ಬಿಜೆಪಿ ಮುಖಂಡರಿಂದ ಕಾಮಗಾರಿ ವೀಕ್ಷಣೆ
ಬಿಜೆಪಿ ಮುಖಂಡರಿಂದ ಕಾಮಗಾರಿ ವೀಕ್ಷಣೆ
ವಾಡಿ: ಪಟ್ಟಣದ ಪುರಸಭೆಯ 15ನೇ ಹಣಕಾಸಿನ ಯೋಜನೆಯ ಅನುದಾನದಲ್ಲಿನ ವಾರ್ಡ್ ಸಂಖ್ಯೆ 02ರ ಚರಂಡಿ ಕಾಮಗಾರಿಯನ್ನು ಬಿಜೆಪಿ ಮುಖಂಡರು ಪರಿಶೀಲಿಸಿದರು.
ಈ ವೇಳೆ ಸ್ಥಳೀಯ ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಕಾಮಗಾರಿ ಬಗ್ಗೆ ಮಾಹಿತಿ ಮಾತನಾಡಿ ಪುರಸಭೆಗೆ ಕಳೆದ ಮೂರೂವರೆ ವರ್ಷಗಳಿಂದ ಚುನಾವಣೆ ನಡೆಯದ ಕಾರಣ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಬಿಡುಗಡೆಯಾಗುತ್ತಿರುವ ಕೋಟ್ಯಂತರ ರೂಪಾಯಿಗಳ ಅಭಿವೃದ್ಧಿ ಅನುದಾನ ವಾಪಸ್ ಹೋಗತ್ತಿದೆ.
24ರಿಂದ26 ವರೆಗೆ ₹4.58 ಕೋಟಿ ಅಭಿವೃದ್ಧಿ ಹಣ ಕೈತಪ್ಪಿದ ಮಾಹಿತಿ ಬಂದಿದೆ.
ಸುಮಾರು ಐವತ್ತು ಸಾವಿರ ಜನಸಂಖ್ಯೆ ಹೊಂದಿರುವ ವಾಡಿ ಪಟ್ಟಣ ಮೂಲಭೂತ ಸೌಕರ್ಯಗಳ ಕೊರತೆಯಿಂದ ಬಳಲುತ್ತಿದೆ.
ಶುದ್ಧ ಕುಡಿಯುವ ನೀರು, ಶೌಚಾಲಯ,ಚರಂಡಿ,ರಸ್ತೆ ಗಳಂತಹ ಅವಶ್ಯಕ ಸೌಕರ್ಯಗಳಿಗಾಗಿ ಜನ ಪರಿತಪಿಸುತ್ತಿದ್ದಾರೆ.
ಅಲ್ಪಸ್ವಲ್ಪ ಅನುದಾನದಲ್ಲಿ ನಡೆಯುತ್ತಿರುವ ಕಾಮಗಾರಿ ಯಾದರು ಗುಣಮಟ್ಟದಾಗಿ ಮಾಡಿ ಜನಸಾಮಾನ್ಯರಿಗೆ ಅನುಕೂಲವಾಗುವಂತೆ ನೋಡಿಕೊಳ್ಳಿ ಎಂದು ಗುತ್ತಿಗೆದಾರರಿಗೆ ತಾಕೀತು ಮಾಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ಹೀರಾ ನಾಯಕ,ವಿನಾಯಕ ರಾಠೋಡ, ರಾಜು ಚವ್ಹಾಣ, ಬೋಜು ಚವ್ಹಾಣ, ಸುನಿಲ್ ಚವ್ಹಾಣ, ಅಕ್ಷಯ ರಾಠೋಡ, ಗೋವಿಂದ ಚವ್ಹಾಣ ಸೇರಿದಂತೆ ಇತರರು ಇದ್ದರು.
