ಮನಸ್ಸಿಗೆ ನೆಮ್ಮದಿ ನೀಡುವ ಕಲೆಯೇ ಸಂಗೀತ ಕಲೆ

ಮನಸ್ಸಿಗೆ ನೆಮ್ಮದಿ ನೀಡುವ ಕಲೆಯೇ ಸಂಗೀತ ಕಲೆ
ಕಲಬುರಗಿ: ಗಾನಗಂಧರ್ವ ಸಾಂಸ್ಕೃತಿಕ ಸೇವಾ ಸಂಸ್ಥೆ ರಿ ಕಲಬುರಗಿ ಇವರ ವತಿಯಿಂದ ನಾದಸ್ವರ ಸಂಗೀತ ಸಂಭ್ರಮ ಸಾಂಸ್ಕೃತಿಕ ಕಾರ್ಯಕ್ರಮ ಶುಕ್ರವಾರ ಸಾಯಂಕಾಲ 6 ಗಂಟೆಗೆ ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ಶಿವಾಜಿನಗರ ಕಲಬುರಗಿಯಲ್ಲಿ ಜರುಗಿತು,
ಜಗತ್ತಿನಲ್ಲಿ ಅನೇಕ ವಿದ್ಯೆಗಳಿವೆ ಅವುಗಳೆಲ್ಲರಲ್ಲಿ ಈ ಆಧುನಿಕ ಯುಗದ ಭರಾಟೆಯಲ್ಲಿ ಮನಸ್ಸಿಗೆ ಮುದ ಶಾಂತಿ ನೀಡುವ ಕಲೆ ಎಂದರೆ ಅದುವೇ ಸಂಗೀತ ಕಲೆ ಯಾಗಿದೆ ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಜಗನ್ನಾಥ ಕಣ್ಣಿ ಮಾತಾನಾಡಿದರು,
ನಾವು ಪ್ರತಿನಿತ್ಯವೂ ಕೂಡ ಎಲ್ಲದರಲ್ಲೂ ನಾದಸ್ವರ ಸಂಗೀತ ಕಾಣುತ್ತೆವೆ ಎಂದು ಹೇಳಬಹುದು ಹೇಗೆಂದರೆ ನಾವು ಪ್ರಯಾಣ ಮಾಡುವಾಗ ಶಬ್ದ ಕೇಳುತ್ತೇವೆ ಅಲ್ಲಿಯೂ ಒಂದು ಸ್ವರ ಇರುತ್ತೆ ನಡೆಯುವಾಗ ಒಂದು ಲಯದಲ್ಲಿ ನಡೆಯುತ್ತೇವೆ ತಪ್ಪಿದರೆ ಬೀಳುತ್ತೇವೆ, ಅದಕ್ಕೆ ಪ್ರತಿಯೊಂದರಲ್ಲಿ ಸಂಗೀತ ಕಾಣುತ್ತೇವೆ, ಮತ್ತು ದೇವನೋಲುಮೆಯ ಶ್ರೇಷ್ಠ ಕಲೆಯೇ ಸಂಗೀತ ಕಲೆ ಎಂದು ಮುಖ್ಯಅತಿಥಿ ಸ್ಥಾನವಹಿಸಿದ ಹಣಮಂತರಾಯ ಎಸ್ ಪೂಜಾರಿ ನುಡಿದರು, ಕಾರ್ಯಕ್ರಮದಲ್ಲಿ ಶರಣಯ್ಯ ಸ್ವಾಮಿ, ಪ್ರಭಾಕರ ಜಮಾದಾರ, ದತ್ತು ಪೂಜಾರಿ, ಸಂಸ್ಥೆಯ ಕಾರ್ಯದರ್ಶಿ ಮೌನೇಶ ಪಂಚಾಳ, ಹಾಗೂ ಇತರರಿದ್ದರು,
ನಾದಸ್ವರ ಸಂಗೀತ ಸಂಭ್ರಮ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಹೆಸರಾಂತ ಕಲಾವಿದರಾದ ಅಣ್ಣಾರಾವ ಶೇಳ್ಳಗಿ ಮತ್ತಿಮೂಡ, ಶಿವಲಿಂಗಯ್ಯ ಶಾಸ್ತ್ರಿ ಗರೂರ, ಸೈದಪ್ಪಾ ಚೌಡಪೂರ, ರಾಚಯ್ಯ ಶಾಸ್ತ್ರಿ ರಟಕಲ್, ನಾಗಲಿಂಗಯ್ಯ ಶಾಸ್ತ್ರಿ ಸ್ಥಾವರಮಠ ಸುಂಟನೂರ ಶಿವಕುಮಾರ ಪಾಟೀಲ್ ಬೇಡಜುರ್ಗಿ, ವಿಜಯಲಕ್ಷ್ಮಿ ಎಸ್ ಕೆಂಗನಾಳ, ಚೇತನ ಬಿದಿಮನಿ, ವಿನೋದ ದಸ್ತಾಪೂರ,ಬಸವಕುಮಾರ ಕೆಂಗನಾಳ, ಬಸವಕುಮಾರ ಎಸ್, ಶಿವಾನಂದ ಹಿತ್ತಲಶಿರೂರ, ಇನ್ನು ಅನೇಕ ಕಲಾವಿದರು ಸಂಗೀತ ಸಾಂಸ್ಕೃತಿಕ ಕಾರ್ಯಕ್ರಮ ನಡಿಸಿಕೊಟ್ಟರು , ಶಿವಲಿಂಗಪ್ಪಾ ಎಮ್ ಕೆಂಗನಾಳ ನಿರೂಪಿಸಿದರು.