ನಾಳೆ ಜೂ. 6 ರಂದು ನಡೆಯುತ್ತಿರುವು ಬಸವಣ್ಣನ ಧರ್ಮಸಭೆ ಅಲ್ಲ, ರಾಜಕೀಯ ಸಭೆ: ಆರೋಪ
ನಾಳೆ ಜೂ. 6 ರಂದು ನಡೆಯುತ್ತಿರುವು ಬಸವಣ್ಣನ ಧರ್ಮಸಭೆ ಅಲ್ಲ, ರಾಜಕೀಯ ಸಭೆ: ಆರೋಪ
ತಾಲೂಕಿನ ಹಿರಿಯ ಮಠಾಧೀಶರನ್ನು ಆಹ್ವಾನಿಸದೇ ನಡೆಸುತ್ತಿರುವ ಜಯಂತಿಗೆ ವಿರೋಧವಿದೆ : ಗಂಗಾಣಿ
ಚಿಂಚೋಳಿ : ತಾಲೂಕಿನಲ್ಲಿರುವ ಹಿರಿಯ ಮಠಗಳ ಮಠಾಧೀಶರುಗಳನ್ನು ಆಹ್ವಾನಿಸದೇ ಚಿಂಚೋಳಿಯಲ್ಲಿ ಬಸವಣ್ಣನವರ ಜಯಂತಿ ಆಚರಿಸಲಾಗುತ್ತಿದೆ ಎಂದು ಲಿಂಗಾಯತ ಸಮಾಜದ ವೀರಣ್ಣ ಗಂಗಾಣಿ, ಮಲ್ಲಿಕಾರ್ಜುನ್ ಉಡುಪಿ, ರೇವಣಸಿದ್ದ ಮೋಘಾವರು ಆರೋಪಿಸಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಜೂನ್. 6 ರಂದು ನಡೆಯಲಿರುವ ಬಸವಣ್ಣನವರ ಜಯಂತಿ ಹಾಗೂ ಧರ್ಮಸಭೆ ಕಾರ್ಯಕ್ರಮ ಅಲ್ಲ. ನಡೆಯಲಿರುವುದು ರಾಜಕೀಯ ಕಾರ್ಯಕ್ರಮ ಎಂದು ಆರೋಪಿಸಿದ್ದಾರೆ.
ಬಸವಣ್ಣನವರ ಬಗ್ಗೆ ಧರ್ಮದ ತಾಸು ಗಂಟಲೆ ಪುರಾಣ ಪ್ರವಚನ ನೀಡುವ ಸಾಮರ್ಥ್ಯ ತಾಲೂಕಿನ ನೀಡಗುಂದಾ, ಚಂದನಕೇರಾ, ಐನಾಪೂರ, ಚಿಮ್ಮಾಇದ್ಲಾಯಿ, ಸುಲೇಪೇಟ, ಸುಗೂರುಗಳಂತಹ ಹಿರಿಯ ಮಠಾಧೀಶರುಗಳಿಗೆ ಇದೆ. ಅಂತಹ ಸಾಮರ್ಥ್ಯಹೊಂದಿರುವ ಮಠಾಧೀಶರುಗಳನ್ನು ಧರ್ಮಸಭೆ ಮತ್ತು ಜಯಂತ್ಯೋತ್ಸವಕ್ಕೆ ಆಹ್ವಾನ ಪತ್ರಿಕೆ ನೀಡದೇ ಕಡೆಗಣಿಸಿ, ಆಮಂತ್ರಣ ಪತ್ರಿಕೆ ಹಾಗೂ ಬ್ಯಾನರ್ ಗಳಿಂದಲೂ ಕೈಬಿಟ್ಟು, ಬೇರೊಬ್ಬರನ್ನು ಆಹ್ವಾನ ನೀಡಲಾಗಿದೆ. ತಾಲೂಕಿಗೆ ಕೊಡುಗೆ ನೀಡಿರುವ ಬಸವನಗೌಡ ಪಾಟೀಲರನ್ನೂ ಕಡೆಗಣಿಸಿ, ತಮಗೆ ಬೇಕಾದ ರಾಜಕೀಯ ಮುಖಂಡರರುಗಳಾದ ವಿಜಯನಾಂದ ಕಾಶಪ್ಪನವರ ಅವರನ್ನು ಬ್ಯಾನರಗಳಲ್ಲಿ ಅಳವಡಿಸಿಕೊಂಡು ನಡೆಸುತ್ತಿರುವುದು ಧರ್ಮಸಭೆ ಅಲ್ಲ. ಇದೊಂದು ರಾಜಕೀಯ ಸಭೆ ಆಗಿ ಪರಿರ್ವತಿಸಿ ಮಾಡುಲಾಗುತ್ತಿರುವ ಸಭೆ ಆಗಿದೆ ಎಂದು ಆರೋಪಿಸಿದರಲ್ಲದೇ, ಬಸವಣ್ಣನ ಹಾಗೂ ಲಿಂಗಾಯತ ಧರ್ಮದ, ಧರ್ಮಸಭೆ ನಡೆಸಬೇಕಾದರೆ ಕಾವಿತೊಟ್ಟ ಮಠಾಧೀಶರಿಗೆ ಮಾತ್ರ ಇದೆ. ಹೀಗಾಗಿ ನಾಳೆ ನಡೆಯುವ ಬಸವ ಜಯಂತಿಗೆ ಆಗಮಿಸಿ, ಬೆಂಬಲಿಸುವವರೆಲ್ಲರೂ ರಾಜಕೀಯ ಮುಖಂಡರುಗಳೇ ಆಗಿದ್ದಾರೆ ಎಂದರು.
ಇನ್ನೂ ಜಯಂತ್ಯೋತ್ಸವ ಸಮಿತಿಯು ಬಸವಣ್ಣನವರ ಜಯಂತಿಗೆ ಯಾವುದೇ ಚಂದಾ ಪಡೆಯದೆಯೇ ಜಯಂತಿ ಆಚರಣೆ ಮಾಡಲಾಗುತ್ತದೆ ಎಂದು ಹೇಳಿಲಾಗಿತ್ತು. ಸಮಾಜದ ಸರಕಾರಿ ಅಧಿಕಾರಿಗಳಲ್ಲಿ, ಉದ್ದಿಮೆದಾರರಲ್ಲಿ ಹಣ ಪಡೆದುಕೊಂಡು ಬಸವ ಜಯಂತಿ ಮಾಡುತ್ತಿರುವುದಕ್ಕೆ ಖಂಡಿಸುತ್ತೇವೆ. ಸಮಿತಿ ಅಧ್ಯಕ್ಷರುಗಳು ಕೆವಲ ಒಬ್ಬರ ಕೈಗೊಂಬೆಯಾಗಿ ಉತ್ಸವ ಮೂರ್ತಿಗಳಂತೆ ನಡೆಯುತ್ತಿದ್ದಾರೆ ಎಂದು ವೀರಣ್ಣ ಗಂಗಾಣಿ ರಟಕಲ್, ಉಡುಪಿ ಮಲ್ಲಿಕಾರ್ಜುನ ಅವರು ಆರೋಪಿಸಿದರು. ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ ಉಡುಪಿ, ಸಂಪತ್ತ ಮುಸ್ತರಿ, ರೇವಣಸಿದ್ದ ಮೋಘಾ, ವೀರೇಂದ್ರ ಮುರುಡಾ, ವಿಜಯಕುಮಾರ, ಬಸವರಾಜ ಚೆನ್ನೂರ, ಆಕಾಶ ಕನಕಪೂರ ಅವರು ಉಪಸ್ಥಿತರಿದ್ದರು.