ಡಾ.ವೀರನಾಥ ರನ್ನು ಮರು ನೇಮಿಸುವಂತೆ ಒತ್ತಾಯಿಸಿ ಮೇ.29 ರಂದು ಪ್ರತಿಭಟನೆ :..

ಡಾ.ವೀರನಾಥ ರನ್ನು ಮರು ನೇಮಿಸುವಂತೆ ಒತ್ತಾಯಿಸಿ ಮೇ.29 ರಂದು ಪ್ರತಿಭಟನೆ :..
ಶಹಾಬಾದ : -ಅಧಿಕಾರ ಸ್ವೀಕರಿಸಿ ಕೇವಲ 6 ತಿಂಗಳಲ್ಲಿ ನಗರದ ಸಮುದಾಯ ಆರೋಗ್ಯ ಕೇಂದ್ರ ಅಬಿವೃದ್ಧಿ ಪಡಿಸಿ, ರೋಗಿಗಳಿಗೆ ಮತ್ತು ಸಾರ್ವಜನಿಕರಿಗೆ ಕುಡಿಯುವ ನೀರು, ಔಷಧ ಮತ್ತು ಒಳ್ಳೆಯ ಸಿಬ್ಬಂದಿ ಅನುಕೂಲ ಮಾಡಿ, ಒಳ್ಳೆಯ ಚಿಕಿತ್ಸೆ, ಮಹಿಳಿಯರ ಹೆರಿಗೆ ಹಾಗೂ ಶಸ್ತ್ರ ಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಿ ಬಡವರ ಆರೋಗ್ಯ ಕಾಪಾಡಿದ ಜನಾನುರಾಗಿ ಡಾ.ವೀರನಾಥ ರವರನ್ನು ಹಿರಿಯ ವೈದ್ಯಾಧಿಕಾರಿ ಸ್ಥಾನದಿಂದ ತೆರೆವು ಗೊಳಿಸಿದ್ದನ್ನು ಖಂಡಿಸಿ ಮತ್ತು ಮರು ನೇಮಿಸುವಂತೆ ಒತ್ತಾಯಿಸಿ ಮೇ.29 ರಂದು ಬೆಳಗ್ಗೆ 10 ಗಂಟೆಗೆ ವಿಕಲಚೇತನರ ಕ್ಷೇಮಾಬಿವೃದ್ದಿ ಸಂಘದ ವತಿಯಿಂದ ಸಮುದಾಯ ಆರೋಗ್ಯ ಕೇಂದ್ರದ ಎದುರು ಪ್ರತಿಭಟನೆ ಮಾಡಲಾಗುವುದು ಮತ್ತು ಈ ಪ್ರತಿಭಟನೆಗೆ ಸೂಕ್ತ ಪೋಲಿಸ್ ಬಂದೋಬಸ್ತ ನೀಡಬೇಕು ಎಂದು ನಗರ ಪೋಲಿಸ್ ಠಾಣೆಯ ಪಿಐ ನಟರಾಜ ಲಾಡೆ ಯವರಿಗೆ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಅಂಗವಿಕಲರ ಸಂಘದ ಜಿಲ್ಲಾಧ್ಯಕ್ಷ ಮಲ್ಲೇಶಿ ಭಜಂತ್ರಿ, ತಾಲ್ಲೂಕ ಅಧ್ಯಕ್ಷ ಚಂದ್ರಕಾಂತ ಪಾಟೀಲ, ಕರವೇ ಅಧ್ಯಕ್ಷರಾದ ಯಲ್ಲಾಲಿಂಗ ಹೈಯಾಳಕರ ಮತ್ತು ವಿಶ್ವರಾಜ ಫಿರೋಜಬಾದ, ಮೋಹನ ಹಳ್ಳಿ, ಸುಭಾಷ ಕಾಂಬಳೆ, ಮಲ್ಲಿಕಾರ್ಜನ ಹಳ್ಳಿ, ಮಿಲಿಂದ, ಲಕ್ಷ್ಮಿಕಾಂತ ಕುಸಾಳೆ, ಸತೀಶ ಸೇರಿದಂತೆ ಅನೇಕರು ಇದ್ದರು.