ರಷ್ಟಾಚಾರಿಗಳಾಗುತ್ತಿದ್ದಾರೆ .ಅಲ್ಲಿ ಕಲಿತ ಅಧಿಕಾರಿಗಳ ಮನೆಯ ಮೇಲೆ ಐಟಿ ರೇಡ್ಗಳಾಗುತ್ತಿವೆ .ಅನಕ್ಷರಸ್ಥನ ಮೇಲೆ ರೈತನ ಮನೆಯ ಮೇಲೆ ಯಾವುದೇ ಐಟಿ ರೇಡ್ ಗಳಾಗುತ್ತಿಲ್ಲ. ವಿದ್ಯಾವಂತರೇ ಹೆಚ್ಚು ಮೂಡನಂಬಿಕೆ ಉಳ್ಳವರಾಗಿದ್ದಾರೆ .ವಿದ್ಯಾವಂತರೆ ತಮ್ಮ ತಂದೆ ತಾಯಿಗಳನ್ನು ವೃದ್ಧಾಶ್ರಮಕ್ಕೆ ಸೇರಿಸುತ್ತಿದ್ದಾರೆ .ಹಾಗಾದರೆ ಇಂದಿನ ಔಪಚಾರಿಕ ಶಿಕ್ಷಣ ವ್ಯವಸ್ಥೆ ವಿಫಲವಾಗುತ್ತಿದೆಯೇ !? ನಾವಿಂದು ಆತ್ಮವಲೋಕನ ಮಾಡಿಕೊಳ್ಳಬೇಕಾಗಿದೆ ಎಂದು ನುಡಿದರು . ಶರಣರು ಕೊಟ್ಟ ಶಿಕ್ಷಣದಲ್ಲಿ ಮೌಲ್ಯಗಳು ಇದ್ದವು . ಮಾನವೀಯತೆ ಇತ್ತು .ಕಳಬೇಡ ಕೊಲಬೇಡ ಹುಸಿಯ ನುಡಿಯಲುಬೇಡ ಮುನಿಯಬೇಡ ಅನ್ಯರಿಗೆ ಅಸಹ್ಯ ಪಡಬೇಡ ತನ್ನ ಬಣ್ಣಿಸಬೇಡ ಇದಿರು ಹಳಿಯಲು ಬೇಡ ,ಇವನಾರವ ಇವನಾರವನೆಂದಿಸದಿರಯ್ಯ ಎಂಬುದಕ್ಕಿಂತ ದೊಡ್ಡ ಶಿಕ್ಷಣ ಈ ಜಗತ್ತಿನಲ್ಲಿ ಯಾವುದು ಇಲ್ಲ .ಅದಕ್ಕಾಗಿಯೇ ಶರಣ ಸಿದ್ದಾಂತಗಳು ಸಾರ್ವಕಾಲಿಕ ಸತ್ಯವಾಗಿವೆ .ಆತ್ಮಾವಲೋಕನ ದೊಡ್ಡ ಶಿಕ್ಷಣವಾಗಿದೆ. ಅದು ಐಟಿ ರೇಡಿಗಿಂತಲೂ ಪ್ರಭಾವಶಾಲಿಯಾಗಿದೆ .
ವಿಜ್ಞಾನದ ಕಲಿಕೆಯಾದರೂ ಸಹ ಮೂಢನಂಬಿಕೆ ಕಂದಾಚಾರ ಹೋಗಿಲ್ಲ .ವೈಚಾರಿಕ ನೆಲೆಗಟ್ಟಿನ ಮೇಲೆ ಶರಣರು ಸಮಾಜ ನಿರ್ಮಾಣ ಮಾಡಿದರು .ಮನುಷ್ಯ ಕಲ್ಲಿನಲ್ಲಿ ಕಂಬದಲ್ಲಿ ಕರ್ಣದಲ್ಲಿ ಹುಟ್ಟಲು ಸಾಧ್ಯವಿಲ್ಲ .ಇದನ್ನು ಶಿಕ್ಷಣವಂತರು ಅರಿತುಕೊಳ್ಳಬೇಕಾಗಿದೆ .ಮನುಷ್ಯರಲ್ಲಿ ಕೆಲವರ ಜಾತಿ ಶ್ರೇಷ್ಠವೆಂದು ಹೇಳಿಕೊಳ್ಳುವುದಾದರೆ ಅದಕ್ಕೆ ಏನು ಆಧಾರಗಳಿವೆ ?.ಹುಟ್ಟಿನಿಂದ ಯಾರೂ ಶ್ರೇಷ್ಠರಲ್ಲ ಯಾರು ಕನಿಷ್ಟರಲ್ಲ ಮನುಷ್ಯ ತನ್ನ ಗುಣಗಳಿಂದ ಶ್ರೇಷ್ಠ ಕನಿಷ್ಠನಾಗುತ್ತಾನೆ . ವಿದ್ಯೆ ಜ್ಞಾನ ಇವು ಸಾಧಕನ ಸ್ವತ್ತಾಗಿವೆ ಇವು ಕೆಲವು ಜಾತಿಯ ಸ್ವತ್ತಾಗಿಲ್ಲ ಜಗತ್ತು ಸಾಧಕರನ್ನು ಗೌರವಿಸುತ್ತದೆ ಎಂದು ಮಾರ್ಮಿಕವಾಗಿ ನುಡಿದರು .
ಕಲಬುರ್ಗಿ ಬಸವ ಸಮಿತಿಯ ಅಧ್ಯಕ್ಷರಾದ ಡಾ.ವಿಲಾಸ್ವತಿ ಖೂಬಾ, ಕಾರ್ಯದರ್ಶಿಗಳಾದ ಡಾ. ಆನಂದ ಸಿದ್ಧಾಮಣಿ . ಡಾ . ಕೆ ಎಸ್ ವಾಲಿ , ಡಾ. ಎ. ಎಸ್ ಪಾಟೀಲ್ ,ಉದ್ದಂಡಯ್ಯ ಅವರು ಹಾಜರಿದ್ದರು .