ಫ.ಗು. ಹಳಕಟ್ಟಿ 146 ನೇ ಜಯಂತೋತ್ಸವ ಸಮಿತಿ ಅಧ್ಯಕ್ಷರಾಗಿ ಚನ್ನಮಲಪ್ಪ ಯಳಸಂಗಿ ಆಯ್ಕೆ
ಆಧುನಿಕ ವಚನ ಸಾಹಿತ್ಯ ಪಿತಾಮಹ, ಕನ್ನಡ ವಚನ ಸಂರಕ್ಷಣಾ ಮೂರ್ತಿ ಫ.ಗು. ಹಳಕಟ್ಟಿ 146 ನೇ ಜಯಂತೋತ್ಸವ ಸಮಿತಿ ಅಧ್ಯಕ್ಷರಾಗಿ ಚನ್ನಮಲಪ್ಪ ಯಳಸಂಗಿ ಆಯ್ಕೆ
ಕಲಬುರಗಿ: ನಿವೃತ್ತ ಅಬಕಾರಿ ಅಧಿಕಾರಿ ಶ್ರೀ ಚನ್ನಮಲಪ್ಪ ಗುರುಲಿಂಗಪ್ಪ ಯಳಸಂಗಿ ಅವರನ್ನು, ಫ.ಗು. ಹಳಕಟ್ಟಿ ಅವರ 146 ನೇ ಜಯಂತೋತ್ಸವ ಆಚರಣಾ ಸಮಿತಿಯ ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ ಎಂದು ಕಲಬುರಗಿ ಜಿಲ್ಲಾ ಹಟಗಾರ ಸಮಾಜದ ಅಧ್ಯಕ್ಷ ಶ್ರವಣಕುಮಾರ ಮುನ್ನೂಳ್ಳಿ ತಿಳಿಸಿದ್ದಾರೆ.
ಪತ್ರಿಕಾ ಪ್ರಕಟಣೆಯಲ್ಲಿ ಈ ವಿಷಯ ತಿಳಿಸಿದ ಅವರು, ಕನ್ನಡ ನಾಡು-ನುಡಿ, ಸಾಹಿತ್ಯ ಮತ್ತು ಸಂಸ್ಕೃತಿಯ ಬೆಳವಣಿಗೆಗೆ ಅಪಾರ ಕೊಡುಗೆ ನೀಡಿದ ಫ.ಗು. ಹಳಕಟ್ಟಿ ಅವರ ಜಯಂತೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸುವ ಉದ್ದೇಶದಿಂದ ಚನ್ನಮಲಪ್ಪ ಯಳಸಂಗಿ ಅವರನ್ನು ಸಭೆಯಲ್ಲಿ ಸರ್ವ ಸಮ್ಮತವಾಗಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ ಎಂದರು.
ಸಮಾಜಮುಖಿ ಚಟುವಟಿಕೆಗಳಲ್ಲಿ ಕಳೆದ 15 ವರ್ಷಗಳಿಂದ ಸಮಾಜದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಶ್ರೀ ಚನ್ನಮಲ್ಲಪ್ಪ . ಗು. ಯಳಸಂಗಿ ಅವರ ನೇತೃತ್ವದಲ್ಲಿ ಜಯಂತೋತ್ಸವ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಸಂಘದ ಸಂಚಾಲಕರಾದ ನ್ಯಾಯವಾದಿ ಸತೀಶ್ ಜಮಖಂಡಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಸಮಾಜದ ಮುಖಂಡರು ಹಾಗೂ ಪದಾಧಿಕಾರಿಗಳು ಯಳಸಂಗಿ ಅವರಿಗೆ ಅಭಿನಂದನೆ ಸಲ್ಲಿಸಿ, ಅವರ ಅವಧಿಯಲ್ಲಿ ಜಯಂತೋತ್ಸವ ಕಾರ್ಯಕ್ರಮಗಳು ಯಶಸ್ವಿಯಾಗಿ ಜರುಗಲೆಂದು ಶುಭ ಹಾರೈಸಿದರು.
