ಸೇಡಂ ರಸ್ತೆಯ ಓಂ ನಗರದಲ್ಲಿ ಸಸಿಯ ನೆಡಿಕೆ ಕಾರ್ಯಾಚರಣೆ

ಸೇಡಂ ರಸ್ತೆಯ ಓಂ ನಗರದಲ್ಲಿ ಸಸಿಯ ನೆಡಿಕೆ ಕಾರ್ಯಾಚರಣೆ
ಕಲಬುರಗಿ: ಕನಸು ಸೇವಾ ಸಂಸ್ಥೆ (ರಿ) ವತಿಯಿಂದ ಇಂದು ಕಲಬುರಗಿ ಜಿಲ್ಲೆಯ ಸೇಡಂ ರಸ್ತೆಯ ಓಂ ನಗರದಲ್ಲಿರುವ ಓಂಕಾರೇಶ್ವರ ದೇವಸ್ಥಾನದ ಆವರಣದಲ್ಲಿ ಪರಿಸರ ಸಂರಕ್ಷಣೆಗಾಗಿ 15 ಸಸಿಗಳನ್ನು ನೆಡಲಾಯಿತು.
ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಪದಾಧಿಕಾರಿಗಳಾದ ಸಂತೋಷಕುಮಾರ್ ಎಸ್.ಪಿ, ಕರ್ಣ ಯಲಬತ್ತಿ, ಸಾವಿರಪ್ಪ ಹಳ್ಳಿ, ಹುಸೇನಿ ಪಾಳಾ, ಮಹೇಶ್, ರಾಚಯ್ಯಸ್ವಾಮಿ ಹಿರೇಮಠ ಮತ್ತು ಇತರರು ಪಾಲ್ಗೊಂಡು ಸಸಿನ ನೆಡಿಕೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದರು.
ಪರಿಸರ ಸಂರಕ್ಷಣೆಯ ಅಗತ್ಯತೆಯ ಕುರಿತು ಸಮುದಾಯದ ಎಚ್ಚರಿಕೆಗೆ ಈ ಕಾರ್ಯ ಕ್ರಮ ಸೂಕ್ತ ನಿದರ್ಶನವಾಗಿದ್ದು, ಭವಿಷ್ಯದಲ್ಲಿಯೂ ಇಂತಹ ಅನೇಕ ಹಸಿರು ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಸಂಸ್ಥೆಯ ಪ್ರತಿನಿಧಿಗಳು ತಿಳಿಸಿದರು.