ಇಂದು ಮಲ್ಲಿಕಾರ್ಜುನ ಖರ್ಗೆ 85ನೇ ಜನ್ಮದಿನಾಚರಣೆ: 15 ಸಾಧಕರಿಗೆ ‘ಕುಶಾಗ್ರಮತಿ ಖರ್ಗೆ’ ಪ್ರಶಸ್ತಿ ಪ್ರದಾನ

ಇಂದು ಮಲ್ಲಿಕಾರ್ಜುನ ಖರ್ಗೆ 85ನೇ ಜನ್ಮದಿನಾಚರಣೆ: 15 ಸಾಧಕರಿಗೆ ‘ಕುಶಾಗ್ರಮತಿ ಖರ್ಗೆ’ ಪ್ರಶಸ್ತಿ ಪ್ರದಾನ

 ಇಂದು ಮಲ್ಲಿಕಾರ್ಜುನ ಖರ್ಗೆ 85ನೇ ಜನ್ಮದಿನಾಚರಣೆ: 15 ಸಾಧಕರಿಗೆ ‘ಕುಶಾಗ್ರಮತಿ ಖರ್ಗೆ’ ಪ್ರಶಸ್ತಿ ಪ್ರದಾನ

ಕಲಬುರಗಿ, ಜು. 21: ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಹಾಗೂ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರ 85ನೇ ಜನ್ಮದಿನಾಚರಣೆಯು ಮಲ್ಲಿಕಾರ್ಜುನ ಖರ್ಗೆ ಅಭಿಮಾನಿಗಳ ಸಂಘ ವತಿಯಿಂದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 15 ಸಾಧಕರಿಗೆ ‘ಕುಶಾಗ್ರಮತಿ ಖರ್ಗೆ’ ಪ್ರಶಸ್ತಿ ಪ್ರದಾನ ಮಾಡುವ ಸಮಾರಂಭವನ್ನು ಇಂದು (ಮಂಗಳವಾರ) ಆಯೋಜಿಸಲಾಗಿದೆ.

ನಗರದ ಸೂಪರ್ ಮಾರ್ಕೆಟ್‌ನ ಕೆಕೆಸಿಸಿಐ ಶ್ರೀನಿವಾಸರಾವ ರಥೋಜಿ ಸಭಾಂಗಣದಲ್ಲಿ ಮಧ್ಯಾಹ್ನ 12.30 ಗಂಟೆಗೆ ನಡೆಯಲಿರುವ ಸಮಾರಂಭವನ್ನು ಮುಗಳನಾಗಾವಿಯ ಅಭಿನವ ಸಿದ್ದಲಿಂಗ ಶಿವಾಚಾರ್ಯರು ಉದ್ಘಾಟಿಸಲಿದ್ದಾರೆ.

ಶ್ರೀಶರಣಬಸವೇಶ್ವರ ಸಂಸ್ಥಾನದ 9ನೇ ಪೀಠಾಧಿಪತಿ ಪೂಜ್ಯ ದೊಡ್ಡಪ್ಪ ಅಪ್ಪಾ ಹಾಗೂ ಪೂಜ್ಯ ಹವಾ ಮಲ್ಲಿನಾಥ ಮಹಾರಾಜರು ಸಾನಿಧ್ಯ ವಹಿಸಲಿದ್ದಾರೆ. ಗುಲ್ಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶಶಿಕಾಂತ ಎಸ್. ಉಡಿಕೇರಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದು, ಬಸವರಾಜ ದೇಶಮುಖ, ಕೆಕೆಸಿಸಿಐ ಅಧ್ಯಕ್ಷ ಶರಣಬಸಪ್ಪ ಪಪ್ಪಾ, ಮನೀಷ ಪತ್ರಿಕೆಯ ಸಂಪಾದಕ ರಾಜು ದೇಶಮುಖ ಹಾಗೂ ಉದ್ಯಮಿ ಲಕ್ಷ್ಮೀನಾರಾಯಣ ಮನೋಕರ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

 ಉಮಾಕಾಂತ ನಿಗ್ಗುಡಗಿ, ಡಾ. ಶಿವಪುತ್ರಪ್ಪ ಹರವಾಳ, ಪ್ರಭಾಕರ ಜೋಶಿ, ಪ್ರೊ. ಎಚ್.ಟಿ. ಪೋತೆ, ರಾಘವೇಂದ್ರ ಮೈಲಾಪುರ, ಲಕ್ಷ್ಮಣ ದಸ್ತಿ, ಶಕೀಲ ಅಹ್ಮದ್ ಅಂಗಡಿ, ಅರುಣಕುಮಾರ ಕದಂ, ಹಟ್ಟಿ ನಜೀರ್ ಮಿಯಾನ್, ಡಾ. ಲಕ್ಷ್ಮೀ ಪಾಟೀಲ ಮಾಕಾ, ವೈಷ್ಣವಿ ಎಸ್. ಅಹಂಕಾರಿ, ಸರೇಖಾ ಹೊನಗುಂಟಾ, ಸೋಮಶೇಖರ ಬಣಗಾರ ಸೊನ್ನ, ದಯಾನಂದ ಮನೋಕರ್ ಹಾಗೂ ಶಿವು ಹಳ್ಳಿಖೇಡ ಅವರಿಗೆ ‘ಕುಶಾಗ್ರಮತಿ ಖರ್ಗೆ’ ಪ್ರಶಸ್ತಿ ನೀಡಿ ಗೌರವಿಸಲಾಗುವುದು.

ಪ್ರತಿ ವರ್ಷ ಮಲ್ಲಿಕಾರ್ಜುನ ಖರ್ಗೆ ಅವರ ಜನ್ಮದಿನದ ಅಂಗವಾಗಿ ವಿವಿಧ ಕ್ಷೇತ್ರಗಳ ಸಾಧಕರನ್ನು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸುವುದು ಸಂಘ ಮುಂದುವರಿಸಿಕೊಂಡು ಬಂದಿದ್ದು, ಈ ಬಾರಿಯೂ ಅರ್ಥಪೂರ್ಣವಾಗಿ ಜನ್ಮದಿನಾಚರಣೆಯನ್ನು ಆಚರಿಸಲು ಎಲ್ಲ ಸಿದ್ಧತೆಗಳನ್ನು ಮಾಡಲಾಗಿದೆ ಎಂದು ಮಲ್ಲಿಕಾರ್ಜುನ ಖರ್ಗೆ ಅಭಿಮಾನಿಗಳ ಸಂಘದ ಅಧ್ಯಕ್ಷ ಶಾಂತರೆಡ್ಡಿ ಪೇಠಶೀರೂರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.