ಅಜಿತ್ ಪವಾರ್ ಅಗಲುವಿಕೆ ಆಘಾತ ಸೃಷ್ಟಿಸಿದೆ : ಮಾಜಿ ಸಂಸದ ಉಮೇಶ್ ಜಾಧವ್ ಸಂತಾಪ ಕಲಬುರಗಿ:
ಅಜಿತ್ ಪವಾರ್ ಅಗಲುವಿಕೆ ಆಘಾತ ಸೃಷ್ಟಿಸಿದೆ : ಮಾಜಿ ಸಂಸದ ಉಮೇಶ್ ಜಾಧವ್ ಸಂತಾಪ
ಕಲಬುರಗಿ: ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಸಹಕಾರಿ ಧುರೀಣ ಅಜಿತ್ ಪವಾರ್ ವಿಮಾನ ಅಪಘಾತದಲ್ಲಿ ಮರಣ ಹೊಂದಿರುವ ವಿಷಯ ಮನಸ್ಸಿಗೆ ತುಂಬಾ ಆಘಾತ ಉಂಟುಮಾಡಿದೆ. ಅವರು ಮಹಾರಾಷ್ಟ್ರದಲ್ಲಿರುವ ಬಂಜಾರಾ ಸಮಾಜದ ಇಂದ್ರನಿಲ್ ನಾಯಕ್ ಅವರನ್ನು ಮಂತ್ರಿ ಮಾಡಿದ ಕೊಡುಗೆಯ ಋಣವನ್ನು ಸಮಾಜವು ಎಂದಿಗೂ ಮರೆಯುವುದಿಲ್ಲ. ಬಂಜಾರಾ ಸಮಾಜದ ಕಲ್ಯಾಣಕ್ಕಾಗಿ ಶ್ರಮ ಪಟ್ಟಿರುವ ಅಜಿತ್ ಪವಾರ್ ಅವರನ್ನು ಕಳೆದುಕೊಂಡು ಸಮಾಜಕ್ಕೆ ಕೂಡಾ ತುಂಬಲಾರದ ನಷ್ಟ ವಾಗಿದೆ ಎಂದು ಮಾಜಿ ಸಂಸದರಾದ ಡಾ. ಉಮೇಶ್ ಜಾಧವ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಬಾರಾಮತಿಯ ರಾಜಕೀಯ ಧುರೀಣ ಅಜಿತ್ ಪವಾರ್ ಮಹಾರಾಷ್ಟ್ರ ರಾಜ್ಯದಲ್ಲಿ ದೊಡ್ಡ ರಾಜಕೀಯ ಶಕ್ತಿಯಾಗಿ ಮಹಾನ್ ಕೊಡುಗೆ ನೀಡಿ ಸ್ಮರಣೀಯರಾಗಿದ್ದಾರೆ. ಎನ್ ಡಿಎ ಅಂಗ ಪಕ್ಷವಾಗಿ ರಾಜ್ಯವನ್ನು ಅಭಿವೃದ್ಧಿಯಲ್ಲಿ ಮುಂಚೂಣಿಗೆ ತರುವಲ್ಲಿ ಇವರ ಪಾತ್ರ ಮಹತ್ತರವಾದುದು. ಅಗಲಿದ ಅವರ ಆತ್ಮಕ್ಕೆ ಪರಮಾತ್ಮನು ಚಿರ ಶಾಂತಿ ಕರುಣಿಸಲಿ ಹಾಗೂ ಕುಟುಂಬದವರಿಗೆ ಅಗಲುವಿಕೆಯ ದುಃಖ ಸಹಿಸುವ ಶಕ್ತಿಯನ್ನು ನೀಡಲಿ ಎಂದು ಜಾಧವ್ ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.
ಕರ್ನಾಟಕ ಪ್ರದೇಶ ಬಂಜಾರಾ ಸೇವಾ ಸಂಘ ಬೆಂಗಳೂರು ಸಮಿತಿ ಕೂಡ ಅಜಿತ್ ಅವರ ಅಗಲಿಕೆಗೆ ಸಂತಾಪ ವ್ಯಕ್ತಪಡಿಸಿದೆ. ಬಂಜಾರಾ ಕಲಬುರಗಿ ಜಿಲ್ಲಾಧ್ಯಕ್ಷ ಬಿ ಬಿ ನಾಯಕ್,ಕಾರ್ಯದರ್ಶಿ ವಿನೋದ್ ಕುಮಾರ್ ಚೌಹಾಣ್ , ಪಾಲಿಕೆ ಸದಸ್ಯ ಕೃಷ್ಣ ನಾಯಕ್ , ಮಹೇಶ್ ಹಿರಾ ನಾಯಕ್ ಚವಾಣ್ ,ವಿಜಯ ಕುಮಾರ ರಾಠೋಡ್ ಶಾದಿಪುರ್, ಕಿಶೋರ್ ಜಾಧವ್, ಲವ್ ಕುಮಾರ್ ಚವಾಣ್ ಮತ್ತು ಲಂಬಾಣಿ ಸಮಾಜದ ಮುಖಂಡರುಗಳು ಸಂತಾಪ ವ್ಯಕ್ತಪಡಿಸಿದ್ದಾರೆ.
