ಅಂತರಂಗ ರಣರಂಗವಾಗದಿರಲಿ - ಹಾರಕೂಡ ಶ್ರೀ

ಅಂತರಂಗ ರಣರಂಗವಾಗದಿರಲಿ - ಹಾರಕೂಡ ಶ್ರೀ
ಆಂತರ್ಯ ಹದವಾದಷ್ಟು ಜೀವನ ಮುದುಗೊಳ್ಳುತ್ತದೆ ಹಾಗಾಗಿ ಯಾವತ್ತೂ ಅಂತರಂಗ ರಣರಂಗವಾಗದಂತೆ ಎಚ್ಚರ ವಹಿಸಬೇಕು ಎಂದು ಹಾರಕೂಡದ ಡಾ. ಚನ್ನವೀರ ಶಿವಾಚಾರ್ಯರು ನುಡಿದರು.
ತಾಲೂಕಿನ ಹಾರಕೂಡ ಶ್ರೀಮಠದಲ್ಲಿ ಹಾರಕೂಡ ಗ್ರಾಮದ ಶೀಲವಂತ ಪರಿವಾರದಿಂದ ಆಯೋಜಿಸಿದ ಗುರು ವಂದನೆ ಹಾಗೂ 819ನೇ ತುಲಾಭಾರ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದ ಶ್ರೀಗಳು ಮನಸ್ಸಿನ ಸುದ್ದಿಕರಣಕ್ಕಾಗಿ ಸತ್ಸಂಗ, ಸದ್ವಿಚಾರ, ಸದಾಚಾರಗಳನ್ನು ರೂಢಿಸಿಕೊಂಡಾಗ ಬದುಕು ಸರಳವಾಗುತ್ತದೆ.
ಆಲೋಚನೆಗಳು ಉನ್ನತೀಕರಣಗೊಂಡಾಗ ಸಾತ್ವಿಕ ವೈಭವ ಅನುಭವಿಸಲು ಸಾಧ್ಯವಾಗುತ್ತದೆ.
ಗುರು ಸೇವೆಯಿಂದ ಮೌಲ್ಯಾಧರಿತ ಬದುಕು ಸಾಧ್ಯವಾಗುತ್ತದೆ.
ಹಾರಕೂಡ ಗ್ರಾಮದ ಶೀಲವಂತ ಪರಿವಾರದಿಂದ ಆಯೋಜಿಸಿದ ಗುರುವಂದನೆ ಹಾಗೂ ತುಲಾಭಾರ ಸೇವೆಯಿಂದ ಲಿಂ. ಚನ್ನಬಸವ ಶಿವಯೋಗಿಗಳು ಯಾವತ್ತೂ ಆ ಪರಿವಾರಕ್ಕೆ ಶ್ರೀರಕ್ಷೆ ನೀಡಲಿ, ಸರ್ವರಿಗೂ ಸನ್ಮಂಗಳವಾಗಲಿ ಎಂದು ಶುಭ ಹಾರೈಸಿದರು.
ಕಾರ್ತಿಕ ಸ್ವಾಮಿ ಯಲದಗುಂಡಿ ಪ್ರಾರ್ಥನಾ ಗೀತೆ ಹಾಡಿದರು.
ಕಲ್ಯಾಣಿ ಶೀಲವಂತ ಸಂಗೀತ ಸೇವೆ ಸಲ್ಲಿಸಿದರು.
ಅಂಬರಾಯ ಉಗಾದಿ ಸ್ವಾಗತಿಸಿ, ನಿರೂಪಣೆ ಮಾಡಿದರು.
ಚನ್ನಪ್ಪ ಶೀಲವಂತ ವಂದಿಸಿದರು.
ಬಿ. ಕೆ. ಹಿರೇಮಠ, ಮಲ್ಲಿನಾಥ ಹಿರೇಮಠ ಹಾರಕೂಡ, ಮೇಘರಾಜ ನಾಗರಾಳೆ, ಸಿದ್ರಾಮಪ್ಪ ಗುದಗೆ, ವೀರಣ್ಣ ಶೀಲವಂತ, ವಿಜಯಕುಮಾರ ಸಂಗೋಳಗೆ, ಪಂಡಿತರಾವ ದೇಗಾಂವ, ಚನ್ನಪ್ಪ ದಾಮಾ ಮುಂತಾದವರು ಭಾಗವಹಿಸಿದ್ದರು.
ಚಿತ್ರ : ತಾಲೂಕಿನ ಹಾರಕೂಡ ಶ್ರೀಮಠದಲ್ಲಿ ಹಾರಕೂಡ ಗ್ರಾಮದ ಶೀಲವಂತ ಪರಿವಾರದಿಂದ ಆಯೋಜಿಸಿದ ಗುರು ವಂದನೆ ಹಾಗೂ 819ನೇ ತುಲಾಭಾರ ಸಮಾರಂಭವನ್ನು ಹಾರಕೂಡದ ಪೂಜ್ಯಶ್ರೀ ಡಾ. ಚನ್ನವೀರ ಶಿವಾಚಾರ್ಯರು ದೀಪ ಬೆಳಗಿಸಿ ಉದ್ಘಾಟಿಸಿದರು.
ಬಿ. ಕೆ. ಹಿರೇಮಠ, ಮಲ್ಲಿನಾಥ ಹಿರೇಮಠ ಹಾರಕೂಡ, ಮೇಘರಾಜ ನಾಗರಾಳೆ, ಸಿದ್ರಾಮಪ್ಪ ಗುದಗೆ, ವೀರಣ್ಣ ಶೀಲವಂತ, ವಿಜಯಕುಮಾರ ಸಂಗೋಳಗೆ, ಪಂಡಿತರಾವ ದೇಗಾಂವ, ಚನ್ನಪ್ಪ ದಾಮಾ, ಶಿವಪುತ್ರ ಶೀಲವಂತ, ಚನ್ನಪ್ಪ ಶೀಲವಂತ ಮುಂತಾದವರು ಉಪಸ್ಥಿತರಿದ್ದರು.