ಡಾ. ಶ್ಯಾಮಪ್ರಸಾದ್ ಮುಖರ್ಜಿ ಬಲಿದಾನ ದಿನ ಆಚರಣೆ

ಡಾ. ಶ್ಯಾಮಪ್ರಸಾದ್ ಮುಖರ್ಜಿ ಬಲಿದಾನ ದಿನ ಆಚರಣೆ

ಡಾ. ಶ್ಯಾಮಪ್ರಸಾದ್ ಮುಖರ್ಜಿ ಬಲಿದಾನ ದಿನ ಆಚರಣೆ

ಕಲಬುರಗಿ: ಗ್ರಾಮೀಣ ಮತಕ್ಷೇತ್ರದ ಕಾರ್ಯಾಲಯದಲ್ಲಿ ಭಾನುವಾರ ರಾಷ್ಟ್ರಭಕ್ತ, ಜನಸಂಘ ಸಂಸ್ಥಾಪಕ ಡಾ. ಶ್ಯಾಮಪ್ರಸಾದ್ ಮುಖರ್ಜಿ ಅವರ ಬಲಿದಾನ ದಿನವನ್ನು ಶ್ರದ್ಧಾಭಿವಂದನೆಗಳೊಂದಿಗೆ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಶಾಸಕರಾದ ಬಸವರಾಜ ಮತ್ತಿಮಡು ಅವರು ಡಾ. ಮುಖರ್ಜಿ ಅವರ ರಾಷ್ಟ್ರನಿಷ್ಠೆ, ತ್ಯಾಗಮಯ ಜೀವನ ಮತ್ತು ರಾಷ್ಟ್ರ ನಿರ್ಮಾಣದಲ್ಲಿ ಅವರ ಕೊಡುಗೆಗಳನ್ನು ಸ್ಮರಿಸಿ ನಮನ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಗ್ರಾಮೀಣ ಮತಕ್ಷೇತ್ರದ ಅಧ್ಯಕ್ಷ ಗಂಗಪ್ಪಗೌಡ ಪಾಟೀಲ ಬೋದನ, ಪ್ರಧಾನ ಕಾರ್ಯದರ್ಶಿ ಶಿವಕುಮಾರ ಪಾಟೀಲ ಜಂಬಗಾ, ಪಕ್ಷ ಮುಖಂಡರಾದ ಸಂಗಮೇಶ ವಾಲಿ, ಜಗನ್ನಾಥ ಮಾಲಿಪಾಟೀಲ, ಸಮಾಜ ಸೇವಕಿ ಜಯಶ್ರೀ ಬಿ ಮತ್ತಿಮಡು, ನಿಂಗಣ್ಣ ಪೂಜಾರಿ, ನಿಜಲಿಂಗಪ್ಪ ವಾಗ್ದರ್ಗಿ, ಉದಯಕುಮಾರ ಪಾಟೀಲ ಕಮಲಾಪುರ, ಗುಂಡಪ್ಪ ಶಿರಡೋಣ, ಕಾಶಿನಾಥ ರಾಮನ, ಅಬ್ದುಲ ರಹಿಮ್, ರಮೇಶ ಕುಸನೂರ, ಆನಂದ ಕಣಸೂರ ಸೇರಿದಂತೆ ಹಲವಾರು ಪಕ್ಷದ ಕಾರ್ಯಕರ್ತರು ಪಾಲ್ಗೊಂಡಿದ್ದರು.

ಕಾರ್ಯಕ್ರಮದಲ್ಲಿ ಡಾ. ಮುಖರ್ಜಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು ಹಾಗೂ ಅವರ ಜೀವನ ಸಂದೇಶದ ಕುರಿತು ಚರ್ಚಿಸ

ಲಾಯಿತು.