ದೇಶದ ಸ್ವಾತಂತ್ರ್ಯ ಚಳವಳಿಗೆ ಬಿರ್ಷಾ ಮುಂಡಾ ಕೊಡುಗೆ: ಡಾ. ಶಿವಪ್ರಸಾದ
ಸಿಯುಕೆಯಲ್ಲಿ ಜನಜಾತಿಯ ಗೌರವ್ ದಿನಾಚರಣೆ
ದೇಶದ ಸ್ವಾತಂತ್ರ್ಯ ಚಳವಳಿಗೆ ಬಿರ್ಷಾ ಮುಂಡಾ ಕೊಡುಗೆ: ಡಾ. ಶಿವಪ್ರಸಾದ
ಆಳಂದ: ಭಾರತೀಯ ಸ್ವಾತಂತ್ರ್ಯ ಚಳವಳಿಗೆ ಬಿರ್ಸಾ ಮುಂಡಾ ಅವರ ಕೊಡುಗೆ ಬಹಳ ಮಹತ್ವದ್ದಾಗಿದೆ" ಎಂದು ಹೈದರಾಬಾದ್ ವಿಶ್ವವಿದ್ಯಾಲಯದ ಮಾನವಶಾಸ್ತ್ರದ ವಿಭಾಗದ ಪ್ರಾಧ್ಯಾಪಕ ಡಾ. ಆರ್. ಶಿವ ಪ್ರಸಾದ್ ಹೇಳಿದರು.
ತಾಲೂಕಿನ ಕಡಗಂಚಿ ಬಳಿಯಿರುವ ಕಲಬುರಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಬಾಗವಾನ್ ಬಿರ್ಷಾ ಮುಂಡಾ ಅವರ 150ನೇ ಜನ್ಮದಿನಾಚರಣೆಯ ಅಂಗವಾಗಿ ಆಯೋಜಿಸಿದ್ದ ಜನಜಾತಿಯ ಗೌರವ ದಿನದ ಆಚರಣೆಯ ಸಂದರ್ಭದಲ್ಲಿ ಮಾತನಾಡಿದರು.
ಬಿರ್ಸಾ ಮುಂಡಾ ಜಾರ್ಖಂಡ್ನ ಮುಂಡಾ ಬುಡಕಟ್ಟು ಸಮುದಾಯಗಳ ಮಹಾನ್ ನಾಯಕ. ಅವರು ಬ್ರಿಟಿಷರ ದಬ್ಬಾಳಿಕೆಯ ವಿರುದ್ಧ ಬುಡಕಟ್ಟು ಸಮುದಾಯಗಳನ್ನು ಒಗ್ಗುಡಿಸಿ ಹೋರಾಡಿದರು. ಬ್ರಿಟಿಷರು ಬುಡಕಟ್ಟು ಪ್ರದೇಶಗಳ ಸಂಪತ್ಭರಿತ ಸಂಪನ್ಮೂಲಗಳಿಂದ ಆಕರ್ಷಿತರಾದರು. ಜಮಿನ್ಧಾರಿ ಪದ್ಧತಿ, ಹಣದ ರೂಪದಲ್ಲಿ ತೆರಿಗೆ ಸಂಗ್ರಹ, ಖನಿಜ ಸಂಪನ್ಮೂಲಗಳ ಗಣಿಗಾರಿಕೆ, ಮುಖ್ಯವಾಹಿನಿಯ ಕಾನೂನು ವ್ಯವಸ್ಥೆಯನ್ನು ಪರಿಚಯಿಸುವ ಮೂಲಕ ಬ್ರಿಟಿಷರು ಹೊರಗಿನವರನ್ನು ಬುಡಕಟ್ಟು ಪ್ರದೇಶಗಳಿಗೆ ಕರೆತಂದರು ಮತ್ತು ಬುಡಕಟ್ಟು ಜನರು ತಮ್ಮ ಸ್ವಂತ ನೆಲದಲ್ಲಿ ಹೊರಗಿನವರನ್ನಾಗಿ ಮಾಡಿದರು. ಬ್ರಿಟಿಷರ ಮತ್ತು ಜಮಿಂದ್ದಾರರ ಬುಡಕಟ್ಟು ಸಮುದಾಯಗಳ ಶೋಷಣೆಯನ್ನು ಚಿಕ್ಕ ಹುಡುಗ ಬಿರ್ಸಾ ಮುಂಡಾ ಕಣ್ಣಾರೆ ಕಂಡರು. ಅವರು ಬ್ರಿಟಿಷರು ಮತ್ತು ಜಮಿಂದ್ದಾರರ ಶೋಷಣೆಯ ಬಗ್ಗೆ ಬುಡಕಟ್ಟು ಜನಾಂಗದವರಲ್ಲಿ ಅರಿವು ಮುಡಿಸಿದರು ಮತ್ತು ಬ್ರಿಟಿಷರ ವಿರುದ್ಧ ಹೋರಾಡಲು ಅವರನ್ನು ಸಜ್ಜುಗೊಳಿಸಿದರು. ಬಿರ್ಷಾ ಮುಂಡಾ ಅವರ ಹೋರಾಟದಿಂದಾಗಿ ಬ್ರಿಟಿಷರು ಭೂ ಹಿಡುವಳಿ ಮತ್ತು ಬುಡಕಟ್ಟು ಹಕ್ಕುಗಳಲ್ಲಿ ಅನೇಕ ಸುಧಾರಣೆಗಳನ್ನು ತರಬೇಕಾಯಿತು. ಅವರನ್ನು ಬ್ರಿಟಿಷರು ಬಂಧಿಸಿದರು ಮತ್ತು 25 ನೇ ವಯಸ್ಸಿನಲ್ಲಿ ಬ್ರಿಟಿಷ್ ವಶದಲ್ಲಿ ನಿಧನರಾದರು. ಆದರೆ ಅವರು ಭಾರತದಲ್ಲಿ ಬುಡಕಟ್ಟು ಸಮುದಾಯಗಳ ನಾಯಕರಾಗಿ ಹೊರಹೊಮ್ಮಿದರು. ಬುಡಕಟ್ಟು ಸಮುದಾಯಗಳನ್ನು ಸ್ವಾತಂತ್ರ್ಯ ಚಳವಳಿಗೆ ಕರೆತರಲು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಕೂಡ 1940 ರಿಂದ ಬಿರ್ಷಾ ದಿನವನ್ನು ಆಚರಿಸಲು ಪ್ರಾರಂಭಿಸಿತು” ಎಂದು ಅವರು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಸಿಯುಕೆಯ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ್ ಮಾತನಾಡಿ, ''ವಿದ್ಯಾರ್ಥಿಗಳು ನಮ್ಮ ನಾಡಿನ ಇತಿಹಾಸ, ಪರಂಪರೆ ಮತ್ತು ಸಂಸ್ಕೃತಿಯನ್ನು ತಿಳಿದುಕೊಳ್ಳಬೇಕು. ಸ್ವಾತಂತ್ರ್ಯ ಪೋರ್ವದಲ್ಲಿ ನಾವು ನಮ್ಮ ದೇಶದಲ್ಲಿಯೇ ಗುಲಾಮರಾಗಿದ್ದೆವು. ನಮ್ಮ ಪೂರ್ವಜರು ಮಾಡಿದ ತ್ಯಾಗದಿಂದ ಇಂದು ನಾವು ಸ್ವಾತಂತ್ರ್ಯವನ್ನು ಅನುಭವಿಸುತ್ತಿದ್ದೇವೆ. ಬಿರ್ಸಾ ಮುಂಡಾ ಮತ್ತು ಅನೇಕ ಬುಡಕಟ್ಟು ನಾಯಕರು ಭಾರತದ ಸ್ವಾತಂತ್ರ್ಯ ಚಳವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಸಿಯುಕೆ ಸಣ್ಣ ಭಾರತವಿದ್ದಂತೆ, ನಮ್ಮ ಸ್ವಾತಂತ್ರ್ಯ ಹೋರಾಟಗಾರರು ಕಲ್ಪಿಸಿದ ಸಮಾನತೆ, ಸಾಮರಸ್ಯ ಮತ್ತು ಬಲವಾದ ರಾಷ್ಟ್ರವನ್ನು ನಿರ್ಮಿಸಲು ನಾವೆಲ್ಲರೂ ಕೆಲಸ ಮಾಡಬೇಕು ಎಂದು ಹೇಳಿದರು.
ಪ್ರಭಾರಿ ಕುಲಸಚಿವ ಪ್ರೊ.ಚನ್ನವೀರ ಆರ್. ಎಂ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದ ಸಂಯೋಜಕ ಡಾ.ಡಿ.ಗೌತಮ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಂಗೀತ ವಿಭಾಗದ ವಿದ್ಯಾರ್ಥಿಗಳು ರಾಷ್ಟ್ರಗೀತೆ ಮತ್ತು ನಾಡಗೀತೆಯನ್ನು ಹಾಡಿದರು. ಪ್ರೊ.ವಿಜಯಕುಮಾರ್, ಪ್ರೊ.ಪಾಂಡುರಂಗ ಪತ್ತಿ, ಡಾ.ಜೊಹೇರ್, ಡಾ.ಲಿಂಗದೇವರು, ಪ್ರೊ.ದೇವರಾಜ್ ಸೇರಿದಂತೆ ಎಲ್ಲಾ ಡೀನ್ಗಳು, ಮುಖ್ಯಸ್ಥರು, ಸಂಯೋಜಕರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.