ಭವನ ನಿರ್ಮಾಣಕ್ಕೆ ಬಲಸಮುದಾಯದಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಕೆ

ಭವನ ನಿರ್ಮಾಣಕ್ಕೆ ಬಲಸಮುದಾಯದಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಕೆ

ಭವನ ನಿರ್ಮಾಣಕ್ಕೆ ಬಲಸಮುದಾಯದಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಕೆ 

ಪರಿಶಿಷ್ಟ ಜಾತಿ ಬಲ ಸಮುದಾಯಕ್ಕೆ ಅಂಬೇಡ್ಕರ್ ಭವನ ನಿರ್ಮಾಣಕ್ಕಾಗಿ ನಿವೇಶನ ಕಲ್ಪಿಸಿಕೊಡಿ : ಮಾರುತಿ ಗಂಜಗಿರಿ

ಚಿಂಚೋಳಿ : ಪಟ್ಟಣದ ಅವಳಿ ನಗರಗಳಾದ ಚಿಂಚೋಳಿ ಮತ್ತು ಚಂದಾಪೂರ ಪರಿಶಿಷ್ಟ ಜಾತಿಯ ಬಲ ಸಮುದಾಯದವರಿಗಾಗಿ ಚಿಂಚೋಳಿ ಹಳೆಯ ತಹಸೀಲ್ ಕಛೇರಿ ಆವರಣದಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ಭವನ ನಿರ್ಮಾಣಕ್ಕಾಗಿ100*100 ಅಡಿ ನಿವೇಶನ ಮಂಜೂರು ಮಾಡಬೇಕೆಂದು ಆಗ್ರಹಿಸಿ, ಚಂದಾಪೂರದ ಪರಿಶಿಷ್ಟ ಜಾತಿ ಬಲ ಸಮುದಾಯವು ಚಿಂಚೋಳಿಗೆ ಆಗಮಿಸಿದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ. 

ಪಟ್ಟಣದ ವ್ಯಾಪ್ತಿಯ ಚಂದಾಪೂರ ಕಾಲೋನಿಯ ಪರಿಶಿಷ್ಟ ಜಾತಿ ಬಲ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ವಾಸವಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಕೂಲಿ ಕಾರ್ಮಿಕರಾಗಿದ್ದಾರೆ. ಇವರು ಶುಭ ಕಾರ್ಯಗಳನ್ನು ಜರುಗಿಸಲು ಸಮುದಾಯ ಭವನವಾಗಲಿ, ಕಲ್ಯಾಣ ಮಂಟಪ, ಅಂಬೇಡ್ಕರ್ ಭವನ ವಾಗಲಿ ಇಲ್ಲ. ಚಂದಾಪೂರ ಕಾಲೋನಿಯಿಂದ ಚಿಂಚೋಳಿಗೆ 2 ಕಿ.ಮೀ ಅಂತರವಿದ್ದು, ಅಲ್ಲಿನ ಅಂಬೇಡ್ಕರ್ ಭವನಕ್ಕೆ ತೆರಳಿ ಮುಂಜಿ ಕಾರ್ಯಕ್ರಮಗಳಂತಹ ಶುಭ ಕಾರ್ಯಕ್ರಮಗಳು ಕೈಗೊಳಲು ದುಬಾರಿ ಖರ್ಚು ತಗಲುತ್ತಿದೆ. ಲಂಬಾಣಿ ಸಮುದಾಯದ ತಾಂಡಾ ನಿವಾಸಿಗಳಿಗೆ ಸರಕಾರ ಬೃಹತ್ ಮಟ್ಟದಲ್ಲಿ ಬಂಜಾರ ಭವನ ನಿರ್ಮಾಣ ಮಾಡಿ ಅನುಕೂಲ ಕಲ್ಪಿಸಿಕೊಟ್ಟಿದೆ. ಅದರಂತೆ ಚಂದಾಪೂರದ ಪರಿಶಿಷ್ಟ ಜಾತಿ ಬಲ ಸಮುದಾಯಕ್ಕೆ ಹಳೆಯ ತಹಸೀಲ್ ಕಾರ್ಯಾಲಯದ ಆವರಣದಲ್ಲಿ 100*100 ಅಳತೆಯ ನಿವೇಶನವನ್ನು ಡಾ. ಬಿ.ಆರ್. ಅಂಬೇಡ್ಕರ್ ಭವನ ನಿರ್ಮಾಣಕ್ಕಾಗಿ ಸರಕಾರ ಮಂಜೂರಿ ಮಾಡಿ ಸಮುದಾಯದ ಶುಭ ಕಾರ್ಯಕ್ರಮಗಳಿಗೆ ಅನುಕೂಲ ಕಲ್ಪಿಸಿಕೊಡಬೇಕೆಂದು ಸಮುದಾಯದ ಸಾಯಿಬಣ್ಣ ಲೊಡ್ಡನೂರ್, ಮಾರುತಿ ಗಂಜಗಿರಿ, ಸಿದ್ದು ರಂಗನೂರ, ರಾಜಶೇಖರ ಹೊಸಮನಿ, ಜಗನ್ನಾಥ ರಾಮತೀರ್ಥ, ಬಸವರಾಜ ಅಟ್ಟೂರ್, ರಾಧಕೃಷ್ಣ ಹೊಸಮನಿ, ಪಂಡರಿ ಸೋಮವಾರ, ಶರಣಪ್ಪ ರಂಗನೂರ, ಜಗನ್ನಾಥ ಗೌನಳ್ಳಿ, ಮಾರುತಿ ಅಪ್ಪಣೊರ್, ರೇವಣಸಿದ್ದಪ್ಪ ಸುಬೇದಾರ, ರಮೇಶ ಅವರ ಸಹಿಯೊಂದಿಗೆ ಜಿಲ್ಲಾಧಿಕಾರಿಗಳಿಗೆ ಬೇಡಿಕೆಯ ಮನವಿ ಪತ್ರ ಸಲ್ಲಿಸಿ ಆಗ್ರಹಿಸಿ, ಒತ್ತಾಯಿಸಿದ್ದಾರೆ.