ಯುದ್ಧ ಬೇಡ, ಶಾಂತಿ ಬೇಕು ; ಮೀನಾಕ್ಷಿ

ಯುದ್ಧ ಬೇಡ, ಶಾಂತಿ ಬೇಕು ; ಮೀನಾಕ್ಷಿ
ಆಳಂದದಲ್ಲಿ ಸೌಹಾರ್ದ ನಡಿಗೆ" ಯಾವುದೇ ರಾಷ್ಟ್ರ ಕೂಡ ಯುದ್ಧ ಮಾಡದೇ ಶಾಂತಿ " ಕಾಪಾಡಬೇಕು ಎಂದು
ಹೋರಾಟಗಾರ್ತಿ ಮೀನಾಕ್ಷಿ ಬಾಳಿ ಅವರು ಕರೆ ನೀಡಿದರು.
ಆಳಂದ ಪಟ್ಟಣದ ಬಸ್ ನಿಲ್ದಾಣ ಎದುರಿಗೆ ಗುರುವಾರ ಯುದ್ಧ ಬೇಡ ಶಾಂತಿ ಬೇಕು ಸಾಮರಸ್ಯದ ಬದುಕಿಗಾಗಿ ಸೌಹಾರ್ದ ನಡಿಗೆ ಸೌಹಾರ್ದ ಕರ್ನಾಟಕ ಆಳಂದ ತಾಲ್ಲೂಕು ಸಮಿತಿ ವತಿಯಿಂದ ಹಮ್ಮಿಕೊಂಡ ಸೌಹಾರ್ದ ನಡಿಗೆ ಜಾಥಾ ಉದ್ದೇಶಿಸಿ ಅವರು ಮಾತನಾಡಿದರು.
ಹೋರಾಟಗಾರ ಮೌಲ್ಲಾ ಮುಲ್ಲಾ ಮಾತನಾಡಿ " ಶಾಂತಿ ಸಂದೇಶದ ಬದುಕು ನಮ್ಮ ಕೈಯಲ್ಲಿದೆ" ಎಂದು ಹೇಳಿದರು.
ವಿವಿಧ ಧಾರ್ಮಿಕ, ಸಾಮಾಜಿಕ ಮತ್ತು ವಿದ್ಯಾರ್ಥಿ ಸಂಘಟನೆಗಳು ಸಹಭಾಗಿತ್ವವನ್ನು ನೀಡಿ ಶಾಂತಿ ಮತ್ತು ಸಾಮರಸ್ಯದ ಸಂದೇಶ ಸಾರಿದರು.
ಈ ನಡಿಗೆಗೆ ಸೌಹಾರ್ದ ಕರ್ನಾಟಕ – ಆಳಂದ ತಾಲ್ಲೂಕು ಸಮಿತಿಗೆ ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಮಾನವ ಸರಪಳಿ ಮಾಡಿ ಮೆರಗು ನೀಡಿದರು.
ಇದೇ ವೇಳೆಯಲ್ಲಿ ಕಾಂ.ಪ್ರಮೋದ ಪಾಂಚಾಳ ಅವರಿಂದ ಕ್ರಾಂತಿಕಾರಿ ಘೋಷಣೆಗಳು ಮೋಳಗಿದವು ವಿದ್ಯಾರ್ಥಿಗಳು, ಮಹಿಳೆಯರು ಹಾಗೂ ಹಿರಿಯ ನಾಗರಿಕರು ನಡಿಗೆಯಲ್ಲಿ ಭಾಗವಹಿಸಿ ಶಾಂತಿಯ ಪರ ನಿಂತರು.
ಸಮಾಜದಲ್ಲಿ ಶಾಂತಿ, ಸಾಮರಸ್ಯ ಮತ್ತು ಸಹಬಾಳ್ವೆಯ ಅಗತ್ಯವಿರುವ ಈ ಸಂದರ್ಭದಲ್ಲಿ, ಆಳಂದದ ಸೌಹಾರ್ದ ನಡಿಗೆ ಕಾರ್ಯಕ್ರಮ ಶಾಂತಿಯ ಸಂದೇಶ ಸಾರಿತು.
ಈ ಸಂದರ್ಭದಲ್ಲಿ ಡಾ.ಪ್ರಭು ಖಾನಾಪುರ,ಕಲ್ಯಾಣಿ ತುಕ್ಕಾಣಿ,ಬಾಖರ್ ಅಲಿ ಜಮಾದಾರ, ಆರೀಫ್ ಅಲಿ ಲಂಗಡೆ,ಸುಲೇಮಾನ್ ನೂರಿ,ನಾಮದೇವ್ ಕೊರಳ್ಳಿ,ಸಿದ್ಧಲಿಂಗ ಮಲಶೇಟ್ಟಿ,ಮಹಾದೇವ ಜಿಡ್ಡೆ,ಕರೀಬಾ ಖೂರೋಷಿ,ಸಿದ್ಧಾರ್ಥ ಹಸೂರೆ,ಸಲ್ಮಾನ,ಪೂಜಾ ರಮೇಶ್ ಲೋಹಾರ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
ವರದಿ ಡಾ.ಅವಿನಾಶ್ S ದೇವನೂರ