ಸರ್ವರಿಗೂ ಸಮಪಾಲುನೀಡಿದ್ದು ಸಂವಿಧಾನ : ಡಾ ಜಯದೇವಿ ಗಾಯಕವಾಡ

ಸರ್ವರಿಗೂ ಸಮಪಾಲುನೀಡಿದ್ದು ಸಂವಿಧಾನ : ಡಾ ಜಯದೇವಿ ಗಾಯಕವಾಡ
ಆಳಂದ :ತಾಲೂಕಿನ ಸಾಯಿ ಪ್ರತಾಪ ಪದವಿ ಮಹಾವಿದ್ಯಾಲಯದಲ್ಲಿ ಬಿ.ಎ. ಮತ್ತು ಬಿಕಾಂ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಬಿಳ್ಕೊಡುಗೆ ಸಮಾರಂಭದಲ್ಲಿ ಮತ್ತು ವಿಶೇಷ ಉಪನ್ಯಾಸ ಅಂಬೇಡ್ಕರ್ ಮತ್ತು ಮಹಿಳೆ ಕುರಿತು ಮಾತನಾಡಿದ ಬುದ್ಧ ಬಸವ ಅಂಬೇಡ್ಕರ್ ಅವರ ಚಿಂತನೆಗಳನ್ನ ನಾಡಿನುದ್ದಕ್ಕೂ ಬಿತ್ತರಿಸುತ್ತಿರುವ ಡಾ. ಜಯದೇವಿ ಗಾಯಕ್ವಾಡ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಈ ದೇಶದ ಪ್ರತಿಯೊಂದು ಜೀವಿಗೂ ಬದುಕುವ ಹಕ್ಕು ಶಿಕ್ಷಣದ ಹಕ್ಕು ರಾಜಕೀಯ ಸಾಮಾಜಿಕ ಧಾರ್ಮಿಕ ಶೋಷಣೆ ವಿರುದ್ಧ ಹೋರಾಟದ ಹಕ್ಕು .ಸ್ತ್ರೀಯರು ನಾಲ್ಕು ಗೋಡೆಗಳ ಮಧ್ಯೆ ಸೀಮಿತವಾಗಿರುತ್ತಿದ್ದರು ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನ ನೀಡಿರುವುದರಿಂದ ನಾವು ಇಂದು ನಾಲ್ಕು ಅಕ್ಷರ ಕಲಿತು ಎಲ್ಲಾ ಕ್ಷೇತ್ರಗಳಲ್ಲಿ ಸಾಧನೆಯನ್ನು ಮಾಡುತ್ತಿದ್ದೇವೆ ಇದಕ್ಕೆ ಮುಖ್ಯ ಕಾರಣ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನ ನಮಗೆ ನೀಡಿದ್ದಾರೆ ಮೂಢನಂಬಿಕೆಗಳನ್ನುಆಚರಿಸುವುದು ಬಿಡಬೇಕು ಎಂದರು. ಕಾರ್ಯಕ್ರಮಕ್ಕೆ ಉದ್ಘಾಟಕರಾಗಿ ಆಗಮಿಸಿದ ನಾಡಿನ ಹೆಸರಾಂತ ಕವಿ, ಹಿರಿಯ ಲೇಖಕರು ಚಿಂತಕರು,ಮಾರ್ಗದರ್ಶಕರು ಆಗಿರುವ ಡಾ.ಗವಿಸಿದ್ದಪ್ಪ ಹೆಚ್. ಪಾಟೀಲ್,ಮಾತನಾಡಿ ಮಹಿಳೆಯರಿಗೆ ಮೀಸಲಾತಿಯನ್ನು ಕಲ್ಪಿಸಿದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಕೇವಲ ವ್ಯಕ್ತಿಯಲ್ಲ ಇವರು ಒಂದು ದೊಡ್ಡ ಶಕ್ತಿ ಎಂದು ಹೇಳಿದರು ಸಂದರ್ಭದಲ್ಲಿ ಗುಡಿಗುಂಡಾರಗಳಿಗೆ ಬೀಗವನ್ನು ಹಾಕಲಾಗಿತ್ತು ಆ ಸಂದರ್ಭದಲ್ಲಿ ನಮಗೆ ಕಾಪಾಡಿದ್ದು ಭಾರತ ಸಂವಿಧಾನ ಎಂದು ನುಡಿದರು. ಡಾ. ಸುನಿಲ್ ಕುಮಾರ್ ಕಾಂಬಳೆ ಪ್ರಾಸ್ತಾವಿಕ ನುಡಿನ್ನಾಡಿದರು . ಅತಿಥಿಗಳಾಗಿ ಶ್ರೀಮತಿ ಇಂದುಮತಿ ಮಾದಗೊಂಡ ಅಧ್ಯಕ್ಷರು ಗ್ರಾಮ ಪಂಚಾಯತ್ ಕಡಗಂಚಿ, ಶ್ರೀ ಸಿದ್ದರಾಮನಿಂಬರ್ಗಾ,ಪಿ .ಎಸ್.ಐ.ನರೋಣಾ.ಉಪಸ್ಥಿತರಿದ್ದರು
ಶ್ರೀಮತಿ ಸವಿತಾ ಡಾ. ಸುನೀಲ ಕಾಂಬಳೆ. ಸಂಸ್ಥಾಪಕ ಅಧ್ಯಕ್ಷರು ಸಾಯಿ ಪ್ರತಾಪ ಪದವಿ ಮಹಾವಿದ್ಯಾಲಯ ಕಡಗಂಚಿ ಮಾತನಾಡಿಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕ್ತಿ ಎಂಬ ಹಾಡನ್ನುಆಡುವುದರ ಮೂಲಕ ಗಮನ ಸೆಳೆದರು
ಅಧ್ಯಕ್ಷತೆ ವಹಿಸಿದ ಡಾ. ಅವಿನಾಶ.ಎಸ್. ದೇವನೂರ .ಪ್ರಾಚಾರ್ಯರು ಸಾಯಿ ಪ್ರತಾಪ ಪದವಿ ಮಹಾವಿದ್ಯಾಲಯ ಕಡಗಂಚಿ ಮಾತನಾಡಿವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತು ಕಲಿಯಬೇಕು ಒಳ್ಳೆಯ ಸಂಸ್ಕಾರವನ್ನು ಪಡೆಯಬೇಕು ಉನ್ನತ ಶಿಕ್ಷಣ ಪಡೆದು ಉನ್ನತ ಮಟ್ಟದ ಹುದ್ದೆ ಪಡೆದು, ಸಮಾಜ ಕಾಲೇಜು ತಂದೆ ತಾಯಿಯ ಕೀರ್ತಿ ತರಬೇಕು ಎಂದು ಹೇಳಿದರು. ಭಾಗ್ಯಶ್ರೀ ಸ್ವಾಗತಿಸಿದರು ಅನಿತಾ ಪಿ.ನಿರೂಪಿಸಿದರು ನೇಹಾ ಮಾಲೆ ವಂದಿಸಿದರು
ವರದಿ ಡಾ ಅವಿನಾಶ S.D.