ಸಚಿವ ಪ್ರೀಯಾಂಕ್ ಖರ್ಗೆ ಅವರ ರಾಜ್ಯ ಮಟ್ಟದ ಬೆಳವಣಿಗೆ ಅರಗಿಸಿಕೊಳ್ಳಲು ಬಿಜೆಪಿ ನಾಯಕರಿಗೆ ಆಗುತ್ತಿಲ್ಲ : ದೀಪಕನಾಗ ಪುಣ್ಯಶೆಟ್ಟಿ
ಸಚಿವ ಪ್ರೀಯಾಂಕ್ ಖರ್ಗೆ ಅವರ ರಾಜ್ಯ ಮಟ್ಟದ ಬೆಳವಣಿಗೆ ಅರಗಿಸಿಕೊಳ್ಳಲು ಬಿಜೆಪಿ ನಾಯಕರಿಗೆ ಆಗುತ್ತಿಲ್ಲ : ದೀಪಕನಾಗ ಪುಣ್ಯಶೆಟ್ಟಿ
ಬಿಜೆಪಿಗರ ಹೋರಾಟ ಜನಕಲ್ಯಾಣದ ಅಭಿವೃದ್ಧಿಗೆ ಅಲ್ಲ. ವಿಷ ಬೀಜ ಬಿತ್ತುವುದಕ್ಕೆ
ಚಿಂಚೋಳಿ : ರಾಜ್ಯದ ಬಿಜೆಪಿ ನಾಯಕರು ಕಲಬುರಗಿ ಜಿಲ್ಲೆಯ ಜನರ ಕಲ್ಯಾಣಕ್ಕಾಗ ಮತ್ತು ಅಭಿವೃದ್ಧಿಗಾಗಿ ಹೋರಾಟ ನಡೆಸಿಲ್ಲ. ಕೇವಲ ಪ್ರೀಯಾಂಕ್ ಖರ್ಗೆ ಅವರನ್ನು ನಿಂದನೆ ಮಾಡುವುದಕ್ಕೆ ಮಾತ್ರ ಕಲಬುರಗಿಗೆ ಪದೇ ಪದೇ ಬಂದು ಹೋರಾಟದ ಮೂಲಕ ಸಚಿವರಿಗೆ ನಿಂದನೆ ಮಾಡಲಾಗುತ್ತಿದೆ ಎಂದು ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ದೀಪಕನಾಗ್ ಪುನ್ಯಶೆಟ್ಟಿ ಅವರು ಆರೋಪಿಸಿದರು.
ಅವರು ಐನೋಳಿ ಗ್ರಾಮದ ಸ್ವ-ಗೃಹದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿ ನಾಯಕರು ಜಿಲ್ಲೆಯ ಅಭಿವೃದ್ಧಿಗೆ ಪ್ರಶ್ನಿಸಿ ಹೋರಾಟ ನಡಸದೇ, ದೇಶದ ಅಭಿವೃದ್ಧಿಗೆ ಬಗ್ಗೆ ಪ್ರಧಾನಿ ಅವರನ್ನು ಪ್ರೇಶ್ನಿಸಿದಕ್ಕೆ ಸಚಿವ ಪ್ರೀಯಾಂಕ್ ಖರ್ಗೆ ಅವರನ್ನು ಗುರಿಯಾಗಿಸಿಕೊಂಡು ನಿಂದಿಸಲು ಹೋರಾಟ ನಡೆಸುತ್ತಿದ್ದಾರೆ. ಪ್ರೀಯಾಂಕ್ ಖರ್ಗೆ ಅವರು ದಲಿತ ನಾಯಕರಾಗಿ ಬೆಳೆಯುತ್ತಿರುವುದು ಬಿಜೆಪಿಯವರಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಖರ್ಗೆ ಅವರು ರಾಜ್ಯ ಮಟ್ಟದ ನಾಯಕರಾಗಿ ಮುಖ್ಯಮಂತ್ರಿ ಆಗುವ ಬೆಳವಣಿಗೆ ಸಹಿಸದೇ ಕಪ್ಪುಚುಕ್ಕೆ ಹಚ್ಚಲು ಹೋರಾಟ ನಡೆಸಲಾಗುತ್ತಿದೆ ವಿನಃ ಜನಕಲ್ಯಾಣಕ್ಕಾಗಿ ಪ್ರಶ್ನಿಸಿ ಹೋರಾಟ ನಡೆಸುತ್ತಿಲ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಚರ್ಚಿಸಲು ಪ್ರೀಯಾಂಕ್ ಖರ್ಗೆ ಅವರು . ಬಿಜೆಪಿ ನಾಯಕರಿಗೆ ಬಹಿರಂಗವಾಗಿ ಆಹ್ವಾನ ನೀಡದರು. ಆದರೆ ಬಿಜೆಪಿಯವರು ಅಭಿವೃದ್ಧಿ ಚರ್ಚೆಗೆ ಬರದೇ ಜಾತಿ-ಜಾತಿಗಳ ಮಧ್ಯ, ಕೋಮು-ಕೋಮುಗಳ ಮಧ್ಯೆ ವಿಷ ಬೀಜ ಬೀತ್ತುವ ಕೆಲಸ ಬಿಜೆಪಿ ನಾಯಕರು ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಅಲ್ಲದೆ ಬಿಜೆಪಿಯವರಿಗೆ ಜನಕಲ್ಯಾಣವಾಗುವ ಅಭಿವೃದ್ಧಿ ಬೇಕಾಗಿಲ್ಲ ಎಂದರು.
ಕೇಂದ್ರ ಸರಕಾರದ ಶಿಫಾರಸ್ಸಿನ ಮೇಲೆ ಉತ್ತಮ ಆಡಳಿತ ನೀಡಿದ ಕಾರಣಕ್ಕೆ ರಾಷ್ಟ್ರಪತಿಯವರಿಂದ ಪ್ರಶಸ್ತಿ ಪಡೆದುಕೊಂಡಿರುವ ಕಲಬುರಗಿ ಜಿಲ್ಲಾಧಿಕಾರಿ ಫೌಜಿಯಾ ತರನ್ನುಂ ಅವರು ಮುಸ್ಲಿಂ ಜನಾಂದವರು ಆಗಿದ್ದ ಕಾರಣಕ್ಕಾಗಿ ರಾಜ್ಯದ ಬಿಜೆಪಿ ನಾಯಕರು ಅವರನ್ನು ಪಾಕಿಸ್ತಾನಿ ಇದ್ದೀರಬಹುದು ಎಂದು ಪೌರತ್ವದ ಮೇಲೆ ಶಂಕೆಯನ್ನು ವ್ಯಕ್ತಪಡಿಸಿರುವ ಎನ್. ರವಿಕುಮಾರ ಅವರಿಗೆ ಪಕ್ಷದಿಂದ ಉಚ್ಚಾಟಿಸಬೇಕೆಂದು ಕೇಂದ್ರ ಬಿಜೆಪಿ ನಾಯಕರಿಗೆ ಆಗ್ರಹಿಸಿದರಲ್ಲದೇ ಆಪ್ರರೇಷನ್ ಸಿಂಧೂರ ಕಾರ್ಯಚರಣೆಯ ಮುಂದಾಳತ್ವ ವಹಿಸಿ ಪಾಕಿಸ್ತಾನ ಉಗ್ರರನ್ನು ಸದೇಬಡಿದಿರುವ ಕರ್ನಾಟಕ ಸೊಸೆ ಸೌಫೀಯಾ ಖುರೇಶಿ ಅವರನ್ನು ಪಾಕಿಸ್ತಾನಿ ಏಜೆಂಟ್ ಎಂದು ಕರೆದಿರುವುದು ಖಂಡಿನೀಯ. ಇಂತಹ ಬಿಜೆಪಿ ನಾಯಕರು ದೇಶದ ಅಭಿವೃದ್ಧಿಗೆ ಮಾರಕವಾಗಿದ್ದಾರೆ . ದೇಶದ ಸಮಸ್ಯೆಗಳಿಗೆ ಎದುರಿಸುವ ಸಾಮರ್ಥ್ಯವನ್ನು ಪ್ರಾಧಾನಿ ಅವರು ಕಳೆದುಕೊಂಡಿದ್ದಾರೆ ಎಂದರು.
ಕೆಕೆಆರ್ ಡಿಬಿ ಅನುದಾನ ಬಳಕೆ ಆಗಿರುವುದರ ಬಗ್ಗೆ ಶಾಸಕ ಡಾ. ಅವಿನಾಶ ಜಾಧವ್ ಅವರು ಜನತೆಗೆ ಬಹಿರಂಗ ಪಡಿಸಲು ಒತ್ತಾಯ :
ಜಿಲ್ಲಾ ಉಸ್ತುವಾರಿ ಸಚಿವ ಪ್ರೀಯಾಂಕ್ ಖರ್ಗೆ ಅವರು ಜಿಲ್ಲೆಯಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ನಡೆಸುತ್ತಿಲ್ಲ. ಪ್ರಗತಿ ಸಭೆ ಕರೆದಿಲ್ಲ ಎಂದು ಆರೋಪಿಸಿರುವ ಕ್ಷೇತ್ರದ ಶಾಸಕ ಡಾ. ಅವಿನಾಶ ಜಾಧವ್ ಅವರು. ಕಳೆದ ಎರಡು ವರ್ಷದಿಂದ ಕೆಕೆಆರ್ ಡಿಬಿ ವತಿಯಿಂದ ಕ್ಷೇತ್ರದ ಅಭಿವೃದ್ಧಿಗೆ ಬಂದ ಹಣ ಎಲ್ಲಿಗೆ ಹೋಗುತ್ತಿದೆ ಎಂದು ಜನತೆಗೆ ಬಹಿರಂಗ ಪಡಿಸಬೇಕು. ಕ್ಷೇತ್ರದಲ್ಲಿ ಕೆಕೆಆರ್ ಡಿಬಿ ಅನುದಾನದಿಂದ ಇಲಾಖೆವಾರು ನಡೆಯುತ್ತಿರುವ ಕಾಮಗಾರಿಗಳು ಕಳಪೆ ಮಟ್ಟದಲ್ಲಿ ನಿರ್ಮಾಣಗೊಳುತ್ತಿವೆ. ಇದರ ಬಗ್ಗೆ ಸಂಪೂರ್ಣ ಮಾಹಿತಿ ಕ್ಷೇತ್ರದ ಜನತೆಗೆ ಬಹಿರಂಗ ಪಡಿಸಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಅಲ್ಲಾವೂದ್ದೀನ್ ಅನ್ಸಾರಿ, ಇಬ್ರಾಹಿಂ ಸಾಬ್ ದೇಗಲ್ಮಡಿ, ರಾಜಕುಮಾರ, ಚಂದ್ರಕಾಂತ, ಶರಣು ಪಪ್ಪಾ, ಶಿವಕುಮಾರ, ಮೂಲಗಿ, ಆಶೀಫ್, ಖಾಜಾ ಪಟೇಲ್, ನಂದುಕುಮಾರ ಅವಂಟಗಿ ಅವರು ಉಪಸ್ಥಿತರಿದರು.