ಎಪಿಎಂಸಿ ಧರಣಿಗೆ ಮುಖಂಡರಿಂದ ಶಕ್ತಿ ತುಂಬಿದ ಬೆಂಬಲ – 14ನೇ ದಿನಕ್ಕೂ ಹೋರಾಟ ಮುಂದುವರೆದಿದೆ:ನರಿಬೋಳ

ಎಪಿಎಂಸಿ ಧರಣಿಗೆ ಮುಖಂಡರಿಂದ ಶಕ್ತಿ ತುಂಬಿದ ಬೆಂಬಲ – 14ನೇ ದಿನಕ್ಕೂ ಹೋರಾಟ ಮುಂದುವರೆದಿದೆ:ನರಿಬೋಳ
ಕಲಬುರಗಿ : ನಗರದ ಎಪಿಎಂಸಿಯಲ್ಲಿನ ಅನಧಿಕೃತ ಅಂಗಡಿಗಳನ್ನು ತೆರವುಗೊಳಿಸಬೇಕು ಹಾಗೂ ನೋಟಿಸ್ ನೀಡಿದರೂ ಯಾವುದೇ ಕ್ರಮ ಕೈಗೊಳ್ಳದೇ ಕೈಕಟ್ಟಿ ಕೂತಿರುವ ಭ್ರಷ್ಟ ಅಧಿಕಾರಿಗಳನ್ನು ಅಮಾನತುಗೊಳಿಸಬೇಕು ಎಂಬ ಆಗ್ರಹದೊಂದಿಗೆ ಎಂ.ಎಸ್. ಪಾಟೀಲ ನರಿಬೋಳ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಅನಿರ್ಧಿಷ್ಠಾವಧಿ ಧರಣಿ 14ನೇ ದಿನಕ್ಕೂ ಮುಂದುವರೆದಿದೆ.
ಇಂದು ನಡೆದ ಸಭೆಯಲ್ಲಿ ವಿವಿಧ ಮುಖಂಡರು ಧರಣಿಗೆ ಬೆಂಬಲ ವ್ಯಕ್ತಪಡಿಸಿ. ಹೋರಾಟ ನ್ಯಾಯಯುತವಾಗಿದೆ ಮತ್ತು ರೈತರಿಗೆ ನೈತಿಕ ಬೆಂಬಲ ನೀಡುವುದಾಗಿ ಅವರು ಹೇಳಿದರು.
ಮಾಜಿ ಎಪಿಎಂಸಿ ಅಧ್ಯಕ್ಷ ಚಂದ್ರಶೇಖರ ಹರಸೂರ ಮಾತನಾಡುತ್ತಾ, "ಕೃಷಿ ಉತ್ಪನ್ನ ಮಾರುಕಟ್ಟೆ ಇದು. ಇಲ್ಲಿ ರೈತರು ಬೆಳೆದ ದಾನ್ಯಗಳ ವ್ಯವಹಾರ ನಡೆಯಬೇಕು. ಆದರೆ ಇಲ್ಲಿ ಕಿರಾಣಿ ಅಂಗಡಿಗಳ ಸಂಖ್ಯೆ ಹೆಚ್ಚಿದ್ದು, ವ್ಯಾಪಾರಿಗಳಿಗೆ ಸ್ಥಳ ಸಿಗದೆ ಒಂದರಲ್ಲೇ ಎರಡು-ಮೂರು ಅಂಗಡಿಗಳನ್ನು ಆರಂಭಿಸಲು ತೊಂದರೆ ಆಗುತ್ತಿದೆ. ಇತ್ತೀಚೆಗಷ್ಟೇ ಮಾರುಕಟ್ಟೆಯಲ್ಲಿ ಗಾಂಜಾ ವಶಪಡಿಸಿಕೊಂಡಿದ್ದಾರೆ.ಇದರಿಂದ ಮಾರುಕಟ್ಟೆಗೆ ಕೆಟ್ಟ ಹೆಸರು ಬಂದಿದೆ.ಕೂಡಲೇ ಅನಧಿಕೃತ ಅಂಗಡಿಗಳನ್ನು ತೆರವುಗೊಳಿಸಿ ಕೃಷಿ ವ್ಯಾಪಾರಿಗಳಿಗೆ ಸ್ಥಳ ನೀಡಬೇಕು," ಎಂದರು.
ಡಿಸಿಸಿ ನಿರ್ದೇಶಕ ಗೌತಮ್ ವೈಜನಾಥ ಪಾಟೀಲ ಅವರು, "ನೋಟಿಸ್ ನೀಡಿ ಒಂದುವರೆ ವರ್ಷ ಕಳೆದರೂ ಕ್ರಮ ಕೈಗೊಳ್ಳದ ಅಧಿಕಾರಿಗಳ ನಿರ್ಲಕ್ಷ್ಯ ಖಂಡನೀಯ. ನಾವು ಕೃಷಿ ಮಾರುಕಟ್ಟೆ ಸಚಿವರ ಬಳಿ ನಿಯೋಗದೊಂದಿಗೆ ತೆರಳಿ, ಸಂಪೂರ್ಣ ಮಾಹಿತಿ ನೀಡಿ ತಕ್ಷಣದ ಕ್ರಮಕ್ಕೆ ಒತ್ತಾಯಿಸಬೇಕಾಗಿದೆ," ಎಂದು ಹೇಳಿದ್ದಾರೆ.
ಬಿಜೆಪಿ ರಾಜ್ಯ ಯುವ ಮುಖಂಡ ಮಕುಂದ ದೇಶಪಾಂಡೆ ಆಕ್ರೋಶ ವ್ಯಕ್ತಪಡಿಸಿ, "14 ದಿನಗಳಿಂದ ಧರಣಿ ನಡೆಯುತ್ತಿದ್ದರೂ ಜಿಲ್ಲಾಡಳಿತ ಈಗಲಾದರೂ ಎಚ್ಚೆತ್ತಿ ಕ್ರಮ ಕೈಗೊಳ್ಳಬೇಕು ಎಂದರು
ಈ ಸಂದರ್ಭದಲ್ಲಿ ಮಾಜಿ ಜಿಪಂ ಸದಸ್ಯ ರಾಜೇಂದ್ರ ಕರೆಕಲ್, ಚಿಂತಕ ಅಶೋಕ ಗೂರುಜಿ, ಹೋರಾಟಗಾರ ರಾಜು ಕುಳಗೇರಿ, ಭಾರತೀಯ ಕಿಸಾನ್ ಮೋರ್ಚಾ ಜಿಲ್ಲಾಧ್ಯಕ್ಷ ಓಂಪ್ರಕಾಶ ಹೆಬ್ಬಾಳ, ಎಂ.ಎಸ್. ಪಾಟೀಲ ನರಿಬೋಳ, ಬವಾನಿ ಚಂದನಕೇರಾ, ದಶರಥ ಹಿಂಗೋಳೆ, ಸೂನಿಲ್ ಸಿರ್ಖೆ ಮತ್ತು ಇತರರು ಉಪಸ್ಥಿತರಿದ್ದರು.