ಮರತೂರ ಗ್ರಾ. ಪಂ ಉಪ ಚುನಾವಣೆ : ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಗೆಲವು

ಮರತೂರ ಗ್ರಾ. ಪಂ ಉಪ ಚುನಾವಣೆ :
ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಗೆಲವು
ಶಹಾಬಾದ : - ತಾಲೂಕಿನ ಮರತೂರ ಗ್ರಾ. ಪಂ ಗೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಭರ್ಜರಿ ಗೆಲವು ಸಾಧಿಸಿದರೆ, ಓರ್ವ ಅಭ್ಯರ್ಥಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಗ್ರಾಮದ ವಾರ್ಡ 2ರ ಅಭ್ಯರ್ಥಿ ಮಹಾದೇವಿ ಮೃತಪಟ್ಟಿದ್ದರಿಂದ ತೆರವಾದ ಸ್ಥಾನಕ್ಕೆ ಮೇ.25 ರಂದು ಚುನಾವಣೆ ನಡೆಸಲಾಗಿತ್ತು, ಕಣದಲ್ಲಿ ಕಾಂಗ್ರೇಸ್ ಬೆಂಬಲಿತ ಅಭ್ಯರ್ಥಿ ಕಸ್ತೂರಿಬಾಯಿ ಶರಣಪ್ಪ, ಇವರ ಪ್ರತಿಸ್ಪರ್ಧಿ ಇನ್ನೊರ್ವ ಕಾಂಗ್ರೆಸ್ ಬೆಂಬಲಿತ ಸುಭದ್ರಾಬಾಯಿ, ಚಂದ್ರಕಲಾ, ಅಂಬಿಕಾ ಅವರು ಕಣದಲ್ಲಿದ್ದರು.
ಬುಧವಾರ ತಹಶೀಲ್ದಾರ ಕಚೇರಿಯಲ್ಲಿ ನಡೆದ ಎಣಿಕೆಯಲ್ಲಿ ಕಸ್ತೂರಿಬಾಯಿ (270) ಗಳನ್ನು ಪಡೆದು, ಪ್ರತಿಸ್ಪರ್ಧಿ ಇನ್ನೋರ್ವ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಸುಭದ್ರಾಬಾಯಿ (113) ಮತಗಳನ್ನು ಪಡೆದರು, ಕಾಂಗ್ರೆಸ್ ಮುಖಂಡ ಜಿಪಂ.ಮಾಜಿ ಸದಸ್ಯ ಶಿವಾನಂದ ಪಾಟೀಲ ಅವರ ಬೆಂಲದಿಂದ ಕಸ್ತೂರಿಬಾಯಿ 157 ಮತಗಳ ಅಂತರದಿಂದ ಭರ್ಜರಿ ಗೆಲವು ಸಾಧಿಸಿದರು.
ಕಣದಲ್ಲಿದ್ದ ಚಂದ್ರಕಲಾ (18), ಅಂಬಿಕಾ ರಮೇಶ (7) ಮತಗಳನ್ನು ಪಡೆದರೆ, 12 ಮತಗಳು ತಿರಸ್ಕತಗೊಂಡವು, ಮರತೂರ ಗ್ರಾಪಂ.ವ್ಯಾಪ್ತಿಯ ದೇವನತೆಗನೂರ ಗ್ರಾಮದ ವಾರ್ಡ 6 ರಲ್ಲಿ ಸಂಜುಬಾಯಿ ನಿಧನರಾಗಿದ್ದರಿಂದ ತೆರವಾದ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಸುನೀತಾ ಸುಬೇದಾರ ಅವಿರೋಧವಾಗಿ ಆಯ್ಕೆಯಾಗಿದ್ದರು.
ಚುನಾವಣೆ ಅಧಿಕಾರಿಗಳಾದ ಶಶಿಕಾಂತ ನಾಡಗೇರ, ಸಹಾಯಕ ಚುನಾವಣಾಧಿಕಾರಿ ಭಗವಂತರಾಯ, ಶಿರಸ್ತೇದಾರ ರಾಜೇಶ ದೇವಣಿ, ಎಣಿಕೆ ಮೇಲ್ವಿಚಾರಕ ಉದಯಕುಮಾರ ಇಂಗಳೆ, ಚುನಾವಣೆ ವಿಷಯ ನಿರೂಪಕ ಗಂಗಾಧರ ವಾಗ್ಮೋರೆ ಚುನಾವಣೆ ಪ್ರಕ್ರಿಯೆ ನಡೆಸಿಕೊಟ್ಟರು.
ವಿಜಯೋತ್ಸವ : ಮತ ಎಣಿಕೆಯ ನಂತರ ಶಿವಾನಂದ ಪಾಟೀಲ ಬೆಂಬಲಿಗರು ವಿಜಯೋತ್ಸವ ಆಚರಿಸಿದರು,
ಈ ಸಂದರ್ಭದಲ್ಲಿ ಬ್ಲಾಕ್ ಅಧ್ಯಕ್ಷ ಡಾ.ಎಂ.ಎ.ರಶೀದ, ಅಜೀತಕುಮಾರ ಪೊಲೀಸ್ ಪಾಟೀಲ, ಗ್ರಾ.ಪಂ ಉಪಾಧ್ಯಕ್ಷ ಮರೇಪ್ಪ ಬಣಮಿಕರ, ರವೀಂದ್ರ ನರೋಣಿ, ಶೌಕತ ಅಲಿ, ಶ್ಯಾಮರಾಯಗೌಡ ಮಾಲಿ ಪಾಟೀಲ, ಸಿದ್ರಾಮಪ್ಪ ಮಾಲಿ ಪಾಟೀಲ, ಗುರುನಾಥ ಕಂಬಾ, ಸಂಜೀವ ಗರ, ಫಜಲ್ ಪಟೇಲ್ ಇದ್ದರು.