ಕನಕಪೂರ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಸುನೀಲಕುಮಾರ ಮೇತ್ರಿ ಆಯ್ಕೆ

ಕನಕಪೂರ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಸುನೀಲಕುಮಾರ ಮೇತ್ರಿ ಆಯ್ಕೆ

ಕನಕಪೂರ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಸುನೀಲಕುಮಾರ ಮೇತ್ರಿ ಆಯ್ಕೆ

ಚಿಂಚೋಳಿ :ತಾಲೂಕಿನ ಕನಕಪೂರ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಸುನೀಲಕುಮಾರ ಮೇತ್ರಿ ಅವಿರೋಧವಾಗಿ ಆಯ್ಕೆಗೊಂಡರು.

ರತ್ನಪ್ಪ ಇಟಗಿ ಅವರು ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿದರಿಂದ ಚುನಾವಣೆ ಅಧಿಕಾರಿ ತಹಸೀಲ್ದಾರ ಸುಬ್ಬಣ್ಣ ಜಮಖಂಡಿ ಅವರು ಚುನಾವಣೆ ಪಕ್ರಿಯೆಗೆ ದಿನಾಂಕ ನಿಗದಿಪಡಿಸಿ, ಚುನಾವಣೆ ನಡೆಸಿದರು.

ಸುನೀಲಕುಮಾರ ಮೇತ್ರಿ ಅವರ ಪ್ರತಿಸ್ಪರ್ಧಿಗಳಾಗಿ ಸದಸ್ಯರು ಪೈಪೋಟಿ ನಡೆಸದೇ ಇರುವ ಕಾರಣ ಚುನಾವಣೆ ಅಧಿಕಾರಿಗಳು ಮೇತ್ರಿ ಅವರನ್ನು ಅವಿರೋಧವಾಗಿ ಆಯ್ಕೆಗೊಳಿಸಿ ಆದೇಶಿಸಿದರು.

ಅಧ್ಯಕ್ಷ ಸ್ಥಾನ ಸಾಮಾನ್ಯ ಅಭ್ಯರ್ಥಿ ಮೀಸಲಾಗಿತು. ಕನಕಪೂರ ಗ್ರಾಮ ಪಂಚಾಯತಿ ಇತಿಹಾಸದಲೇ ಪರಿಶಿಷ್ಟ ಪಂಗಡ ಸಮುದಾಯದ ಪುರುಷ ಸದಸ್ಯ ಅಧ್ಯಕ್ಷ ಸ್ಥಾನ ಅಲಂಕರಿಸಿರುವ ಇದೇ ಮೊದಲು ಎನ್ನಲಾಗುತ್ತಿದೆ. ಕನಕಪೂರ ಗ್ರಾ.ಪಂಚಾಯತಿ ಒಟ್ಟು 23 ಸದಸ್ಯ ಬಲದ ಪೈಕಿ 19 ಜನ ಸದಸ್ಯರು ಅಧ್ಯಕ್ಷ ಸ್ಥಾನದ ಚುನಾವಣೆ ಪಕ್ರಿಯೆಯಲ್ಲಿ ಭಾಗವಹಿಸಿ, ಮೇತ್ರಿ ಅವರನ್ನು ಅವಿರೋಧವಾಗಿ ಆಯ್ಕೆಗೊಳಿಸಿದರು.

ಉಪಾಧ್ಯಕ್ಷೆ ಜೈಶೀಲಾ ಘಾಳಪ್ಪ, ಸದಸ್ಯರಾದ ನರಸಮ್ಮ ಲಕ್ಷ್ಮಣ ಆವಂಟಿ, ದಿಕ್ಷ ಬಸವರಾಜ, ಸುಧಾ ಸಂಗಪ್ಪ, ರೇಣುಕಾ ನಾಗೀಂದ್ರಪ್ಪ, ನಾಗರೆಡ್ಡಿ, ಉಮೇಶ, ಪ್ರೇಮಲಾ, ಜಗನ್ನಾಥ, ಹಣಮಂತರಾವ, ಸಿದ್ದಮ್ಮ, ಸಂಗೀತಾ ಹಣಮಂತ, ಜೈಬುನ್ನಿಸಾ ಬೇಗಂ ಹನ್ನುಸಾಬ, ಮಹೇಶ ಅವರು ಆಯ್ಕೆ ಪಕ್ರಿಯೆಯಲ್ಲಿ ಪಾಲ್ಗೊಂಡಿದರು.

ಪಕ್ರಿಯೆ ಸಂದರ್ಭದಲ್ಲಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ವಿಜಯಲಕ್ಷ್ಮೀ ಮೇತ್ರಿ, ಕರ ವಸೂಲಿಗಾರ ಮಡಿವಾಳಯ್ಯ ಸ್ವಾಮಿ, ಜಗನ್ನಾಥ ವಗ್ಗಿ ಅವರು ಉಪಸ್ಥಿತರಿದರು.

ಈ ಸಂದರ್ಭದಲ್ಲಿ ಮುಖಂಡರಾದ ಲಕ್ಷ್ಮಣ ಆವಂಟಿ, ನಾಗರಾಜ ಪಾಟೀಲ್, ಶಾಮರಾವ ಕೊರವಿ, ಶಂಕ್ರಪ್ಪ ಸಾತ್ತಪ್ಪ, ಜಗನ್ನಾಥ ಕಟ್ಟಿ, ಶಂಕರ ಹಿಪ್ಪರಗಿ, ಮಲ್ಲಿಕಾರ್ಜುನ್ ರಾಯಗೋಡ ಅವರು ಸೇರಿದಂತೆ ಕನಕಪೂರ ಗ್ರಾಮಸ್ಥರು ಹಾರೂ ಬೆಂಬಲಿಗರು ಪಟಾಕಿ ಸಿಡಿಸಿ ವಿಜ್ಯೋತ್ಸವ ಆಚರಿಸಿ ಸಂಭ್ರಮಿಸಿದರು.