ಶಾಸಕ ಡಾ. ಅವಿನಾಶ ಜಾಧವರಿಂದ ಕೆಡಿಪಿ ಸಭೆ. ಶೈಕ್ಷಣಿಕ ಗುಣಮಟ್ಟ ಸುಧಾರಿಸಲು ಶಿಕ್ಷಣ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ

ಶಾಸಕ ಡಾ. ಅವಿನಾಶ ಜಾಧವರಿಂದ ಕೆಡಿಪಿ ಸಭೆ.
ಶೈಕ್ಷಣಿಕ ಗುಣಮಟ್ಟ ಸುಧಾರಿಸಲು ಶಿಕ್ಷಣ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ
ಚಿಂಚೋಳಿ :ಎಸ್.ಎಸ್.ಎಲ್.ಸಿ ಫಲಿತಾಂಶದಲ್ಲಿ ಚಿಂಚೋಳಿ ಕೊನೆಯ ಸ್ಥಾನಕ್ಕೆ ಬಂದು ತಲುಪಿದೆ. ಲಕ್ಷ, ಲಕ್ಷ ಸಂಬಳ ಪಡೆಯುವ ನೀವು ಮತ್ತು ನಿಮ್ಮ ಕೆಳಹಂತದ ಅಧಿಕಾರಿಗಳು, ಶಿಕ್ಷಕರು ಏನು ಮಾಡುತ್ತಿದ್ದೀರಿ? ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಲಕ್ಷ್ಮಯ್ಯ ಅವರನ್ನು ಶಾಸಕ ಡಾ. ಅವಿನಾಶ ಜಾಧವ್ ಅವರು ತರಾಟೆಗೆ ತೆಗೆದುಕೊಂಡರು.
ಅವರು ತಾಲೂಕ ಪಂಚಾಯತ ಸಭಾಂಗಣದಲ್ಲಿ ತ್ರೈ ಮಾಸಿಕ ಪ್ರಗತಿ ಪರಿಶಿಲನೆ ಸಭೆ ತೆಗೆದುಕೊಂಡು ಮಾತನಾಡಿ, ಕ್ಷೇತ್ರದ ಶೈಕ್ಷಣಿಕ ಗುಣಮಟ್ಟ ವರ್ಷದಿಂದ ವರ್ಷಕ್ಕೆ ಕುಂಠಿತಗೊಳುತ್ತಲೇ ಬರುತ್ತಿದೆ. ನೀವು, ನಿಮ್ಮ ಕೆಳಹಂತದ ವಲಯ ಅಧಿಕಾರಿಗಳು, ಶಿಕ್ಷಕು ಏನು ಮಾಡುತ್ತಿದ್ದೀರಿ ? ಎಂದು ಶಿಕ್ಷಣ ಅಧಿಕಾರಿಗೆ ಪ್ರಶ್ಷಿಸಿ, ಖಡಕ್ಕಾಗಿ ಗದರಿಸಿದರು.
ಶಿಕ್ಷಕರು ಸರಿಯಾಗಿ ಭೂನಾದಿ ಶಿಕ್ಷಣ ನೀಡಿದರೆ, ಕ್ಷೇತ್ರದ ಫಲಿತಾಂಶ ಕೆಳಹಂತಕ್ಕೆ ಬಂದು ತಲುಪುತ್ತಿರಲಿಲ್ಲ. ಶಿಕ್ಷಕರು ವಿದ್ಯಾರ್ಥಿಗಳಿಗೆ ಭೂನಾಧಿ ಶಿಕ್ಷಣಕ್ಕೆ ಒತ್ತು ನೀಡಿ ಪಾಠ ಮಾಡುವಂತೆ ಕ್ರಮಗೊಳಬೇಕು. ಈ ವರ್ಷ ಶೇ. 80 ರಷ್ಟು ಫಲಿತಾಂಶ ಪ್ರಗತಿ ಸಾಧಿಸುವ ನಿಟ್ಟಿನಲ್ಲಿ , ಪ್ರತಿ ಶಾಲೆಗಳಿಗೆ ಭೇಟಿ ನೀಡಿ ಶಿಕ್ಷಣ ಗುಣಮಟ್ಟ ಸುಧಾರಿಸುವುದರ ಕಡೆಗೆ ಗಮನಹರಿಸಿ, ಇದೇ ಜೂ.25 ರಂದು ತಳಹಂತದ ಅಧಿಕಾರಿಗಳಾದ ಸಿಆರ್.ಪಿ, ಬಿಆರ್.ಪಿ, ಇಸಿಓ ಗಳೊಂದಿಗೆ ಸಭೆ ನಡೆಸಲಾಗುತ್ತದೆ. ಅತಿಶಿಕ್ಷಕರನ್ನು ಪಡೆಯುವಲಿ ಇದ್ದ ಅಹರ್ತೆಉಳ್ಳ ವವರನ್ನು ಕಡೆಗಣಿಸಬೇಡಿ ಎಂದರು. ಈ ಮೊದಲಿನಿಂದಲೂ ಕಾರ್ಯನಿರ್ವಹಿಸುತ್ತಾ ಬರುತ್ತಿರುವ ಅತಿಥಿ ಶಿಕ್ಷಕರನ್ನೇ ಮೊದಲ ಆದ್ಯತೆ ನೀಡಿ ಮುಂದುವರೆಸಲು ತಿಳಿಸಲಾಗಿದೆ
ಎಂದು ಬಿಇಓ ವಿ. ಲಕ್ಷ್ಮಯ್ಯ ತಿಳಿಸಿದರು.
ವಸತಿ ನಿಲಯ ವಿದ್ಯಾರ್ಥಿಗಳಿಗೆ ಯೋಗದ ಜೊತೆಗೆ ಅರೆ ಶಿಕ್ಷಕರಿಂದ ವಿದ್ಯಾರ್ಥಿಗಳಿಗೆ ವಿಶೇಷ ಟುಷೇನ ಕ್ಲಾಸ್ ಕೊಡಿಸಲಾಗುತ್ತಿದೆ ಎಂದು ಸಭೆಗೆ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ಕಲ್ಯಾಣ ಇಲಾಖೆಯ ಅಧಿಕಾರಿಗಳು ತಿಳಿಸಿದರು.
ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ತಾ. ಪಂ. ಇಓ ಗೆ ಸೂಚನೆ :
ಚಿಂಚೋಳಿ ಕ್ಷೇತ್ರಕ್ಕೆ ಕೆಕೆಆರ್ ಡಿಬಿ ವತಿಯಿಂದ 40 ಕಾಮಗಾರಿಗಳಿಗೆ ಬಂದ 6 ಕೋಟಿ ರು ಅನುದಾನವನ್ನು ಲ್ಯಾಂಡ್ ಆರ್ಮಿ ಅಧಿಕಾರಿಗಳು ಬೇರೊಂದು ಕಡೆಗೆ ವರ್ಗಾಯಿಸಲಾಗಿದೆ. ಬಂದ ಕಾಮಗಾರಿಗಳ ಹಣವನ್ನು ಬೇರೆ ಕಡೆಗೆ ವರ್ಗಾಯಿಸಲು ಅಧಿಕಾರಿಗಳಿಗೆ ಯಾರು ಅಧಿಕಾರ ಕೊಟ್ಟಿದ್ದಾರೆ ? ವರ್ಗಾಯಿಸಿದ ಅಧಿಕಾರಿಗಳ ವಿರುದ್ಧ ಸಭೆಯ ನೋಟಿಸ್ ಮೋಲಕ ಕ್ರಿಮಿನಲ್ ಪ್ರಕರಣ ದಾಖಲಿಸಿ ಎಂದು ಶಾಸಕ ಡಾ. ಅವಿನಾಶ ಜಾಧವ್ ಅವರು ತಾ.ಪಂ ಇಓಗೆ ತಿಳಿಸಿದರು.
ವಸತಿ ಮನೆಗಳ ಮಂಜೂರಾತಿಗೆ ಹಣ ವಸೂಲಿ. ಕ್ರಮಕ್ಕೆ ಶಾಸಕ ಆಗ್ರಹ :
ಅಂಬೇಡ್ಕರ್, ಬಸವ, ಪ್ರಾಧಾನ ಮಂತ್ರಿ ಆವಾಸ್ ಯೋಜನೆಯ ವಸತಿ ಮನೆಗಳು ಮಂಜೂರಾತಿ ನೀಡಲು ಫಲಾಭವಿಗಳಿಂದ ತಾ.ಪಂ. ನೋಡಲ್ ಅಧಿಕಾರಿ ಶರಣಪ್ಪ ಗಡ್ಕರಿ ಫೋನ್ ಪೇ ಮೂಲಕ ಮನ ಬಂದಂತೆ ಹಣ ವಸೂಲಿ ಮಾಡುತ್ತಿರುವುದರ ಬಗ್ಗೆ ಫಲಾಭವಿಗಳಿಂದ ದೂರುಗಳು ಬರುತ್ತಿವೆ. ಪೋನ್ ಪೇ ಪಡೆದ ಅಧಿಕಾರಿ ವಿರುದ್ಧ ಸಿಇಓ ಮತ್ತು ಇಓ ಅವರು ಸೂಕ್ತ ಕ್ರಮಕೈಗೊಂಡು ವಜಾಗೊಳಿಸಬೇಕು. ದೂರಿನ ಬಗ್ಗೆ ಸರಕಾರದ ಮುಖ್ಯಕಾರ್ಯದರ್ಶಿಗಳಿಗೆ ಪತ್ರ ಬರೆದು, ಭೇಟಿ ಮಾಡಲಾಗುತ್ತದೆ. ಅಧಿಕಾರಿ ಫೋನ್ ಪೇ ಪಡೆದಿರುವ ದೂರಿನ ದಾಖಲೆಗಳು ಮಾಧ್ಯಮಗಳಿಗೆ ಪರಿಶೀಲನೆ ಸಭೆಯಲ್ಲಿ ಶಾಸಕರು ತೊರಿಸಿದರು.
ತಾ.ಪಂ. ಇಓ ಶಂಕರ ರಾಠೋಡ, ತಹಸೀಲ್ದಾರ ಸುಬ್ಬಣ್ಣ ಜಮಖಂಡಿ ಸೇರಿದಂತೆ ತಾಲೂಕ ಮಟ್ಟದ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದರು.