ಯಲ್ಲಾಲಿಂಗ ಮಹಾರಾಜರ 39ನೇ ಪುಣ್ಯಾರಾಧನೆ ನಾಳೆ
ಯಲ್ಲಾಲಿಂಗ ಮಹಾರಾಜರ 39ನೇ ಪುಣ್ಯಾರಾಧನೆ ನಾಳೆ
ಚಿತ್ತಾಪೂರ: ತಾಲ್ಲೂಕಿನ ದಂಡೋತಿ ಗ್ರಾಮದಲ್ಲಿ ಗ್ರಾಮದ ಸಮಸ್ತ ಸದ್ಭಕ್ತ ಮಂಡಳಿಯಿಂದ ಫೆ.4 ಮತ್ತು 5 ರಂದು ಮುಗಳಖೋಡದ ಲಿಂ.ಯಲ್ಲಾಲಿಂಗ ಮಹಾರಾಜರ 38ನೇ ಪುಣ್ಯಾರಾಧನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ನಾರಾಯಣ ಹಡಪದ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪುಣ್ಯಾರಾಧನೆ ಕಾರ್ಯಕ್ರಮದ ನಿಮಿತ್ತ ವಿಶೇಷ ಪೂಜೆ, ಆರಾಧನೆ ನಡೆಯಲಿದೆ. ಭಕ್ತರಿಗೆ ಪ್ರಸಾದ ವ್ಯವಸ್ಥೆ ಇರುತ್ತದೆ. ವಿಶೇಷ ಭಜನಾ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಮುಗಳಖೋಡದ ಅಪ್ಪಾಜಿ ಸಂಗೀತ ಬಳಗದ ತಂಡವು ಭಜನಾ ಕಾರ್ಯಕ್ರಮ ನಡೆಸಲಿದೆ. ಖ್ಯಾತ ಗಾಯಕ ಅಶೋಕ ಕುಮಾರ ಮನಗೋಳಿ, ತಬಲಾ ವಾದಕ ಆನಂದ ಆಳಂದ, ಡೋಲಕ್ ವಾದಕ ನೂರುದ್ದಿನ್ ಬೈಲಹೊಮಗಲ, ಪ್ಯಾಡ್ ವಾದಕ ವಲಿ ಬೈಲಹೊಂಗಲ ಅವರು ಭಜನಾ ಕಾರ್ಯಕ್ರಮ ನಡೆಸಿಕೊಡುವರು. ಎರಡು ದಿನ ನಡೆಯುವ ವಿಶೇಷ ಭಜನಾ ಹಾಡುಗಾರಿಕೆ ಕಾರ್ಯಕ್ರಮದಲ್ಲಿ ಲಿಂ.ಯಲ್ಲಾಲಿಂಗ ಮಹಾರಾಜರ ಭಕ್ತರು ಸಂಗೀತ ಪ್ರಿಯರು, ಭಜನಾ ಹಾಡುಗಾರಿಕೆ ಆಸಕ್ತರು ಆಗಮಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.