ಟೆಂಗಳಿ ಗ್ರಾಮದಲ್ಲಿ ವಚನ ಭಜನೆ ವಿಶೇಷ ಕಾರ್ಯಕ್ರಮ

ಟೆಂಗಳಿ ಗ್ರಾಮದಲ್ಲಿ ವಚನ ಭಜನೆ ವಿಶೇಷ ಕಾರ್ಯಕ್ರಮ

ಟೆಂಗಳಿ ಗ್ರಾಮದಲ್ಲಿ ವಚನ ಭಜನೆ ವಿಶೇಷ ಕಾರ್ಯಕ್ರಮ

ಕಲಬುರಗಿ ಜಿಲ್ಲೆ: ಟೆಂಗಳಿ ಗ್ರಾಮದ ಭೀಮೇಶ್ವರ ದೇವಸ್ಥಾನದಲ್ಲಿ ಅಂಡಗಿ ಮನೆತನದ ವತಿಯಿಂದ ಕಾರ್ತಿಕೋತ್ಸವದ ನಿಮಿತ್ತ ವಿಶೇಷ ಭಜನೆ ಕಾರ್ಯಕ್ರಮ ಆಯೋಜಿಸಲಾಯಿತು. ಈ ಕಾರ್ಯಕ್ರಮವನ್ನು ಸಾಮಾಜಿಕ ಮತ್ತು ಧಾರ್ಮಿಕ ಸೇವಾ ಸಂಸ್ಥೆಯಾದ ಅಂಡಗಿ ಪ್ರತಿಷ್ಠಾನ ಹಮ್ಮಿಕೊಂಡಿದ್ದು, ಬಸವಣ್ಣನವರ ವಚನಗಳನ್ನು ಭಜನೆಯ ರೂಪದಲ್ಲಿ ಗಾಯನ ಮಾಡುವ ಮೂಲಕ ವಿಶೇಷವಾಗಿ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಭಾಗವಹಿಸಿದ ಕಲಾವಿದರಿಗೆ ಕಾವಿ ಟೋಪಿ ಹಾಗೂ ಕೊರಳಲ್ಲಿ ಕಾವಿ ಟಾವಾಲ ಹಾಕಿ ಗೌರವಿಸಲಾಯಿತು. ಭಜನೆ ವೇಳೆ ಬಸವಣ್ಣನವರ ವಚನಗಳ ಮೂಲಕ ಭಕ್ತಿ ಮತ್ತು ಸಮಾಜಮುಖಿ ಸಂದೇಶಗಳನ್ನು ಹರಡುವ ಪ್ರಯತ್ನ ಗಮನಾರ್ಹವಾಗಿತ್ತು.

ಈ ಸಂದರ್ಭದಲ್ಲಿ ಭೀಮೇಶ್ವರ ದೇವಸ್ಥಾನ ಟ್ರಸ್ಟ್ ಸಮಿತಿಯ ಅಧ್ಯಕ್ಷ ವಿರೇಂದ್ರ ವಾಲಿ, ಅಂಡಗಿ ಪ್ರತಿಷ್ಠಾನದ ಅಧ್ಯಕ್ಷ ಶಿವರಾಜ ಅಂಡಗಿ, ಹಾರ್ಮೋನಿಯಂ ಕಲಾವಿದ ವಿಶ್ವನಾಥ ಬಾಳದೆ, ತಬಲಾ ಕಲಾವಿದ ಚಂದ್ರಶೇಖರ ಎಲೇರಿ ಸೇರಿದಂತೆ ಸಂಗಮೇಶ ಬೂದನಮಠ, ರಾಜು ಪಟೇದ, ಜಗು ಸ್ವಾಮಿ, ವಿನೋದಕುಮಾರ ಜನೇವರಿ, ಡಾ. ವಿವೇಕಾನಂದ ಬುಳ್ಳಾ, ಬಸವರಾಜ ಘಂಟಿ, ರೇವಣಸಿದ್ದಪ್ಪ ಕಲ್ಲಾ ಕಲ್ಲಹಿಪ್ಪರಗಿ, ಬಸವರಾಜ ಕಡಲಿ, ಶಿವಕುಮಾರ ನಾಗಶೆಟ್ಟಿ, ಭೀಮರಾವ ತುಪ್ಪದ, ಶಿವ ತೆಲಗಾಣಿ, ಶರಣಪ್ಪ ಮಠಪತಿ, ಜಗನ್ನಾಥ ಮಠಪತಿ ಹಾಗೂ ಮಲ್ಲಿಕಾರ್ಜುನ ಬಾರಿಗಿಡ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಕಾರ್ಯಕ್ರಮವು ಭಕ್ತಿ ಭಾವನೆ ಹಾಗೂ ಬಸವಣ್ಣನವರ ವಚನಗಳ ಸಾರವನ್ನು ಜನರಿಗೆ ತಲುಪಿಸುವಲ್ಲಿ ಯಶಸ್ವಿಯಾಯಿತು.