ಬೀದರ್-ಬೆಂಗಳೂರು ಹೊಸ ರೈಲು ಸೇವೆ ಆರಂಭಕ್ಕೆ ವಿ.ಸೋಮಣ್ಣಗೆ ಸನ್ಮಾನ

ಬೀದರ್-ಬೆಂಗಳೂರು ಹೊಸ ರೈಲು ಸೇವೆ ಆರಂಭಕ್ಕೆ ವಿ.ಸೋಮಣ್ಣಗೆ ಸನ್ಮಾನ
ಕಲಬುರಗಿ: ಕೇಂದ್ರ ರೈಲ್ವೆ ರಾಜ್ಯ ಸಚಿವರಾದ ವಿ. ಸೋಮಣ್ಣ ಅವರು ಬೀದರ್ ರಿಂದ ಬೆಂಗಳೂರುವರೆಗೆ ಹೊಸ ರೈಲು ಸೇವೆಯನ್ನು ಆರಂಭಿಸಿರುವುದಕ್ಕೆ ಗೌರವ ಸೂಚಿಸಿ, ಜಿಲ್ಲಾಭ್ಯರ್ಥಿ ಬಿಜೆಪಿ ರೈತ ಮೋರ್ಚಾದ ಕಾರ್ಯದರ್ಶಿ ಮಲ್ಲಿನಾಥ ಪಾಟೀಲ್ ಕಾಳಗಿ ಅವರು ಬೆಂಗಳೂರಿನಲ್ಲಿ ಸೋಮಣ್ಣ ಅವರ ನಿವಾಸಕ್ಕೆ ಭೇಟಿ ನೀಡಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಮಲ್ಲಿನಾಥ ಪಾಟೀಲ್ ಅವರು ಮಾತನಾಡಿ, “ಬೀದರ್-ಬೆಂಗಳೂರು ನಡುವೆ ನೇರ ರೈಲು ಸಂಪರ್ಕದ ಕೊರತೆಯಿಂದ ಅನೇಕ ಪ್ರಯಾಣಿಕರು ಸಂಕಷ್ಟ ಅನುಭವಿಸುತ್ತಿದ್ದರು. ಈ ಹೊಸ ರೈಲು ಸೇವೆ ಜಿಲ್ಲೆಯ ಜನತೆಗೆ ಬಹುಮಾನವಾಗಿದೆ” ಎಂದು ಹೇಳಿದರು.
ಸನ್ಮಾನ ಸ್ವೀಕರಿಸಿದ ಸಚಿವ ವಿ. ಸೋಮಣ್ಣ ಅವರು, ರೈಲ್ವೆ ಇಲಾಖೆಯು ಪ್ರಾದೇಶಿಕ ಅಭಿವೃದ್ಧಿಗೆ ಬದ್ಧವಾಗಿದೆ ಎಂಬುದನ್ನು ಪುನರೂಚಿಸಿದ್ದರು. "ಇದು ಕೇವಲ ಆರಂಭವಷ್ಟೆ. ಇನ್ನೂ ಹೆಚ್ಚಿನ ರೈಲು ಸೇವೆಗಳನ್ನು ಗ್ರಾಮೀಣ ಜನತೆಗೆ ತಲುಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ," ಎಂದರು.
---
.