ಅಂತರಾಷ್ಟ್ರೀಯ ಬೂಕರ್‌ ಪ್ರಶಸ್ತಿ ವಿಜೇತರಾದ ಬಾನು ಮುಷ್ತಾಕ್ ಅವರ "ಎದೆಯ ಹಣತೆ" ಪುಸ್ತಕ ಕುರಿತು ವಿಶೇಷ ಉಪನ್ಯಾಸ ಜರುಗಿತು

ಅಂತರಾಷ್ಟ್ರೀಯ ಬೂಕರ್‌ ಪ್ರಶಸ್ತಿ ವಿಜೇತರಾದ ಬಾನು ಮುಷ್ತಾಕ್ ಅವರ  "ಎದೆಯ ಹಣತೆ" ಪುಸ್ತಕ ಕುರಿತು ವಿಶೇಷ ಉಪನ್ಯಾಸ ಜರುಗಿತು

ಅಂತರಾಷ್ಟ್ರೀಯ ಬೂಕರ್‌ ಪ್ರಶಸ್ತಿ ವಿಜೇತರಾದ ಬಾನು ಮುಷ್ತಾಕ್ ಅವರ "ಎದೆಯ ಹಣತೆ" ಪುಸ್ತಕ ಕುರಿತು ವಿಶೇಷ ಉಪನ್ಯಾಸ ಜರುಗಿತು 

ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು, ಚಕೋರ ಸಾಹಿತ್ಯ ವಿಚಾರ ವೇದಿಕೆ, ಬೀದರ, ಅತಿವಾಳೆ ಸಾಂಸ್ಕೃತಿಕ ಪ್ರತಿಷ್ಠಾನ, ಇವರ ಸಹಯೋಗದಲ್ಲಿ ನಗರದ ಕರುನಾಡು ಸಾಂಸ್ಕತಿಕ ಸಭಾಂಗಣದಲ್ಲಿ ಜೂನ್ 22,ರಂದು ಅಂತರಾಷ್ಟ್ರೀಯ ಬೂಕರ್‌ ಪ್ರಶಸ್ತಿ ವಿಜೇತರಾದ ಬಾನು ಮುಷ್ತಾಕ್ ಅವರ "ಎದೆಯ ಹಣತೆ" ಪುಸ್ತಕ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತು

 ವಚನಾಮೃತ ಕನ್ನಡ ಸಂಘದ ಅಧ್ಯಕ್ಷರಾದ ಪ್ರೊ. ಸಿದ್ರಾಮಪ್ಪ ಮಾಸಿಮಾಡೆ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ ಕನ್ನಡ ಸಾಹಿತ್ಯವು ಶ್ರೇಷ್ಠ ಹಾಗೂ ಅನೇಕ ವರ್ಷಗಳ ಇತಿಹಾಸ ಪರಂಪರೆಯನ್ನು ಹೊಂದಿದೆ. ಸಣ್ಣ ಕಥೆ ಗೆ ಓದುಗರ ಸಂಖ್ಯೆ ಹೆಚ್ಚಿದೆ, ಸಣ್ಣ ಕಥೆಗಳು ಇಂದು ಜನರ ಮನಸ್ಸಿಗೆ ಬಹು ಬೇಗ ಮುಟ್ಟುತ್ತವೆ. ಬೀದರ ಜನತೆಯಲ್ಲಿ ಕನ್ನಡ ಮಿಶ್ರಿತ ಭಾಷೆ ಬಳಕೆಯಲ್ಲಿದೆ ಭಾಷೆಯ ಶುದ್ಧತೆ ಮಾಡುವ ಅವಶ್ಯಕತೆಯಿದೆ ಎಂದು ನುಡಿದರು.  

ಹುಲಸೂರಿನ ಎಂಕೆಕೆಪಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಸಹಾಯಕ ಪ್ರಾಧ್ಯಾಪಕರಾದ ಡಾ. ಲಕ್ಷ್ಮಿಕಾಂತ ಸಿ ಪಂಚಾಳ ಅವರು ವಿಶೇಷ ಉಪನ್ಯಾಸ ನೀಡುತ್ತಾ ಕನ್ನಡದ ಆಸ್ಮಿತೆಯನ್ನು ಜಾಗತಿಕ ಮಟ್ಟದಲ್ಲಿ ನೆಲೆಯೂರುವಂತೆ ಮಾಡಿದ ಕೀರ್ತಿ ಬಾನು ಮುಸ್ತಾಕ್ ಅವರಿಗೆ ಸಲ್ಲುತ್ತದೆ. ಕನ್ನಡದ ಪ್ರಗತಿಪರ ಚಿಂತಕಿ, ಬರಹಗಾರ್ತಿ, ಕತೆಗಾರ್ತಿಯಾದ ಬಾನು ಮುಸ್ತಾಕ್ ಅವರು ಬರೆದ ಹನ್ನೆರಡು ಕತೆಗಳಿಂದ ಕೂಡಿದ ಸತ್ವವುಳ್ಳ ಜೀವಪರ ಕಾಳಜಿಯನ್ನು ಹೊಂದಿರುವ ಅದ್ಭುತ ಕೃತಿಯೇ ಎದೆಯ ಹಣತೆ. ದೀಪ ಭಾಸ್ತಿ ಅವರು ಇದನ್ನು ಆಂಗ್ಲ ಭಾಷೆಯಲ್ಲಿ ಹಾರ್ಟ್ ಲ್ಯಾಂಪ್ ಎಂದು ಅನುವಾದಿಸಿದ್ದಾರೆ. ಇದಕ್ಕೆ ಅಂತರಾಷ್ಟ್ರೀಯ ಬೂಕರ್ ಪ್ರಶಸ್ತಿ ಗೌರವ ಸಂದಿದೆ.ಮಹಿಳೆಯರ ಬದುಕು ಸಂಕಷ್ಟ ಸಮಾಜ ಮುಖಿಯಾದ ಸತ್ವವುಳ್ಳ ಚಿಂತನೆಯನ್ನು ಎದೆಯ ಹಣತೆ ಒಳಗೊಂಡಿದೆ. ವೈಚಾರಿಕತೆ, ಮಹಿಳಪರ ಜಾಗೃತಿ, ಸ್ತ್ರೀ ಪಾತ್ರಗಳು ವಿಶಿಷ್ಟ ಪ್ರಸಂಗಗಳು ಈ ಕೃತಿಯಲ್ಲಿ ಮೂಡಿಬಂದಿವೆ ತಿಳಿಸಿದರು. 

ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸಂಜೀವಕುಮಾರ ಅತಿವಾಳೆ ಮುಖ್ಯ ಅತಿಥಿಯಾಗಿ ಮಾತನಾಡಿ ಬೀದರ ಜಿಲ್ಲೆಯಲ್ಲಿ ಪ್ರತಿಭೆಗಳಿಗೆ ಕೊರತೆ ಇಲ್ಲ ಸೂಕ್ತ ವೇದಿಕೆ ಸಿಕ್ಕರೆ ರಾಜ್ಯ ರಾಷ್ಟ್ರ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿ ತೋರಿಸುವ ಶಕ್ತಿ , ಸಾಮರ್ಥ್ಯ ಇದೆ ವೇದಿಕೆಗಳು ನೀಡುವ ನಿಟ್ಟಿನಲ್ಲಿ ಕೆಲಸ ಆಗಬೇಕು, ಮುಂದಿನ ದಿನಗಳಲ್ಲಿ ಬೀದರ ಜಿಲ್ಲೆಯಲ್ಲಿ ಗಟ್ಟಿ ಬರಹಗಾರರನ್ನು, ಸಾಹಿತಿಗಳನ್ನು ತಯಾರಿಸುವ ಕೆಲಸ ಮಾಡಲಾಗುತ್ತಿದೆ. ಎಂದು ತಿಳಿಸಿದರು. 

ಚಕೋರ ಸಾಹಿತ್ಯ ವಿಚಾರ ವೇದಿಕೆ ಜಿಲ್ಲಾ ಸಂಚಾಲಕರಾದ ಡಾ. ಮಕ್ತುಂಬಿ ಎಂ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಕನ್ನಡ ಕಾರ್ಯಕ್ರಮಗಳು ಯಶಸ್ವಿಯಾಗಬೇಕಾದರೆ ಕನ್ನಡ ಮನಸ್ಸುಗಳು ಜಾಗೃತರಾಗಬೇಕು, ಗಡಿ ಭಾಗದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಉಪನ್ಯಾಸ ಸೇರಿದಂತೆ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದು ಎಂದು ನುಡಿದರು. 

ಶಂಭುಲಿಂಗ ವಾಲ್ದೊಡ್ಡಿ, ಸೃಜನ್ಯ ಅತಿವಾಳೆ, ವೇದಿಕಾ ಚಿಲ್ಲರ್ಗಿ ಗಾಯನ ಮಾಡಿದರು, 

ದೀಲಿಪಕುಮಾರ ಮೊಘ ನಿರೂಪಿಸಿದರು. ಉಮಕಾಂತ ಮೀಸೆ ಸ್ವಾಗತಿಸಿದರು ಬಸವರಾಜ ಮೂಲಗೆ ವಂದಿಸಿದರು.