ರೈತ ಕೃಷಿ ವಿಜ್ಞಾನಿ” ಪ್ರಶಸ್ತಿಗೆ ಭಾಜನರಾದ ಬಬಲಾದ ಶ್ರೀಗಳಿಗೆ ತುಲಾಭಾರ

ರೈತ ಕೃಷಿ ವಿಜ್ಞಾನಿ” ಪ್ರಶಸ್ತಿಗೆ ಭಾಜನರಾದ ಬಬಲಾದ ಶ್ರೀಗಳಿಗೆ ತುಲಾಭಾರ

“ರೈತ ಕೃಷಿ ವಿಜ್ಞಾನಿ” ಪ್ರಶಸ್ತಿಗೆ ಭಾಜನರಾದ ಬಬಲಾದ ಶ್ರೀಗಳಿಗೆ ತುಲಾಭಾರ

ಅರವತ್ತೇಳು ಎಕರೆ ಭೂಮಿ ಬಹಿರಂಗದ ಶ್ರೀಗಳ ಕೃಷಿ ಸಾಧನೆಯಿಂದ ಬರೀ ಕಲ್ಲಾಗಿದ್ದ ನಲವತ್ತೊಂದು ಎಕರೆ ಭೂಕೃಷಿ ಶ್ರೀಗಳ ಪರಿಶ್ರಮದ ಹಸ್ತ ಸ್ಪರ್ಷದಿಂದ ದಾಳಿಂಬೆ, ಪಪ್ಪಾಯಿ, ಕಲ್ಲಂಗಡಿಯಂತಹ ಹಣ್ಣುಗಳು ಜೊತೆಗೆ ಅರಳಿದ ಚಂಡು ಹೂವುಗಳನ್ನು ಬೆಳೆದು ದಸರಾ, ದೀಪಾವಳಿ ಹಬ್ಬಗಳಲ್ಲಿ ರೈತರೆಲ್ಲಾ ಬೆರಗಾಗುವಂತೆ ಮಾಡಿದ ಸಾಧನೆ.

ಅಷ್ಟೇ ಅಲ್ಲ ಶ್ರೀಗಳು ನಿರ್ಮಿಸಿದ ದೊಡ್ಡ ಕಲ್ಲುಗಳ ಬಧು, ಸಾಗವಾನಿ, ಚೌಕುಮಡಿ, ಚೆಕ್‌ಡ್ಯಾಂ, ಕೃಷಿಹೊಂಡಾ, ದೇಶಿ ಹೈನುಗಾರಿಕೆ, ತಳಿಗಳ ಸಂರಕ್ಷಣೆ, ಕಾಂಪೋಸ್ಟ ಉತ್ಪಾದನೆ ಸೌರಶಕ್ತಿ ಬೇಲಿ, ವೈಜ್ಞಾನಿಕ ಕೃಷಿ ಸಾಧನೆ ಎಂಬ ಹೆಗ್ಗಳಿಕೆಗೆ ಹರ್ಷಪಡುವ ಶ್ರೀಗಳ ಲಕ್ಷಾಂತರ ಭಕ್ತರಲ್ಲಿ ಒಬ್ಬರಾದ ಶ್ರೀಮತಿ ಲಲಿತಾ ಕಮಲಾಕರ ಸಂಗೋಳಗಿ ಅವರ ಆಶಯದಂತೆ ಶ್ರೀಗಳ ತುಲಾಭಾರ ಕಾರ್ಯಕ್ರಮದ ಸಂಚಾಲಕತ್ವ ವಹಿಸಿದ ವಿದ್ಯಾನಗರ ವೆಲ್‌ಫೇರ ಸೊಸೈಟಿ ಕಾರ್ಯದರ್ಶಿ ಶಿವರಾಜ ಅಂಡಗಿ ಶ್ರೀಗಳ ಕೃಸಿ ಸಾಧನೆ ಕುರಿತು ಮಾತನಾಡುತ್ತ ಕಾರ್ಯಕ್ರಮ ನಿರುಪಿಸಿದರು.

ಇತ್ತಿಚೆಗೆ ಜೈ ಭವಾನಿ ಕನ್ವೆಷ್ನಲ್ ಹಾಲನಲ್ಲಿ ನಡೆದ ಕಮಲಾಕರ ಸಂಗೋಳಗಿ ಮಗನಾದ ಶ್ರೀವಸ್ತ ಜೊತೆ ಮಾನ್ವಿ (ಸಂಧ್ಯಾರಾಣಿ) ಅವರ ಮಧುವೆ ಸಮಾರಂಭದಲ್ಲಿ ಇತ್ತಿಚೆಗೆ ರಾಯಚೂರ ಕೃಷಿ ವಿಶ್ವವಿದ್ಯಾಲಯದಿಂದ “ರೈತ ಕೃಷಿ ವಿಜ್ಞಾನಿ” ಪ್ರಶಸ್ತಿ ಭಾಜನರಾದ ಬಬಲಾದ ಪೂಜ್ಯಶ್ರೀ ಗುರುಪಾದಲಿಂಗ ಮಹಾಸ್ವಾಮಿಗಳಿಗೆ ತುಲಾಭಾರ ಮಾಡಿದ ನಂತರ ಅಕ್ಷತಾರೋಹಣ ನೆರವೇರಿತು.

ಕಾರ್ಯಕ್ರಮದಲ್ಲಿ ರೇಷ್ಮಾ ನಾಗಭೂಷಣ ಮಾಲಿ ಪಾಟೀಲ, ಶಶಿಕಲಾ ಶಂಕರ ಸಂಗೋಳಗಿ, ಸವಿತಾ ವೀರಶೆಟ್ಟಿ ಸಂಗೋಳಗಿ, ಸುನಂದಾ ಶರಣ ಪಡಶೆಟ್ಟಿ, ಕಸ್ತೂರಿ ಶಿವಶಂಕರ ಚೆಟ್ಟಿ, ಜಯಶೀಲಾ ಅಂತಪ್ಪಾ ಮಾಲಿ ಪಾಟೀಲ, ಮಲ್ಲಮ್ಮ ಧೂಳಪ್ಪ ಭದ್ರಶೆಟ್ಟಿ, ಮಡೆಮ್ಮಾ ಸೋಮನಾಥ ಕೋರಿ, ಜಗದೇವಿ ಅಶೋಕ ಕೋಡ್ಲಿ, ಸುಗುಣಾ ಶರಣು ಪಾಟೀಲ, ಕಾಶಿ ಮೃತ್ಯುಂಜಯ ಆಸಪ್ಲಿ, ಶಿವಾನಿ ಆಕಾಶ ಭದ್ರಶೆಟ್ಟಿ, ಮಲ್ಲಿನಾಥ ದೇಶಮುಖ, ರೇಖಾ ಅಂಡಗಿ ಹಾಗು ಇತರರು ಉಪಸ್ಥಿತರಿದ್ದರು.